ಕರ್ನಾಟಕ News

Discover the latest headlines in this section.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿಗಳಲ್ಲಿ ನಿಲ್ಲದ ಭ್ರಷ್ಟಾಚಾರ..!

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿಗಳಲ್ಲಿ ನಿಲ್ಲದ ಭ್ರಷ್ಟಾಚಾರ..!

ಕರವ ಸುಲಿಗಾರರ ಕೈಚಳಕಕ್ಕೆ ಸಾರ್ವಜನಿಕರು ಕಂಗಾಲುಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕೆಲ ವಲಯ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಖಾತಾ ಬದಲಾವಣೆ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳಲ್ಲಿ ಕಾನೂನು ನಿಯಮಗಳನ್ನು ಮೀರಿ ಕೆಲಸ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ವಿಶೇಷವಾಗಿ ಆ ಒಂದು ವಲಯ ಕಚೇರಿಯಲ್ಲಿ ನಡೆದಿರುವ ಎನ್ನಲಾದ ಖಾತಾ ಬದಲಾವಣೆ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೂಲ ಆಸ್ತಿ ಮಾಲೀಕರು ಮೃತಪಟ್ಟಿದ್ದು ವರ್ಷಗಳೇ ಕಳೆದಿದ್ದರೂ, ವಾರಸುದಾರರ ಸ್ಪಷ್ಟ ಅನುಮತಿ ಇಲ್ಲದೆ ಖಾತಾ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಸರ್ಕಾರದ ನಿಯಮಾನುಸಾರ ವಾರಸುದಾರರ ದಾಖಲೆ, ಅನುಮತಿ ಹಾಗೂ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಖಾತಾ ಬದಲಾವಣೆ ಆಗಬೇಕು. ಆದರೆ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳ ಜೊತೆ ಕೈಜೋಡಿಸಿದ ಕೆಲ ಮಧ್ಯವರ್ತಿಗಳು ಮತ್ತು ಕರವ ಸುಲಿಗಾರರು ತಮ್ಮ ಪ್ರಭಾವ ಬಳಸಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಈ ಪ್ರಕರಣದಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, “ಹಣ ಕೊಟ್ಟರೆ ಏನೂ ಸಾಧ್ಯ” ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪಟೇಲರಿಗೆ ಪಟ್ಟ ಕಟ್ಟುವವರು ಯಾರೂ ಇಲ್ಲದಂತಾಗಿದೆ” ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.ಮುಂದಿನ ಸುದ್ದಿಯಲ್ಲಿ ಆ ಕರ ವಸೂಲಿಗರರ ಯಾರು? ಹಾಗೂ ಆತ ಮಾಡಿದ ಘನಂದಾರಿ ಕೆಲಸಗಳಲ್ಲಿ ಈಗ ಹೊಸದೊಂದು ಕೆಲಸದ ಬಣ್ಣ  ಬಯಲಿಗೆ ಮುಂದಿನ ಸುದ್ದಿಯಲ್ಲಿ.

May 26, 2026 | 09:44 AM
153 0
ಬೆಂಗಳೂರಿಗೆ ಆಗಮಿಸಿದ ನಿತಿನ್ ನಬಿನ್ ಜೀ ಅವರಿಗೆ ಆತ್ಮೀಯ ಸ್ವಾಗತ

ಬೆಂಗಳೂರಿಗೆ ಆಗಮಿಸಿದ ನಿತಿನ್ ನಬಿನ್ ಜೀ ಅವರಿಗೆ ಆತ್ಮೀಯ ಸ್ವಾಗತ

ಪಬ್ಲಿಕ್ ರೈಡ್ ನ್ಯೂಸ್, ಪೀಣ್ಯ ದಾಸರಹಳ್ಳಿ:ಬೆಂಗಳೂರು ನಗರಕ್ಕೆ ಆಗಮಿಸಿದ ಬಿಜೆಪಿ ಮುಖಂಡ ನಿತಿನ್ ನಬಿನ್ ಜೀ ಅವರನ್ನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಗುರು ನಿಶ್ಚಲ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಗುರು ನಿಶ್ಚಲ್ ಅವರು ನಿತಿನ್ ನಬಿನ್ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು. ಭೇಟಿಯ ವೇಳೆ ಪಕ್ಷದ ಬೆಳವಣಿಗೆ, ಸಂಘಟನೆ ಬಲವರ್ಧನೆ ಹಾಗೂ ಕ್ಷೇತ್ರದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದು, ಆತ್ಮೀಯ ವಾತಾವರಣದಲ್ಲಿ ಸ್ವಾಗತ ಸಮಾರಂಭ ನಡೆಯಿತು.ವರದಿ : ಪಬ್ಲಿಕ್ ರೈಡ್ ನ್ಯೂಸ್

May 25, 2026 | 07:48 AM
29 0
ವಲಯ ಕಚೇರಿ ಸಂಖ್ಯೆ 10 ಅಕ್ರಮ “ಎ” ಖಾತಾ ಪ್ರಕರಣ : ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಸಾಧ್ಯವೇ...?

ವಲಯ ಕಚೇರಿ ಸಂಖ್ಯೆ 10 ಅಕ್ರಮ “ಎ” ಖಾತಾ ಪ್ರಕರಣ : ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಸಾಧ್ಯವೇ...?

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ ಸಂಖ್ಯೆ 10ರಲ್ಲಿ ಅಕ್ರಮವಾಗಿ “ಎ” ಖಾತಾ ಮಂಜೂರು ಮಾಡಿರುವ ಆರೋಪ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ನಿಯಮಬಾಹಿರವಾಗಿ ಅನುಮೋದನೆ ಇಲ್ಲದ ಸೈಟ್ಗಳಿಗೆ “ಎ” ಖಾತಾ ನೀಡಿರುವ ಆರೋಪದ ಹಿನ್ನೆಲೆ ಸಂಬಂಧಪಟ್ಟ ಸಹಾಯಕ ಆಯುಕ್ತರು ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಾನೂನು ತಜ್ಞರ ಅಭಿಪ್ರಾಯದ ಪ್ರಕಾರ, ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ನಿಯಮಬಾಹಿರವಾಗಿ ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಿದರೆ ಅಥವಾ ಅಕ್ರಮ ಮಂಜೂರಾತಿ ನೀಡಿದರೆ, ಅವರ ವಿರುದ್ಧ ವಿವಿಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ. ವಿಶೇಷವಾಗಿ ದಾಖಲೆ ತಿರುಚುವುದು, ಸುಳ್ಳು ಪ್ರಮಾಣಪತ್ರ ನೀಡುವುದು, ಅಧಿಕಾರ ದುರುಪಯೋಗ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವುದು ಸೇರಿದಂತೆ ಹಲವು ಅಂಶಗಳು ಸಾಬೀತಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗುವ ಸಾಧ್ಯತೆಯೂ ಇದೆ. ಯಾವ ರೀತಿಯ ಕ್ರಮ ಸಾಧ್ಯ...? ಕಾನೂನು ತಜ್ಞರ ಪ್ರಕಾರ ಕೆಳಕಂಡ ರೀತಿಯ ಕ್ರಮ ಕೈಗೊಳ್ಳಬಹುದು: ಇಲಾಖಾ ಮಟ್ಟದ ತನಿಖೆ (Departmental Inquiry) ಸಂಬಂಧಪಟ್ಟ ಕಡತಗಳು ಮತ್ತು “ಎ” ಖಾತಾ ದಾಖಲೆಗಳ ಪರಿಶೀಲನೆ ಅಕ್ರಮವಾಗಿ ಮಂಜೂರಾದ ಖಾತಾಗಳ ರದ್ದುಪಡಿಸುವ ಪ್ರಕ್ರಿಯೆ ಸಹಾಯಕ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಅಮಾನತು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸುವುದು ಭ್ರಷ್ಟಾಚಾರ ನಿಗ್ರಹ ದಳ ಅಥವಾ ಲೋಕಾಯುಕ್ತ ತನಿಖೆಗೆ ಶಿಫಾರಸು ನಗರಾಭಿವೃದ್ಧಿ ಹಾಗೂ ಮಹಾನಗರ ಪಾಲಿಕೆ ನಿಯಮಾವಳಿಗಳ ಪ್ರಕಾರ, ಅಧಿಕೃತ ಅನುಮೋದನೆ ಇಲ್ಲದ ಸೈಟ್ಗಳಿಗೆ “ಎ” ಖಾತಾ ನೀಡುವುದು ಗಂಭೀರ ಆಡಳಿತಾತ್ಮಕ ಉಲ್ಲಂಘನೆಯಾಗಿ ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಿರುವುದು ಸಾಬೀತಾದರೆ, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಮೋಸ, ದಾಖಲೆ ತಿರುಚುವಿಕೆ ಹಾಗೂ ಅಧಿಕಾರ ದುರುಪಯೋಗ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಅಕ್ರಮದ ಕುರಿತು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದಂತೆ, ವಿಷಯವು ರುದ್ರೇಶ್ ಘಾಳಿ ಅವರ ಗಮನಕ್ಕೂ ಬಂದಿರುವುದಾಗಿ ಮೂಲಗಳು ತಿಳಿಸಿವೆ. ಸಾರ್ವಜನಿಕ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಸಂಬಂಧಪಟ್ಟ ಕಡತಗಳ ಪರಿಶೀಲನೆಗೆ ಸೂಚನೆ ನೀಡಿರುವ ಮಾಹಿತಿ ಲಭ್ಯವಾಗಿದೆ. ವಲಯ ಕಚೇರಿ ಸಂಖ್ಯೆ 10ರಲ್ಲಿ 2024ರಿಂದ 2026ರವರೆಗೆ ಮಂಜೂರಾದ “ಎ” ಖಾತಾಗಳ ಸಂಪೂರ್ಣ ಪರಿಶೀಲನೆ ನಡೆಸಿ, ಅಕ್ರಮ ನಡೆದಿರುವುದು ಸಾಬೀತಾದರೆ ಸಂಬಂಧಪಟ್ಟ ಸಹಾಯಕ ಆಯುಕ್ತರು ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಾಲಿಕೆ ವಲಯದಲ್ಲಿ ಚರ್ಚೆಯಾಗುತ್ತಿದೆ. ಸಾರ್ವಜನಿಕರ ಆಗ್ರಹ ಏನು? ಸಾಮಾನ್ಯ ನಾಗರಿಕರಿಗೆ ಸಣ್ಣ ದಾಖಲೆ ಕೊರತೆಯಿದ್ದರೂ ಕಚೇರಿಗಳಲ್ಲಿ ತಿಂಗಳುಗಟ್ಟಲೆ ಅಲೆದಾಡಿಸುವ ವ್ಯವಸ್ಥೆ, ಆದರೆ ನಿಯಮಬಾಹಿರ ಸೈಟ್ಗಳಿಗೆ ಸುಲಭವಾಗಿ “ಎ” ಖಾತಾ ನೀಡಿರುವ ಆರೋಪಗಳು ಜನರ ಅಸಮಾಧಾನಕ್ಕೆ ಕಾರಣವಾಗಿವೆ. “ಹಣದ ಪ್ರಭಾವಕ್ಕೆ ಕಾನೂನು ಮಣಿದಿದೆಯೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಕ್ರಮವಾಗಿ ನೀಡಲಾದ “ಎ” ಖಾತಾಗಳನ್ನು ರದ್ದುಪಡಿಸಬೇಕು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆ ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದು ಇದೀಗ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

May 24, 2026 | 02:09 PM
220 0
ಜ್ಞಾನೋದಯ ಇಂಟರ್‌ನ್ಯಾಷನಲ್ (ಸಿಬಿಎಸ್ ಸಿ ) ಸ್ಕೂಲ್ ವತಿಯಿಂದ ಉಚಿತ ತಪಾಸಣಾ ಶಿಬಿರ ಅಯೋಜನೆ .

ಜ್ಞಾನೋದಯ ಇಂಟರ್‌ನ್ಯಾಷನಲ್ (ಸಿಬಿಎಸ್ ಸಿ ) ಸ್ಕೂಲ್ ವತಿಯಿಂದ ಉಚಿತ ತಪಾಸಣಾ ಶಿಬಿರ ಅಯೋಜನೆ .

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ನಾವು ಉತ್ತಮ ಅರೋಗ್ಯ ಹೊಂದಿರಲು ಕಾಲಕಾಲಕ್ಕೆ ದೇಹವನ್ನು ತಪಾಸಣಾ ಒಳಪಡಿಸಿದಾಗ ಪ್ರಾಥಮಿಕ ಹಂತದಲ್ಲೇ ರೋಗಪತ್ತೆ ಮಾಡಿ ಚಿಕಿತ್ಸೆ ಪಡೆದು ರೋಗ ಗುಣಪಡಿಸಿಕೊಳ್ಳಲು ಸಾಧ್ಯ ಹಾಗಾಗಿ ಶಾಲೆಗಳಲ್ಲಿ ಒಂದೇ ಕಡೆ ಅರೋಗ್ಯ ತಪಾಸಣೆ ಶಿಬಿರಗಳನ್ನು ಅಯೋಜನೆ ಮಾಡುವುದರಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುವುದರ ಜೊತೆಗೆ ಪೋಷಕರು ಹಾಗೂ ಮಕ್ಕಳಿಗೆ ಇದರಿಂದ ಪರಿಣಾಮಕಾರಿ ಪ್ರಯೋಜನ ಸಿಗಲಿದೆ ಎಂದು ಜ್ಞಾನೋದಯ ಇಂಟರ್‌ನ್ಯಾಷನಲ್ (ಸಿಬಿಎಸ್ ಸಿ ) ಸ್ಕೂಲ್ ಕಾರ್ಯದರ್ಶಿ ಹಾಗೂ ಬೆಂಗಳೂರು ವಕೀಲ ಸಾಹಿತ್ಯ ಕೂಟದ ಅಧ್ಯಕ್ಷರು,ವಕೀಲರಾದ ಜಗದೀಶ್ ಎಲ್ ತಿಳಿಸಿದರು.ಶ್ರೀ ಮೈಲಾರಲಿಂಗೇಶ್ವರ ಎಜುಕೇಷನಲ್‌ ಟ್ರಸ್ಟ್ ನ ಜ್ಞಾನೋದಯ ಇಂಟರ್‌ನ್ಯಾಷನಲ್ (ಸಿಬಿಎಸ್ ಸಿ ) ಸ್ಕೂಲ್ ಕಾರ್ಯದರ್ಶಿ ಹಾಗೂ ಬೆಂಗಳೂರು ವಕೀಲ ಸಾಹಿತ್ಯ ಕೂಟದ ಅಧ್ಯಕ್ಷರು,ವಕೀಲರಾದ ಜಗದೀಶ್ ಎಲ್ ನೇತೃತ್ವದಲ್ಲಿ ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸಂಟೇನಿಯಲ್ ಸ್ಪಂದನ ಫೋರ್ಟೀಸ್ ಹಾಸ್ಪಿಟಲ್, ಯಶವಂತಪುರ, ಮುತ್ತೂಟ್ ಫೈನಾನ್ಸ್ ಮಣಿಪಾಲ್ ಹಾಸ್ಪಿಟಲ್, ಯಶವಂತಪುರ, ಅಪೋಲೋ ಕ್ರೆಡಲ್ ಸೆಂಟ್ ಥೆರೆಸಾ ಹಾರ್ಟ್ ಸೆಂಟರ್ ಕೆ.ಎಲ್.ಇ ಡೆಂಟಲ್ ಕಾಲೇಜ್ ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಪೀಣ್ಯ 2ನೇ ಹಂತದ ಶಾಂಭವಿನಗರ,ಜಿಕೆಡಬ್ಲ್ಯೂ ಲೇಔಟ್ ಪಾರ್ಕ್ ಹತ್ತಿರ, ಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತುಬಿ.ಪಿ/ಶುಗರ್ ಹಾಗೂ ಸಾಮಾನ್ಯ ರೋಗ ತಪಾಸಣೆ ,ಕಿವಿ, ಮೂಗು, ಗಂಟಲು ಹಾಗೂ ಚರ್ಮರೋಗ ತಪಾಸಣೆ,ಪೈಲ್ಸ್, ಹರ್ನಿಯಾ ಅಪೆಂಡಿಸೈಟಿಸ್ ತಪಾಸಣೆ ಮತ್ತು ಸಲಹೆ,ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ (ಉಚಿತ ಕನ್ನಡಕ ವಿತರಣೆ)ಹೃದಯರೋಗ ತಪಾಸಣೆ ಇ.ಸಿ.ಜಿ. ಪರೀಕ್ಷೆ,ಮಹಿಳೆಯರ ಗರ್ಭಕೋಶದ ಉಚಿತ ಪರೀಕ್ಷೆ ಮತ್ತು ಸಲಹೆ ಹಾಗೂಉಚಿತ ಔಷಧಿ ವಿತರಣೆ ಹಮ್ಮಿಕೊಳ್ಳಲಾಗಿತ್ತು.ಈ ಸಂಧರ್ಭದಲ್ಲಿ ರಾಜಗೋಪಾಲನಗರ ವಾರ್ಡ್ ಬಿಜೆಪಿ ಮುಖಂಡರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯ), ಮಾಜಿ ನಿರ್ದೇಶಕರು, ಸಮೃದ್ಧಿ ಫೌಂಡೇಶನ್ ಸಂಸ್ಥಾಪಕರಾದ ಬಿ ಎನ್ ದಿನೇಶ ಗೌಡ್ರು, ಭಾಜಪ ಮುಖಂಡರಾದ ಅರ್ ಸಿ ಹರೀಶ್ ,ಬೆ. ಉತ್ತರ ಜಿಲ್ಲಾ ಕಾರ್ಯಕರ್ತ ಚಿನ್ಮಯ್ ಜಿಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನಿರ್ದೇಶಕ ವಸಂತ್ ಶಾಲಾ ಅಡಳಿತ ಮಂಡಳಿ, ಶಿಕ್ಷಕರು, ಪೋಷಕರು ,ವಿದ್ಯಾರ್ಥಿಗಳು ಭಾಗವಹಿಸಿದ್ದರುವರದಿ : ಪಬ್ಲಿಕ್ ರೈಡ್ ದೇವರಾಜ್

May 24, 2026 | 12:53 PM
34 0
ದೇವೇಗೌಡರ 94 ನೇ ಜನ್ಮೋತ್ಸವದ ಅಂಗವಾಗಿ ಸಾವಿರಾರು ಜನರಿಗೆ ಭರ್ಜರಿ ನಾನ್ ವೆಜ್ ಊಟ.ಭಾರತರತ್ನ ಪುರಸ್ಕಾರ ನೀಡುವಂತೆ ಕೇಂದ್ರಕ್ಕೆ ಒತ್ತಾಯ.

ದೇವೇಗೌಡರ 94 ನೇ ಜನ್ಮೋತ್ಸವದ ಅಂಗವಾಗಿ ಸಾವಿರಾರು ಜನರಿಗೆ ಭರ್ಜರಿ ನಾನ್ ವೆಜ್ ಊಟ.ಭಾರತರತ್ನ ಪುರಸ್ಕಾರ ನೀಡುವಂತೆ ಕೇಂದ್ರಕ್ಕೆ ಒತ್ತಾಯ.

ಪಬ್ಲಿಕ್ ರೈಡ್ ನ್ಯೂಸ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜೇಶ್ವರಿನಗರದಲ್ಲಿ ಮಾಜಿ ನಗರಸಭೆ ಸದಸ್ಯ,ರಾಜ್ಯ ಜೆಡಿಎಸ್ ಕಾರ್ಯದರ್ಶಿಎಂ‌ ಶಿವಣ್ಣ ಹಾಗೂ ರಾಜಗೋಪಾಲನಗರ ವಾರ್ಡ್ ಹಾಗೂ ರಾಜೇಶ್ವರಿನಗರ ವಾರ್ಡ್ ಅಧ್ಯಕ್ಷ ಕೆ. ತಿಮ್ಮರಾಜು ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಜನ್ಮದಿನವನ್ನು ಬೃಹತ್ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹಬ್ಬದ ರೀತಿಯಲ್ಲಿ ಸಾವಿರಾರು ಜನಗಳಿಗೆ ಭರ್ಜರಿ ಬಾಡೂಟ ಏರ್ಪಡಿಸಿ ಆಚರಿಸಿದರು.ಈ ವೇಳೆ ಮಾಜಿ ನಗರಸಭೆ ಸದಸ್ಯ,ರಾಜ್ಯ ಕಾರ್ಯದರ್ಶಿಎಂ‌ ಶಿವಣ್ಣ ಮಾತನಾಡಿ ಇಡೀ ದೇಶದ ರಾಜಕಾರಣದಲ್ಲಿ ದೇವೇಗೌಡರು ಭೀಷ್ಮ ಇದ್ದಹಾಗೆ ,ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿಯಾಗಿದ್ದಾಗ ಅನೇಕ ನೀರಾವರಿ ಯೋಜನೆಗಳನ್ನು ತಂದು ಹಸಿರು ಕ್ರಾಂತಿಗೆ ಮುನ್ನಡಿ ಬರೆದವರು.ಅವರು ತಮ್ಮ ವಯಸ್ಸನ್ನು ಲೆಕ್ಕಿಸದೆ ಅನೇಕ ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯ ಕ್ರೀಯಾ ಶೀಲರಾಗಿ ಈ  ಇಳಿವಯಸ್ಸಿನಲ್ಲೂ ಕೂಡ ರಾಷ್ಟ್ರದ ರಾಜ್ಯದ ಪ್ರಗತಿಗೆ ,ರೈತರ ಏಳ್ಗಗೆಗೆ ಸದಾ ಶ್ರಮಿಸುತ್ತಿರುವ ಹಿರಿಯ ಜೀವ ದೇವೇಗೌಡರು ಅಂತವರಿಗೆ ಭಾರತ ರತ್ನ ಪುರಸ್ಕಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು  ರಾಜ್ಯದ ಎಲ್ಲಾ ರಾಜಕಾರಣಿಗಳು ಹಾಗೂ ಪಕ್ಷದ ಮುಖಂಡರು ಒತ್ತಾಯ ಮಾಡಬೇಕು ಎಂದು ತಿಳಿಸಿದರು ಈ ಸಂಧರ್ಭದಲ್ಲಿರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಅಂದಾನಪ್ಪರಾಜ್ಯ ವಕ್ತಾರರಾದ ದೇವರಾಜು,ಕ್ಷೇತ್ರದ ಅಧ್ಯಕ್ಷ ಎಂ ಮುನಿಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿ ಜಯಣ್ಣ,ಯೂತ್ ಜನತಾದಳದ ಅಧ್ಯಕ್ಷ ವಿನಯ್ ಎಂ ಶಿವಣ್ಣ, ಕ್ಷೇತ್ರದ ಮಹಿಳಾ ಅಧ್ಯಕ್ಷೆ ಛಾಯ, ಪಾರ್ವತಿನಗರ ವಾರ್ಡ್ ಅಧ್ಯಕ್ಷ ಶಿವೇಗೌಡ,ಚೊಕ್ಕಸಂದ್ರ ವಾರ್ಡ್ ಅಧ್ಯಕ್ಷ ಕದರೇಶ್,ಲಗ್ಗೆರೆ ವಾರ್ಡ್ ಜಿಬಿಎ ಆಕಾಂಕ್ಷಿ ಬೈರಪ್ಪ, ಜೆಡಿಎಸ್ ಮುಖಂಡರಾದ ಸಿಜೆ ರಮೇಶ್, ಕೆಂಪೇಗೌಡ ಅಭಿವೃದ್ಧಿ ಟ್ರಸ್ಟಿನ ಸದಸ್ಯ ಬಿಕೆ ಮಲ್ಲೇಶ್ ,ವೇಂಕಟೇಶ್, ಕೃಷ್ಣ ,ಶ್ರೀನಿವಾಸ್, ಸುಂದರ್, ವಿನಯ್ ಕೃಷ್ಣಪ್ಪ ,ಪ್ರಶಾಂತ್ ಕೌರವ,ಲೋಕಿ ,ಗಿರೀಶ್, ಶ್ರೀನಾಥ್, ನಾಗಭೂಷಣ್,ವರದಿ : ಪಬ್ಲಿಕ್ ರೈಡ್ ದೇವರಾಜ್

May 24, 2026 | 06:06 AM
22 0
"ಮಾರಮ್ಮ ದೇವಿ ಜಾತ್ರಾ ನಿಮಿತ್ಯ ಕಾಂಗ್ರೆಸ್ ಮುಖಂಡ ಆರ್  ಮುನಿರಾಜುನ ಮನೆಯ ಭೋಜನ ಕೂಟದಲ್ಲಿ  ಪಾಲ್ಗೊಂಡ ಮಾಜಿ ಶಾಸಕ ಆರ್ ಮಂಜುನಾಥ್ "

"ಮಾರಮ್ಮ ದೇವಿ ಜಾತ್ರಾ ನಿಮಿತ್ಯ ಕಾಂಗ್ರೆಸ್ ಮುಖಂಡ ಆರ್ ಮುನಿರಾಜುನ ಮನೆಯ ಭೋಜನ ಕೂಟದಲ್ಲಿ ಪಾಲ್ಗೊಂಡ ಮಾಜಿ ಶಾಸಕ ಆರ್ ಮಂಜುನಾಥ್ "

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ನೆಲಗೆದರನಹಳ್ಳಿಯ ಪ್ರಸಿದ್ಧ ಶಕ್ತಿ ದೇವತೆ ಮಾರಮ್ಮ ದೇವಿಯ ಪರಮ ಭಕ್ತರು ಗ್ರಾಮದ ಯುವ ಮುಖಂಡರು ಹಾಗೂ ಮಾಜಿ ನಗರ ಸಭಾ ಸದಸ್ಯೆ ಮರೇಮ್ಮ  ರಾಜಣ್ಣ ಪಂಡರಹಳ್ಳಿ ಅವರ ಸುಪುತ್ರ ಕಾಂಗ್ರೆಸ್ ಪ್ರಭಾವಿ ನಾಯಕ ಆರ್ ಮುನಿರಾಜು ಅವರು ತಮ್ಮ ತಂದೆ ತಾಯಿಯ ಪುರಾತನ ಕಾಲದಿಂದಲೂ ನಡೆದು ಕೊಂಡು ಬಂದ ಸಂಪ್ರದಾಯ ಮಾರ್ಗದರ್ಶದಂತೆ ತಾಯಿ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಆಚರಿಸಿಕೊಂಡು ಬರುವ ಮೂಲಕ ಸಹಸ್ರಾರು ಸಾರ್ವಜನಿಕ ಬಂದು ಭಗನಿಯರಿ ಗೆ ಪ್ರೀತಿಯ ಭೋಜನ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ  ಮಾಜಿ ಶಾಸಕ ಆರ್ ಮಂಜುನಾಥ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಶಾಲು ಹೊದಿಸಿ ಫಲಪುಷ್ಪ ದೊಂದಿಗೆ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಆರ್ ಮುನಿರಾಜು ಅವರ ಧರ್ಮಪತ್ನಿ ಮಕ್ಕಳು ಮತ್ತು ಕುಟುಂಬಸ್ಥರು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದು ಭೋಜನ ಸ್ವೀಕರಿಸಿ ಮುನಿರಾಜು ಅವರಿಗೆ  ಕುಟುಂಬಸ್ಥರಿಗೆ ಶುಭ ಹಾರೈಸಿದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 23, 2026 | 02:22 PM
40 0
ದಾಸರಹಳ್ಳಿ ಸಮಾಜಸೇವಕ ಎನ್ ಪಿ ಮುನಿಕೃಷ್ಣರವರ ಮನೆಗೆ ಶಾಸಕ ಎಸ್ ಮುನಿರಾಜು  ಸೌಹಾರ್ಧ ಭೇಟಿ.

ದಾಸರಹಳ್ಳಿ ಸಮಾಜಸೇವಕ ಎನ್ ಪಿ ಮುನಿಕೃಷ್ಣರವರ ಮನೆಗೆ ಶಾಸಕ ಎಸ್ ಮುನಿರಾಜು ಸೌಹಾರ್ಧ ಭೇಟಿ.

ಪಬ್ಲಿಕ್ ರೈಡ್ ನ್ಯೂಸ್ ಜಾತ್ರೆ ಹಬ್ಬ ಹರಿದಿನಗಳಲ್ಲಿ ನಮ್ಮ ಜನರು ಜಾತಿ, ಮತ, ಭೇದಗಳನ್ನೆಲ್ಲ ಮರೆತು ಎಲ್ಲರೂ ಒಂದಾಗಿ ಸೇರಲು ಸಹಕಾರಿ. ಈ ಭವ್ಯ ಆಚರಣೆಯು ನಮ್ಮ ಜನರ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಶ್ರೀ ಮಹೇಶ್ವರಮ್ಮ ದೇವಿಯು ನಮ್ಮ ದಾಸರಹಳ್ಳಿ ಕ್ಷೇತ್ರದ ಸಮಸ್ತ ಜನತೆಗೆ ಆಯಸ್ಸು,ಆರೋಗ್ಯ, ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ,ಹಾಗೂ ದಾಸರಹಳ್ಳಿಯಲ್ಲಿ   ದಂಪತಿಗಳು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲು ಶ್ರೀ ನೆಲೆ ಮಹೇಶ್ವರಮ್ಮನ ಕೃಪೆ ಅವರ ಮೇಲಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ', ಎಂದು ಶಾಸಕ ಎಸ್ ಮುನಿರಾಜು ಹೇಳಿದರು.ದಾಸರಹಳ್ಳಿ ವಾರ್ಡಿನ  ಸಮಾಜಸೇವಕರಾದ  ಎನ್‌.ಪಿ‌.ಮುನಿಕೃಷ್ಣ,ಶಿಲ್ಪಾ ಎನ್ ಪಿ ಮುನಿಕೃಷ್ಣರವರು ಕುಟುಂಬದವರು ಉರಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಭೋಜನ ಕೂಟದಲ್ಲಿ ಭಾಗವಹಿಸಿ ಉಭಯ ಕುಶಲೋಪರಿ ವಿಚಾರಿಸಿದರು. ಈ ವೇಳೆ ಶಾಸಕ ಎಸ್ ಮುನಿರಾಜು ರವರಿಗೆ ಶ್ರೀ ಸೀತಾರಾಮ ಲಕ್ಷ್ಮಣ ಸಮೇತ ಅಂಜನೇಯನ ವಿಗ್ರಹ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರು ಭಜಪ್ಪ, ರಿಷಿತ್ ಎಂ ಮುನಿಕೃಷ್ಣ, ಕೃಷ್ಣಪ್ಪ, ಬಾಬು ಸಿಂಗ್, ಆರ್ ಎಸ್ ಎಸ್ ಅಮರ್, ಎಂ. ಮುನಿರಾಜು, ವೇಮಾಚ ಲಾರೆಡ್ಡಿ, ಕೇಬಲ್ ಜಗದೀಶ್, ಇರ್ಫಾನ್, ಗಿಡ್ಡು, ಮಹೇಶ್ವರಿ ವಿನಾಯಕ ಗೆಳೆಯರ ಬಳಗದ ಚೇತನ್ ಕುಮಾರ್, ಶ್ರೀನಿವಾಸ್, ಚೇತನ್ ಕೃಷ್ಣಪ್ಪ, ನಾಗರಾಜು, ಸೂರಿ, ಪ್ರಸಾದ್ ಎಸ್, ಮಲ್ಲಿಕಾರ್ಜುನ್, ಯೋಗೇಂದ್ರ ನಾಥ್ ಸೇರಿದಂತೆ ಹಲವಾರು ಗಣ್ಯರು,ಕುಟುಂಬಸ್ಥರು, ನೂರಾರು ಸಂಖ್ಯೆಯಲ್ಲಿ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರುವರದಿ : ಪಬ್ಲಿಕ್ ರೈಡ್ ದೇವರಾಜ್

May 22, 2026 | 12:34 PM
28 0
ಎಂಇಐ ಬಡಾವಣೆಯ ಕುಂದು ಕೊರತೆಗಳ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ: ಶಾಸಕ ಎಸ್. ಮುನಿರಾಜು

ಎಂಇಐ ಬಡಾವಣೆಯ ಕುಂದು ಕೊರತೆಗಳ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ: ಶಾಸಕ ಎಸ್. ಮುನಿರಾಜು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಬಾಗಲಗುಂಟೆ ವಾರ್ಡ್ ಎಂಇಐ ಬಡಾವಣೆಯಲ್ಲಿನ ಕುಂದು ಕೊರತೆಗಳನ್ನು ಬಗೆಹರಿಸಲು ಎಲ್ಲಾ ವಿಭಾಗದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ಸೂಕ್ತ ಕ್ರಮ ವಹಿಸಬೇಕು ಎಂದು ಶಾಸಕ ಎಸ್. ಮುನಿರಾಜು ಅಧಿಕಾರಿಗಳಿಗೆ ಸೂಚಿಸಿದರು.      ಎಂಇಐ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ್ ಗೌಡ್ರು ನೇತೃತ್ವದಲ್ಲಿಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಶಾಸಕ ಮುನಿರಾಜು ಅವರು ಇಂದು ಸ್ಥಳ ಪರಿಶೀಲಿಸಿದರು.      ಕಸದ ಸಮಸ್ಯೆ,ನೂತನ ಮನೆ ಕಟ್ಟುವವರ ಮನೆಯ ನಕ್ಷೆ ಪರಿಶೀಲನೆ, ಚರಂಡಿಯಲ್ಲಿ ಮಣ್ಣು ಸುರಿಯುವವರ ವಿರುದ್ಧ ಕ್ರಮ, ಉದ್ಯಾನದ ಪಕ್ಕದ ರಸ್ತೆಗಳಲ್ಲಿ ವಾರಗಟ್ಟಲೆ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ, ವಿದ್ಯುತ್ ತಂತಿಗಳಿಗೆ ಅಡ್ಡಿಪಡಿಸುವ ಕೊಂಬೆಗಳ ಕತ್ತರಿಸುವಿಕೆ, ಬಿಬಿಎಂಪಿ ಹಿಂಭಾಗದ ಗ್ರೌಂಡ್ ಸುತ್ತಲೂ ತಂತಿ ಬೇಲಿ ಮತ್ತು ಗೇಟ್ ಅಳವಡಿಕೆ, ಉದ್ಯಾನದಲ್ಲಿರುವ ಶೌಚಾಲಯ ಬಳಸಲು ಸರಿಪಡಿಸುವುದು, ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ಕ್ರಮ ಇನ್ನು ಮುಂತಾದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಆಯಾ ವಿಭಾಗದ ಅಧಿಕಾರಿಗಳಿಗೆ ಶಾಸಕ ಎಸ್ ಮುನಿರಾಜು ಖಡಕ್ ಸೂಚನೆ ನೀಡಿದರು.       ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದಗುರು ಪ್ರಸಾದ್,ಲಕ್ಷ್ಮೀ ವೆಂಕಟೇಶ, ಕೃಷ್ಣಮೂರ್ತಿ, ಮಧುಸೂದನ್ ಸೇರಿದಂತೆ ಜಿಬಿಎ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು,ಸಂಚಾರ ಪೋಲೀಸರು ಹಾಗೂ ಸುತ್ತಮುತ್ತಲ ನಿವಾಸಿಗಳು ಇದ್ದರು.ವರದಿ :  ಪಬ್ಲಿಕ್ ರೆಡ್ ದೇವರಾಜ್

May 22, 2026 | 12:31 PM
49 0
ಬಳ್ಳಾರಿಯಲ್ಲಿ ದುರಂತ ಪತಿ ಹಾಗೂ ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಬಳ್ಳಾರಿಯಲ್ಲಿ ದುರಂತ ಪತಿ ಹಾಗೂ ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಬಳ್ಳಾರಿ: ಪತಿ ಹಾಗೂ ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬರು ಡೆತ್ ನೋಟ್ ಬರೆದು ನೇಣಿಗೆ ಶರಣಾದ ದುರ್ಘಟನೆ ಬಳ್ಳಾರಿ ಜಿಲ್ಲೆಯ Kampli ಪಟ್ಟಣದಲ್ಲಿ ನಡೆದಿದೆ.ಐಶ್ವರ್ಯ (24) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯರಾಗಿರುವ ಪ್ರದೀಪ್ ಕುಮಾರ್ ಅವರು ಐಶ್ವರ್ಯಳನ್ನು ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.ಮದುವೆಯಾದ ದಿನದಿಂದಲೇ ಪತಿ ಪ್ರದೀಪ್ ಕುಮಾರ್ ಹಾಗೂ ಅತ್ತೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅತ್ತೆಯ ಕಿರುಕುಳ ಹೆಚ್ಚಾಗಿದ್ದರೂ ಪತಿ ಪತ್ನಿಯ ಬೆಂಬಲಕ್ಕೆ ನಿಲ್ಲದೆ ನಿರ್ಲಕ್ಷ್ಯ ವಹಿಸುತ್ತಿದ್ದನೆಂದು ಆರೋಪಿಸಲಾಗಿದೆ.ಮಾನಸಿಕ ಹಿಂಸೆ ತಾಳಲಾರದೆ ಬೇಸತ್ತ ಐಶ್ವರ್ಯ ತವರು ಮನೆಗೆ ಬಂದು ಆತ್ಮಹತ್ಯೆಗೆ ನಿರ್ಧಾರ ಮಾಡಿಕೊಂಡಿದ್ದು, ನೇಣಿಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಡೆತ್ ನೋಟ್‌ನಲ್ಲಿ ಆತ್ಮಹತ್ಯೆಗೆ ಕಾರಣಗಳನ್ನೂ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ Kampli Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತಿ ಪ್ರದೀಪ್ ಕುಮಾರ್ ಹಾಗೂ ಅವರ ತಾಯಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

May 20, 2026 | 03:57 AM
194 0
ಐತಿಹಾಸಿಕ ಮಹೇಶ್ವರಮ್ಮ  ದೇವಸ್ಥಾನದಲ್ಲಿ ಆರತಿ ಮೆರವಣಿಗೆ

ಐತಿಹಾಸಿಕ ಮಹೇಶ್ವರಮ್ಮ ದೇವಸ್ಥಾನದಲ್ಲಿ ಆರತಿ ಮೆರವಣಿಗೆ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ: ದಾಸರಹಳ್ಳಿ ಗ್ರಾಮದಲ್ಲಿ  ಐತಿಹಾಸಿಕ ಇತಿಹಾಸವಿರುವ  ಮಹೇಶ್ವರಮ್ಮ ದೇವರ ಜಾತ್ರೆಯು ಸೋಮವಾರದಿಂದ 21  ಗುರುವಾರದವರೆಗೆ ನಾಲ್ಕು ದಿನಗಳ ಕಾಲ ವೈಭವದಿಂದ ಜರುಗಲಿದೆ.ಮಂಗಳವಾರ ಧನಿನ ಮಾರಮ್ಮ ಮತ್ತು  ಮಹೇಶ್ವರಮ್ಮ ದೇವರ ರಥೋತ್ಸವದಲ್ಲಿ ಆರತಿ ಹೊತ್ತ ಭಕ್ತಾದಿಗಳು ದಾಸರಹಳ್ಳಿಯ ಉಮಾ ಮಹೇಶ್ವರಿ ದೇವಸ್ಥಾನದಿಂದ ಮೆಟ್ರೋ ಮಾರ್ಗವಾಗಿ ಕನ್ನಡ ಕಸ್ತೂರಿ ರಸ್ತೆಯ ಮಾರ್ಗದಲ್ಲಿ ದೇವರ ಮೆರವಣಿಗೆ ಮೂಲಕ ನೆಲೆ ಮಹೇಶ್ವರಮ್ಮ ದೇವಸ್ಥಾನದ ಹತ್ತಿರ ತೆರಳಿ ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ಹಾಯುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿದರು. ಸಂಜೆ ಚಪ್ಲಲಮ್ಮ ದೇವರಿಗೆ ಆರತಿ ಹಾಗೂ ಪೂಜಾ ಕಾರ್ಯಕ್ರಮ ಜರುಗಿತು.ಇದೇ ವೇಳೆ ಶಾಸಕ ಎಸ್. ಮುನಿರಾಜು ಅವರ ಕುಟುಂಬದವರು ಮೆರವಣಿಗೆಯಲ್ಲಿ ಭಾಗಿಯಾದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 19, 2026 | 04:26 PM
65 0
ಏಸ್ ಕಮ್ಮೂನಿಕೇಷನ್ ವತಿಯಿಂದ  3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಂಪರ್ ಕೊಡುಗೆಗಳ ಘೋಷಣೆ.

ಏಸ್ ಕಮ್ಮೂನಿಕೇಷನ್ ವತಿಯಿಂದ 3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಂಪರ್ ಕೊಡುಗೆಗಳ ಘೋಷಣೆ.

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ಏಸ್ ಕಮ್ಮೂನಿಕೇಷನ್  ಸಹೋದರರಾದ ದೇವರಾಜ್,ನವೀನ್, ರಮೇಶ್ ಮಾಲೀಕತ್ವದ  ನೆಲಗದರನಹಳ್ಳಿ ಮುಖ್ಯರಸ್ತೆ ಯಲ್ಲಿರುವ ಶೋ ರೂಂ ನಲ್ಲಿ 3 ನೇ ವರ್ಷದ ವಾರ್ಷಿಕೋತ್ಸವಕ್ಕೆ ಶಾಸಕ ಎಸ್. ಮುನಿರಾಜು ಆಗಮಿಸಿ ಶುಭಕೋರಿದರು.ಈಗಾಗಲೇ ಏಸ್ ಕಮ್ಮೂನಿಕೇಷನ್ ಹೋಮ್ ಅಪ್ಲೆಯನ್ಸಸ್ ಮತ್ತು ಪರ್ನೀಚರ್ಸ್ ಹಾಗೂ ಮೊಬೈಲ್ ಗಳ ಮೇಲೆ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ ಬಂಪರ್ ಕೊಡುಗೆಗಳ ಘೋಷಣೆ ಮಾಡಲಾಯಿತು.ಜೊತೆಗೆ ಝೀರೋ ಡೌಪೇಮಂಟ್ ನೊಂದಿಗೆ ವಿಥ್ಔಟ್ ಬಡ್ಡಿ ಆಪರ್ ನೀಡಲಾಯಿತು‌.ಗ್ರಾಹಕರ ಸೇವೆಯೆ ನಮ್ಮಗುರಿ ಎಂದುಕೊಂಡು ಒಂದು ಟಿವಿ ಕೊಂಡರೆ ಹೋಮ್ ಥೀಯೇಟರ್, ಅಥವಾ  ಸ್ಟಪ್ಲೈಜರ್  ಅಥವಾ ಡಿಸ್ ಹಾಗೂ ಪ್ರಿಜ್ಡ್ ತಗೊಂಡರೆಕುಕ್ಕರ್ ,ಮಿಕ್ಸಿ ,ಗ್ಯಾಸ್ ಸ್ಟವ್,ವಾಸಿಂಗ್ ಮೆಷಿನ್,ಕೊಂಡರೆ ಗ್ರೈಂಡರ್, ಅಥವಾ ಗ್ಯಾಸ್ ಸ್ಟವ್,ಹತ್ತು ಸಾವಿರಕ್ಕೂ ಹೆಚ್ಚು ಬೆಲೆಯ ಮೊಬೈಲ್ ಕೊಂಡರೆ ಹತ್ತು ಸಾವಿರದ ಬೆಲೆಯ 10ವಸ್ತುಗಳನ್ನು ಪರ್ನಿವರ್ಸ್ ಟೀಪಾಯ್, ಡ್ಸೆಂಸಿಂಗ್ ಟೇಬಲ್, ಬಿನ್ ಬ್ಯಾಗ್, ಉಚಿತವಾಗಿ  ನೀಡಲಾಗುವುದು. ಇದಕ್ಕೆ ಪಾನ್ ಕಾರ್ಡ್, ಅಧಾರ್ ಕಾರ್ಡ್ ಮಾತ್ರ ತಂದರೆ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದುಮಾಲೀಕರು ತಿಳಿಸಿದರು.ಈ ಸಂಧರ್ಭದಲ್ಲಿ ಚಿತ್ತನಟರಾದ ಮೇಘನಾ  ಗೋವಂಕರ,ಸುಶ್ಮಿತಾ ಜಗಪ್ಪ,ವಾಣಿಶ್ರೀ,ರೇಪರ್ಪ್ರಿಯಾಂಕಾ,ಶಶಿ ಕುಮಾರ್,ರಾಧ ಭಗವತ್,ಶೋಭರಾಜ್, ಓಂ ಪ್ರಕಾಶ್ ರಾವ್, ಮಿಮಿಕ್ರಿ ಗೋಪಿ ಬಿಗ್ ಬಾಸ್ ಕರಿಬಸಪ್ಪ,ಮಜಾಟಾಕೀಸ್ ವಿಶ್ವ ,ತುಕಾಲಿ ಸಂತುಜಾನ್ವಿ- ಬಿಗ್ ಬಾಸ್ ಸ್ಪರ್ಧಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 19, 2026 | 02:39 PM
99 0
ಹಳೆಯ ಎರಡು ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ? ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಆಗ್ರಹ

ಹಳೆಯ ಎರಡು ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ? ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಆಗ್ರಹ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಹಳೆಯ ಎರಡು ಪ್ರಮುಖ ವಿದ್ಯುತ್ ಮಾರ್ಗಗಳಾದ ನೆಲಮಂಗಲ ಉಪ ಕೇಂದ್ರದಿಂದ ಬೃಂದಾವನದ ಬಳಿ ಇರುವ ಗೋಪುರದವರೆಗೂ ಸದರಿ 110 ಕೆವಿ ವಿದ್ಯುತ್ ಮಾರ್ಗವನ್ನು 220 ಕೆವಿ ಮಾರ್ಗ ಹಾಗೂ ನೆಲಮಂಗಲ ಉಪಕೇಂದ್ರದಿಂದ 220/66 ಕೆವಿ ವಿದ್ಯುತ್ ಅನ್ನು ಪೀಣ್ಯ ಉಪಕೇಂದ್ರದವರೆಗೂ ಪ್ರಸ್ತುತವಿರುವ ಪೀಣ್ಯ ಉಪಕೇಂದ್ರಕ್ಕೆ ಸಂಪರ್ಕ 400/220 ಕೆವಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಯಿತು.ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಶಿವನಪುರ, ಗಜ್ಜಗದಹಳ್ಳಿ, ನಾರಾಯಣಪ್ಪನಪಾಳ್ಯ, ಹಾರೋಕ್ಯಾತನಹಳ್ಳಿ, ದೊಂಬರಹಳ್ಳಿ,ಲಕ್ಷ್ಮೀಪುರ, ಶ್ರೀಕಂಠಪುರ, ಕರಿವೋಬನಹಳ್ಳಿ, ತಿರುಮಲಾಪುರ, ದೊಡ್ಡಬಿದರೆಕಲ್ಲು ನೆಲಗದರನಹಳ್ಳಿ, ಶಿವಪುರ, ಚೊಕ್ಕಸಂದ್ರ ಮತ್ತು ಪೀಣ್ಯ 2ನೇ ಹಂತದ ಮೂಲಕ ಹಾದುಹೋಗಲಿದ್ದು ಹೊಸದಾಗಿ ನಿರ್ಮಿಸಲಾಗುವ ವಿದ್ಯುತ್ ಗೋಪುರಗಳ (Towers) ಜಾಗದ ನೈಜ ಭೂಮಾಲೀಕರಿಗೆ ನಿಯಮಾನುಸಾರ ಪರಿಹಾರ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶಿಸಿರುವ ಹಿನ್ನಲೆಯಲ್ಲಿ ಪೀಣ್ಯದ ಎಸ್.ಆರ್.ಎಸ್ ಹತ್ತಿರದ ಕೆಪಿಟಿಸಿಎಲ್ ಆವರಣದಲ್ಲಿ ಇಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಶೇ.30 ರಷ್ಟು ಪರಿಹಾರಕ್ಕೆ ಒಪ್ಪದ ಭೂ ಮಾಲೀಕರು ವಿರೋಧ ವ್ಯಕ್ತಪಡಿಸಿದರು.ಭೂ ಮಾಲೀಕ ಸಿದ್ದಗಂಗಯ್ಯ ಮಾತನಾಡಿ,' ಕೆಪಿಟಿಸಿಎಲ್ ಅವರು ಬಫರ್ ಜೋನ್ ಎಂದು 38 ಮೀಟರ್ ಅಗಲ ಜಮೀನು ಒತ್ತುವರಿ ಮಾಡಿ ಲಕ್ಷಾಂತರ ಜನರು ಕಟ್ಟಿರುವ ಮನೆ ಹಾಗೂ ನಿವೇಶನಗಳನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ.ಹೈಟೆನ್ಶನ್ ಎತ್ತರ ಮತ್ತು ಅಗಲ ಮಾಡುತ್ತಿದ್ದಾರೆ ನಮಗೆ ಯಾವುದೇ ಮಾಹಿತಿ ನೀಡದೆ ಪರಿಹಾರವನ್ನು ನೀಡದೆ ಅಕ್ರಮ ನಡೆಸುತ್ತಿದ್ದಾರೆ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಲಿ ಅಥವಾ ಸುರಂಗ ಕೊರೆದು ಅಂಡರ್ ಗ್ರೌಂಡ್ ಕೇಬಲ್ ಹಾಕಿ ಅಲ್ಲಲ್ಲಿ ಸಬ್ ಸ್ಟೇಷನ್ ಗಳನ್ನು ಮಾಡಲಿ, ಇದರಿಂದ ನಮ್ಮ ಆಕ್ಷೇಪಣೆ ಇಲ್ಲ' ಎಂದು ಆಗ್ರಹಿಸಿದರು.ತಿಪ್ಪೇನಹಳ್ಳಿ ಗ್ರಾಮದ ನಿವಾಸಿ ಲೋಕೇಶ್,' ಕೆಪಿಟಿಸಿಎಲ್ ನವರು ಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಜನರ ವಿರುದ್ಧ ಕೆಲಸ ಮಾಡುತ್ತಿರುವ ಕೆಪಿಟಿಸಿಎಲ್ ವಿರುದ್ಧ ದಿಕ್ಕಾರ ಹಾಕುತ್ತೇವೆ. ಪೊಲೀಸ್ ಇಲಾಖೆಯವರನ್ನು ಕರೆಸಿ ನಮಗೆ ಎದುರಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ. ನಾವು ಅಲ್ಲಿ ಕೆಲಸ ಮಾಡಲು ಬಿಡುವುದಿಲ್ಲ' ಎಂದು ವಿರೋಧ ವ್ಯಕ್ತಪಡಿಸಿದರು.ಸಭೆಯಲ್ಲಿ ಕೆಪಿಟಿಸಿಎಲ್ ಎಇಇ ಲತಾ, ಎಂಜಿನಿಯರ್ ಗಳಾದ ಸುಮ, ಸೌಮ್ಯ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಚಿಕ್ಕಸ್ವಾಮಿ, ಪ್ರಶಾಂತ್ ಹಾಗೂ ನೂರಾರು ಭೂಮಾಲೀಕರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 18, 2026 | 01:54 PM
82 0