ಇಂಡಿಯಾ News

Discover the latest headlines in this section.

ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಶಾಸಕ ಮಹೇಶ್ ತೆಂಗಿನಕಾಯಿ ಭೇಟಿ

ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಶಾಸಕ ಮಹೇಶ್ ತೆಂಗಿನಕಾಯಿ ಭೇಟಿ

ಹುಬ್ಬಳ್ಳಿ: ಪಶ್ಚಿಮ ಬಂಗಾಳದಿಂದ ಹುಬ್ಬಳ್ಳಿಯ ಮಾರ್ಗವಾಗಿ ಗೋವಾ ರಾಜ್ಯಕ್ಕೆ ನೂರಾರು ವಲಸಿಗರು ತೆರಳುತ್ತಿರುವ ಹಿನ್ನೆಲೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣಕ್ಕೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ತೆಂಗಿನಕಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಬಸ್ ನಿಲ್ದಾಣದಲ್ಲಿ ತಂಗಿದ್ದ ವಲಸಿಗರ ದಾಖಲಾತಿಗಳು, ಗುರುತಿನ ಚೀಟಿಗಳು ಹಾಗೂ ಪ್ರಯಾಣದ ಮಾಹಿತಿಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಶಾಸಕ ಮಹೇಶ್ ತೆಂಗಿನಕಾಯಿ ಸೂಚನೆ ನೀಡಿದರು. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.ವಲಸಿಗರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

May 23, 2026 | 02:40 PM
112 0
ಬೋರ್‌ವೆಲ್ ನೀರು ಸರಬರಾಜು ಯೋಜನೆಗೆ ಶಾಸಕ ಎಸ್. ಮುನಿರಾಜು ಚಾಲನೆ

ಬೋರ್‌ವೆಲ್ ನೀರು ಸರಬರಾಜು ಯೋಜನೆಗೆ ಶಾಸಕ ಎಸ್. ಮುನಿರಾಜು ಚಾಲನೆ

ಬೆಂಗಳೂರು: ಪೀಣ್ಯದಾಸರಹಳ್ಳಿ ಸಮೀಪದ ವಿವಿಧ ವಾರ್ಡ್‌ಗಳಲ್ಲಿ ಬೋರ್‌ವೆಲ್ ನೀರು ಹರಿಸುವ ವ್ಯವಸ್ಥೆಗೆ ಶಾಸಕ S. Muniraju ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಚೊಕ್ಕಸಂದ್ರ ವಾರ್ಡ್‌ನ ಸಿ.ಎಂ. ನಾಗರಾಜ್ ಅವರ ಮನೆ ಹತ್ತಿರ, ಮಾರುತಿನಗರದ ಎಂ.ಎಂ. ಬ್ರೆಟ್ ಸ್ಕೂಲ್ ಸಮೀಪ, ನೆಲಗೆದರನಹಳ್ಳಿ ವಾರ್ಡ್‌ನ ನಿಸರ್ಗ ಶಾಲೆಯ ಹಿಂಭಾಗ, ಶಿವಪುರ ವಾರ್ಡ್‌ನ ಪ್ರಕಾಶ್ ಅವರ ಮನೆ ಹತ್ತಿರ ಹಾಗೂ ಪಾರ್ವತಿನಗರ ವಾರ್ಡ್‌ನ ಪೈಪ್‌ಲೈನ್ ಪಾರ್ಕ್ ಸಮೀಪ ಬೋರ್‌ವೆಲ್‌ಗಳಿಂದ ನೀರು ಹರಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿ.ಎಂ. ನಾಗರಾಜು, ಸುರೇಶ್ ಗೌಡ, ವಿಜಯಕುಮಾರ್, ವೆಂಕಟೇಶ್ (ವೆಂಕಿ), ಎಂಜಿನಿಯರ್‌ಗಳಾದ ವೆಂಕಟೇಶ್ ಹಾಗೂ ಪ್ರವೀಣ್ ಸೇರಿದಂತೆ ಸ್ಥಳೀಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.ಸ್ಥಳೀಯ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.ವರದಿ : ಪಬ್ಲಿಕ್ ರೈಡ್ ದೇವರಾಜ

May 15, 2026 | 02:40 AM
15 0
"ಡಾ. ಸಂಗನ ಬಸಪ್ಪ ಬಿರಾದಾರ್ ಅವರಿಗೆ 'ಬಸವಶ್ರೀ ಕಾಯಕ' ಶ್ರೇಷ್ಠ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ"

"ಡಾ. ಸಂಗನ ಬಸಪ್ಪ ಬಿರಾದಾರ್ ಅವರಿಗೆ 'ಬಸವಶ್ರೀ ಕಾಯಕ' ಶ್ರೇಷ್ಠ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ"

ಪಬ್ಲಿಕ್ ರೈಡ್ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಸಮಾಜ ಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ಜನಪ್ರಿಯ ವ್ಯಕ್ತಿ ಮತ್ತು ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ಮತ್ತು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಗನ ಬಸಪ್ಪ ಬಿರಾದಾರ್ ಅವರಿಗೆ ಕಾಫಿ ನಾಡಿನ ಹೆಸರಾಂತ ಟ್ರಸ್ಟ್ ಗಳಲ್ಲಿ ಒಂದಾದ ನಾಟ್ಯ ಮಯೂರಿ ನೃತ್ಯ ಟ್ರಸ್ಟಿನ ಸಂಸ್ಥಾಪಕಿ ಅಧ್ಯಕ್ಷೆ ಪ್ರೇಮಾಂಜಲಿ ಆಚಾರ್ಯ ಕಾರ್ಯದರ್ಶಿ ಪುಷ್ಪಲತಾ ಶಿವಣ್ಣ ಮತ್ತು ಪದಾಧಿಕಾರಿಗಳು ಸದಸ್ಯರು ಒಳಗೊಂಡಂತೆ ಡಾ. ಸಂಗನ ಬಸಪ್ಪ ಬಿರಾದಾರ್ ಅವರನ್ನು ಗುರುತಿಸಿ ನಗರದ ಪ್ರತಿಷ್ಠಿತ ಕಲಾ ಮಂದಿರದಲ್ಲಿ ಒಂದಾದ ರವಿಂದ್ರ ಕಲಾ ಮಂದಿರದ ಪಕ್ಕದಲ್ಲಿರುವ ನಯನ ಸಭಾಂಗಣದಲ್ಲಿ ದಿನಾಂಕ ೨೩ ಮೇ ೨೦೨೬ ಶನಿವಾರದಂದು ಡಾ. ಬಿರಾದಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ನಾಟ್ಯ ಮಯೂರಿ ನೃತ್ಯ ಟ್ರಸ್ಟಿನ ಸಂಸ್ಥಾಪಕಿ ಅಧ್ಯಕ್ಷೆ ಪ್ರೇಮಾಂಜಲಿ ಆಚಾರ್ಯ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.ವರದಿ : ಪಬ್ಲಿಕ್ ರೈಡ್ ದೇವರಾಜ್

May 15, 2026 | 02:38 AM
18 0
ಬಾವಿಯಲ್ಲಿ ಸಿಲುಕಿದ್ದ ಮೂವರ ಜೀವ ರಕ್ಷಿಸಿದ ಕಾರ್ಕಳ ಅಗ್ನಿಶಾಮಕ ದಳ

ಬಾವಿಯಲ್ಲಿ ಸಿಲುಕಿದ್ದ ಮೂವರ ಜೀವ ರಕ್ಷಿಸಿದ ಕಾರ್ಕಳ ಅಗ್ನಿಶಾಮಕ ದಳ

ಕಾರ್ಕಳ: ಬಾವಿಯ ಮಣ್ಣು ತೆಗೆಯುವ ವೇಳೆ ಅಪಾಯಕ್ಕೆ ಸಿಲುಕಿದ್ದ ಮೂವರು ಕಾರ್ಮಿಕರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ತಾಲೂಕಿನ ಕುಕ್ಕುಂದೂರು ಅಶ್ವಥಪುರದಲ್ಲಿ ನಡೆದಿದೆ.ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ (52) ಎಂಬವರು ಬಾವಿಯ ಮಣ್ಣು ತೆಗೆಯುವ ಕೆಲಸಕ್ಕಾಗಿ ಬಾವಿಗೆ ಇಳಿದಿದ್ದರು. ಈ ವೇಳೆ ರಾಜೇಶ್ ಮೇಲಕ್ಕೆ ಬರುವ ಸಂದರ್ಭ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರನ್ನು ರಕ್ಷಿಸಲು ಮುಂದಾದ ಪವನ್ ಹಾಗೂ ಗೋಪಾಲ್ ನಾಯ್ಕ ಕೂಡ ಬಾವಿಯೊಳಗೆ ಸಿಲುಕಿಕೊಂಡಿದ್ದರು.ಘಟನೆಯ ಮಾಹಿತಿ ತಕ್ಷಣವೇ ಕಾರ್ಕಳ ಅಗ್ನಿಶಾಮಕ ದಳಕ್ಕೆ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ತುರ್ತು ಕಾರ್ಯಾಚರಣೆ ನಡೆಸಿದರು. ಅಪಾರ ಎಚ್ಚರಿಕೆ ಹಾಗೂ ಸಾಹಸ ಪ್ರದರ್ಶಿಸಿದ ಅಗ್ನಿಶಾಮಕ ಸಿಬ್ಬಂದಿ, ಬಾವಿಯೊಳಗೆ ಸಿಲುಕಿದ್ದ ಮೂವರನ್ನೂ ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.ಗಾಯಗೊಂಡಿದ್ದ ರಾಜೇಶ್ ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅಗ್ನಿಶಾಮಕ ದಳದ ಈ ತ್ವರಿತ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

May 12, 2026 | 09:59 AM
189 0
ತಮಿಳುನಾಡು ಕಾಂಗ್ರೆಸ್‌ನ ಪ್ರಮುಖ ನಿರ್ಧಾರ: ಡಿಎಂಕೆ ಮೈತ್ರಿಗೆ ಬ್ರೇಕ್‌, ಜೋಸೆಫ್ ವಿಜಯ್ ಅವರ ಟಿವಿಕೆಗೆ ಬೆಂಬಲ

ತಮಿಳುನಾಡು ಕಾಂಗ್ರೆಸ್‌ನ ಪ್ರಮುಖ ನಿರ್ಧಾರ: ಡಿಎಂಕೆ ಮೈತ್ರಿಗೆ ಬ್ರೇಕ್‌, ಜೋಸೆಫ್ ವಿಜಯ್ ಅವರ ಟಿವಿಕೆಗೆ ಬೆಂಬಲ

ಚೆನ್ನೈ: ತಮಿಳುನಾಡು ಕಾಂಗ್ರೆಸ್‌ ಸಮಿತಿಯು ಪ್ರಮುಖ ರಾಜಕೀಯ ನಡೆಯನ್ನು ತೋರಿದ್ದು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ಮೈತ್ರಿಕೂಡವನ್ನು ತೊರೆಯುವುದಾಗಿ ಘೋಷಿಸಿದೆ. ಅದೇ ವೇಳೆ, ಜೋಸೆಫ್ ವಿಜಯ್ ಅವರ ನೇತೃತ್ವದ ತಮಿಳಗ ವಿಜಯ್ ಕಳಗಂ (ಟಿವಿಕೆ) ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದೆ.ತಮಿಳುನಾಡು ಕಾಂಗ್ರೆಸ್‌ನ ಉಸ್ತುವಾರಿ ನಾಯಕರು ಸುದ್ದಿಗಾರರೊಂದಿಗೆ ಮಾತನಾಡಿ, “ಭಾರತದ ಸಂವಿಧಾನವನ್ನು ನಂಬದ ಯಾವುದೇ ಕೋಮುವಾದಿ ಶಕ್ತಿಗಳನ್ನು ಮೈತ್ರಿಕೂಟದಿಂದ ದೂರವಿಡುವ ಶರತ್ತಿನ ಮೇಲೆ ಮಾತ್ರ ನಾವು ಟಿವಿಕೆಗೆ ಬೆಂಬಲ ನೀಡಲಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.ಡಿಎಂಕೆ ಮೈತ್ರಿ ತೊರೆಯಲು ಕಾರಣವೇನು?ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ನೀತಿ ಮತ್ತು ಆಡಳಿತ ವಿಚಾರಗಳಲ್ಲಿ ಅಭಿಪ್ರಾಯ ಭೇದ ಉಂಟಾಗಿತ್ತು. ವಿಶೇಷವಾಗಿ, ಕೇಂದ್ರ ಸರ್ಕಾರದ ವಿರುದ್ಧದ ನಿಲುವುಗಳು ಮತ್ತು ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳ ಏರಿಕೆಯ ಬಗ್ಗೆ ಕಾಂಗ್ರೆಸ್‌ಗೆ ಅಸಮಾಧಾನ ಇತ್ತು. ಈ ಹಿನ್ನೆಲೆಯಲ್ಲಿ ಮೈತ್ರಿ ಮುಂದುವರಿಸುವುದು ಕಷ್ಟಕರವಾಗಿತ್ತು.ಟಿವಿಕೆ ಪರವಾಗಿ ಕಾಂಗ್ರೆಸ್ ನಿಲುವು:ನಟ, ರಾಜಕಾರಣಿ ಜೋಸೆಫ್ ವಿಜಯ್ ಅವರು ತಮಿಳಗ ವಿಜಯ್ ಕಳಗಂ ಮೂಲಕ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಸಂವಿಧಾನವನ್ನು ಎತ್ತಿಹಿಡಿಯುವುದು, ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪ್ರತಿಪಾದಿಸುವುದು ಟಿವಿಕೆಯ ಪ್ರಮುಖ ಅಜೆಂಡಾ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.“ಟಿವಿಕೆ ಸರ್ಕಾರ ರಚಿಸಿದರೆ, ಸಂವಿಧಾನ ವಿರೋಧಿ ಮತ್ತು ಕೋಮುವಾದಿ ಶಕ್ತಿಗಳನ್ನು ಪ್ರತಿಭಟಿಸುವಲ್ಲಿ ಅವರು ನಮ್ಮೊಂದಿಗೆ ಸಹಕರಿಸಬೇಕು. ಈ ಷರತ್ತು ಪೂರೈಸದಿದ್ದರೆ, ಬೆಂಬಲ ಹಿಂಪಡೆಯಲಾಗುವುದು” ಎಂದು ಅವರು ಹೇಳಿದ್ದಾರೆ.ರಾಜ್ಯ ಮತ್ತು ರಾಷ್ಟ್ರೀಯ ರಾಜಕಾರಣದ ಪರಿಣಾಮ:ಡಿಎಂಕೆ ಮೈತ್ರಿ ತೊರೆಯುವ ನಿರ್ಧಾರವು ತಮಿಳುನಾಡು ರಾಜಕಾರಣದಲ್ಲಿ ಅಲೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ಈ ನಡೆಯು ಇತರ ಮೈತ್ರಿ ಪಕ್ಷಗಳ ಮೇಲೂ ಪ್ರಭಾವ ಬೀರಬಹುದು. ಅದೇ ಸಮಯದಲ್ಲಿ, ಟಿವಿಕೆ ಪಡೆಯುವ ಬೆಂಬಲದಿಂದ ರಾಜ್ಯದಲ್ಲಿ ಮೂರನೇ ಧ್ರುವ ರಾಜಕಾರಣಕ್ಕೆ ಚಾಲನೆ ದೊರಕುವ ನಿರೀಕ್ಷೆಯಿದೆ.ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಪ್ರತಿಕ್ರಿಯೆ ಇನ್ನೂ ಬರಬೇಕಾಗಿದೆ. ಆದರೆ, ತಮಿಳುನಾಡು ಘಟಕದ ಈ ನಿರ್ಧಾರವು ಹೈಕಮಾಂಡ್‌ಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಮುಂದಿನ ದಿನಗಳಲ್ಲಿ ಟಿವಿಕೆ ಮತ್ತು ಕಾಂಗ್ರೆಸ್ ನಡುವಿನ ಸಮನ್ವಯತೆಯ ಮಾತುಕತೆಗಳು ಮುಂದುವರಿಯುವ ಸಾಧ್ಯತೆಯಿದೆ. ಇದರೊಂದಿಗೆ, ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಸಮೀಕರಣಗಳು ಸಂಪೂರ್ಣ ಬದಲಾಗುವ ಸೂಚನೆ ಕಂಡುಬಂದಿದೆ.

May 6, 2026 | 09:39 AM
71 0
“ಅಕೌಂಟ್ ಹೋಲ್ಡರ್ ತನ್ನಿ” – ಬ್ಯಾಂಕ್ ನಿರ್ಲಕ್ಷ್ಯಕ್ಕೆ ಸಿಟ್ಟಾದ ಸೋದರ, ಸತ್ತ ಅಕ್ಕನ ಅಸ್ಥಿಪಂಜರ ಹೊತ್ತುಕೊಂಡು ಬ್ಯಾಂಕ್ಗೆ!

“ಅಕೌಂಟ್ ಹೋಲ್ಡರ್ ತನ್ನಿ” – ಬ್ಯಾಂಕ್ ನಿರ್ಲಕ್ಷ್ಯಕ್ಕೆ ಸಿಟ್ಟಾದ ಸೋದರ, ಸತ್ತ ಅಕ್ಕನ ಅಸ್ಥಿಪಂಜರ ಹೊತ್ತುಕೊಂಡು ಬ್ಯಾಂಕ್ಗೆ!

ಭುವನೇಶ್ವರ: ಒಡಿಶಾದ ಖಿಯೋಂಜರ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕೇವಲ ₹20,000 ಉಳಿತಾಯ ಹಿಂಪಡೆಯಲು ಬ್ಯಾಂಕ್ ಅಧಿಕಾರಿಗಳ ಕ್ರೂರ ಸೂಕ್ಷ್ಮತೆಯೇ ಕಾರಣವಾಗಿ, ಬಡ ಆದಿವಾಸಿ ಸಹೋದರನೊಬ್ಬ ತನ್ನ ಸತ್ತ ಅಕ್ಕನ ಅಸ್ಥಿಪಂಜರವನ್ನು ಹೆಗಲ ಮೇಲೆ ಇಟ್ಟುಕೊಂಡು ಬ್ಯಾಂಕಿಗೆ ಆಗಮಿಸಿದ ಘಟನೆ ಸಂಭವಿಸಿದೆ. ಈ ದುರಂತ ಘಟನೆಯು ಸಂವೇದನಾಶೀಲತೆಯಿಲ್ಲದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ನಿಯಮಗಳ ಹಿಂದೆ ಅಡಗಿಕೊಳ್ಳುವ ನಮ್ಮ ವ್ಯವಸ್ಥೆಯ ಕ್ರೌರ್ಯವನ್ನು ಬಯಲಿಗೆಳೆದಿದೆ. ಖಿಯೋಂಜರ್ ಜಿಲ್ಲೆಯ ಪಟನಾ ಬ್ಲಾಕ್ನ ಮಾಲಿಪೋಸಿ ಗ್ರಾಮದ ದಿಯಾನಾಲಿ ಗ್ರಾಮದ ಜೀತು ಮುಂಡಾ (50) ಎಂಬವರು ತಮ್ಮ ಅಕ್ಕ ಕಳರಾ ಮುಂಡಾ ಅವರ ಖಾತೆಯಲ್ಲಿದ್ದ ಹಣ ತೆಗೆಯಲು ಹಲವಾರು ಬಾರಿ ಒಡಿಶಾ ಗ್ರಾಮೀಣ ಬ್ಯಾಂಕ್ನ ಮಾಲಿಪೋಸಿ ಶಾಖೆಗೆ ತೆರಳಿದ್ದರು. ಆದರೆ ಬ್ಯಾಂಕ್ ಅಧಿಕಾರಿಗಳು “ಅಕೌಂಟ್ ಹೋಲ್ಡರ್ನನ್ನೇ ಕರೆದುಕೊಂಡು ಬನ್ನಿ” ಎಂದು ಹಠ ಹಿಡಿದಿದ್ದರು. ಅಕ್ಕ ಕಳರಾ ಅವರು ಜನವರಿ 26, 2026 ರಂದು ನಿಧನರಾಗಿದ್ದರೂ, ಅವರ ಮರಣದ ವಿಚಾರವನ್ನು ಬ್ಯಾಂಕ್ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಕೊನೆಗೆ ಸೋದರ ಜೀತು ಮುಂಡಾ ಅವರಿಗೆ ಸಿಟ್ಟೇ ಬಂದಿತು. ಅವರು ಅಕ್ಕನ ಸಮಾಧಿ ತೋಡಿ, ಅವಳ ಅಸ್ಥಿಪಂಜರವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು, ಸುಮಾರು 3 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಬ್ಯಾಂಕ್ಗೆ ತಂದರು. ಬ್ಯಾಂಕಿನ ಆವರಣದಲ್ಲಿ ಅಸ್ಥಿಪಂಜರವನ್ನು ಇರಿಸಿ, "ನಿಮ್ಮ ಅಕೌಂಟ್ ಹೋಲ್ಡರ್ ಇಲ್ಲಿದ್ದಾಳೆ, ಹಣ ಕೊಡಿ!" ಎಂದು ಪ್ರತಿಭಟನೆ ಮಾಡಿದರು. ಈ ದೃಶ್ಯವನ್ನು ನೋಡಿ ಬ್ಯಾಂಕ್ ಸಿಬ್ಬಂದಿ ಬೆಚ್ಚಿಬಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪಟನಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಿರಣ್ ಪ್ರಸಾದ್ ಸಾಹು ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ, ಜೀತು ಮುಂಡಾ ಅವರನ್ನು ಸಮಾಧಾನಪಡಿಸಿದರು. "ಜೀತು ಒಬ್ಬ ಅನಕ್ಷರಸ್ಥ ಆದಿವಾಸಿ. ಅವನಿಗೆ 'ಲೀಗಲ್ ಹೇರ್' ಅಥವಾ 'ನಾಮಿನಿ' ಎಂದರೇನು ಎಂದು ತಿಳಿದಿಲ್ಲ. ಸತ್ತವರ ಖಾತೆಯಿಂದ ಹಣ ತೆಗೆಯುವ ವಿಧಾನವನ್ನು ಬ್ಯಾಂಕ್ ಅಧಿಕಾರಿಗಳು ಅವನಿಗೆ ಸರಿಯಾಗಿ ತಿಳಿಸುವಲ್ಲಿ ವಿಫಲರಾಗಿದ್ದಾರೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಜೀತು ಮುಂಡಾ ಅವರಿಗೆ ಸೂಕ್ತ ಕಾನೂನು ಪ್ರಕ್ರಿಯೆಗಳ ಮೂಲಕ ಹಣ ಪಡೆದುಕೊಳ್ಳಲು ಸಹಾಯ ಮಾಡುವ ಭರವಸೆಯನ್ನು ಪೊಲೀಸರು ನೀಡಿದರು. ನಂತರ, ಅಕ್ಕನ ಅಸ್ಥಿಪಂಜರವನ್ನು ಪೊಲೀಸರ ನೇರ ನಿಯಂತ್ರಣದಲ್ಲಿ ಪುನಃ ಸಮಾಧಿ ಮಾಡಲಾಯಿತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜೀತು ಮುಂಡಾ, "ನಾನು ಹಲವು ಬಾರಿ ಬ್ಯಾಂಕಿಗೆ ಓಡಾಡಿದ್ದೇನೆ. ಅವರು ನನಗೆ 'ಅಕೌಂಟ್ ಹೋಲ್ಡರನ್ನು ಕರೆದುಕೊಂಡು ಬಾ' ಎಂದು ಹೇಳುತ್ತಿದ್ದರು. ನಾನು ಅವಳು ಸತ್ತು ಹೋಗಿದ್ದಾಳೆ ಎಂದು ಹೇಳಿದರೂ ಅವರು ನನ್ನ ಮಾತು ಕೇಳಲಿಲ್ಲ. ಕೊನೆಗೆ frustration ನಿಂದ, ನಾನೇ ಅವಳ ಸಮಾಧಿ ತೋಡಿ ಸತ್ತ ಸಾಕ್ಷಿಯಾಗಿ ಅಸ್ಥಿಪಂಜರವನ್ನು ತಂದೆ" ಎಂದು ಕಣ್ಣೀರಿನಿಂದ ಹೇಳಿದ್ದಾರೆ. ಈ ಘಟನೆ ಸಂಭವಿಸಿದ ಬಳಿಕವೂ ಸ್ಥಳೀಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ (BDO) ಮನಸ್ ದಂಡಪತ್ ಅವರು "ನನಗೆ ಈ ಬಗ್ಗೆ ಇದೀಗ ತಿಳಿಯಿತು" ಎಂದು ಹೇಳುವ ಮೂಲಕ ತಮ್ಮ ನಿರ್ಲಕ್ಷ್ಯವನ್ನು ತೋರಿಸಿಕೊಂಡಿದ್ದಾರೆ. ಇದೇ ವೇಳೆ, ವಿದೇಶಿ ಮಾಧ್ಯಮಗಳು ಈ ಘಟನೆಯನ್ನು ಭಾರತದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದೆ. ಡಿಜಿಟಲ್ ಇಂಡಿಯಾ, ಜನ್-ಧನ್ ಖಾತೆಗಳ ಮೂಲಕ ಆರ್ಥಿಕ ಸೇರ್ಪಡೆ ಸೇರಿದಂತೆ ಹಲವಾರು ಯೋಜನೆಗಳು ಗ್ರಾಮೀಣ ಭಾರತದಲ್ಲಿ ಮಹತ್ತರ ಬದಲಾವಣೆ ತಂದಿವೆ. ಆದರೆ, ಇಂತಹ ಪ್ರತ್ಯೇಕ ಘಟನೆಗಳನ್ನು ದುರುಪಯೋಗಪಡಿಸಿಕೊಂಡು ಬಿಬಿಸಿಯಂತಹ ರಣಹದ್ದುಗಳು ಭಾರತದ ವಿರುದ್ಧ ತಪ್ಪು ಪ್ರಚಾರ ನಡೆಸುವುದು ಖಂಡನೀಯ.ಬ್ಯಾಂಕ್ ಅಧಿಕಾರಿಗಳ ಈ ಹೃದಯಹೀನ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಂತಹ ಅಧಿಕಾರಿಗಳನ್ನು ತಕ್ಷಣ ಉದ್ಯೋಗದಿಂದ ವಜಾಗೊಳಿಸಬೇಕು. ಮುಂದಿನ ದಿನಗಳಲ್ಲಿ ಯಾವುದೇ ಬಡ, ಅನಕ್ಷರಸ್ಥ ಮತ್ತು ಆದಿವಾಸಿ ಸಹೋದರ/ಸಹೋದರಿ ಇಂತಹ ಕ್ರೌರ್ಯವನ್ನು ಎದುರಿಸಬಾರದು. ವ್ಯವಸ್ಥೆಯ ನಿಯಮಗಳು ಮನುಷ್ಯರ ಸೇವೆಗಾಗಿ ಹೊರತು, ಅವರನ್ನು ದುಃಖದಲ್ಲಿ ಮುಳುಗಿಸಲು ಅಲ್ಲ ಎಂಬುದನ್ನು ಅರಿಯಬೇಕಾದ ಸಮಯ ಇದು.ಪೊಲೀಸರು ಮತ್ತು ಆಡಳಿತ ಮಂಡಳಿ ಜೀತು ಮುಂಡಾ ಅವರಿಗೆ ಕಾನೂನುಬದ್ಧವಾಗಿ ನ್ಯಾಯ ಒದಗಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

Apr 28, 2026 | 07:31 AM
378 0
ಕುಡಿದ ಮತ್ತಿನಲ್ಲಿ ಪತ್ನಿಯ ಶಿರಚ್ಛೇದ ಮಾಡಿ ತಲೆಯೊಂದಿಗೆ ಗ್ರಾಮದಲ್ಲಿ ಸುತ್ತಾಡಿದ ಪತಿ!

ಕುಡಿದ ಮತ್ತಿನಲ್ಲಿ ಪತ್ನಿಯ ಶಿರಚ್ಛೇದ ಮಾಡಿ ತಲೆಯೊಂದಿಗೆ ಗ್ರಾಮದಲ್ಲಿ ಸುತ್ತಾಡಿದ ಪತಿ!

ಕೊರ್ಬಾ (ಛತ್ತೀಸ್ಗಢ): ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಅತ್ಯಂತ ದಾರುಣ ಮತ್ತು ವಿಚಿತ್ರ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಪತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಆ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಗ್ರಾಮದಲ್ಲಿ ಸುತ್ತಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ.ಪ್ರಾಪ್ತ ಮಾಹಿತಿಯ ಪ್ರಕಾರ, ಕೊರ್ಬಾ ಜಿಲ್ಲೆಯ ಸಲಿಕ್ ರಾಮ್ ಯಾದವ್ (58) ಎಂಬಾತ ಮದ್ಯಪಾನ ಮಾಡಿದ ನಂತರ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳದ ಉತ್ತುಂಗದಲ್ಲಿ ಆಕೆಯ ಶಿರಚ್ಛೇದ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೆ, ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕವಾಗಿ ಗ್ರಾಮದಲ್ಲಿ ಸುತ್ತಾಡಿದ್ದಾನೆ.ಆತನ ಈ ಕ್ರೌರ್ಯವನ್ನು ಕಂಡು ಗ್ರಾಮಸ್ಥರು ದಿಗ್ಭ್ರಾಂತರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆರೋಪಿ ಸಲಿಕ್ ರಾಮ್ ಯಾದವ್ ಸ್ವತಃ ಪೊಲೀಸರ ಮುಂದೆ ಶರಣಾಗಿದ್ದಾನೆ.ಪೊಲೀಸರ ವಿಚಾರಣೆ ವೇಳೆ, ತನ್ನ ಪತ್ನಿ ತನ್ನ ಬಗ್ಗೆಯೇ ಅನುಮಾನ ಹೊಂದಿದ್ದಳು. ಇದೇ ತನ್ನ ಅಪರಾಧಕ್ಕೆ ಕಾರಣ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆಗಳನ್ನು ಕೈಗೊಂಡಿದ್ದಾರೆ. ಮೃತೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

Apr 24, 2026 | 02:15 PM
71 0
ಹೊಸಪೇಟೆ: ಲಾರಿ ಚಾಲಕನ ಅಜಾಗರೂಕತೆಗೆ ಉಸಿರು ಚೆಲ್ಲಿದ ಅಮಾಯಕರು – ಸರಣಿ ಅಪಘಾತದಲ್ಲಿ ನಾಲ್ವರು ಸಾವು

ಹೊಸಪೇಟೆ: ಲಾರಿ ಚಾಲಕನ ಅಜಾಗರೂಕತೆಗೆ ಉಸಿರು ಚೆಲ್ಲಿದ ಅಮಾಯಕರು – ಸರಣಿ ಅಪಘಾತದಲ್ಲಿ ನಾಲ್ವರು ಸಾವು

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕನಿಷ್ಠ ನಾಲ್ಕರಿಂದ ಐದು ಮಂದಿ ಅಮಾಯಕರು ಜೀವ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ.ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೆಳ್ಳುಳ್ಳಿ ತುಂಬಿ ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗ ಜಿಲ್ಲೆಯ ಕಡೆಗೆ ಲಾರಿಯೊಂದು ವೇಗವಾಗಿ ಸಾಗುತ್ತಿತ್ತು. ಈ ವೇಳೆ ಹನಮನಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿಯು ಬೈಕ್ಗೆ ಗುದ್ದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಬಳಿಕ ಆತಂಕಿತನಾದ ಚಾಲಕ, ಲಾರಿಯನ್ನು ವೇಗವಾಗಿ ಮುಂದೆ ಚಲಾಯಿಸಿದ್ದಾನೆ. ಡಣಾಯಕನಕೆರೆ ಗ್ರಾಮದ ಬಳಿಯ ಬಿಎಂಎಂ ಕಾರ್ಖಾನೆ ಬಳಿ ತಲುಪಿದಾಗ ಲಾರಿಯು ಬಸ್ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಲಾರಿ ಸಂಪೂರ್ಣವಾಗಿ ಫಲ್ಟಿಯಾಗಿ (ತಲೆಕೆಳಗಾಗಿ) ಅಲ್ಲಿದ್ದ ಕಾರಿನ ಮೇಲೆ ಬಿದ್ದು ಪುಡಿಪುಡಿಯಾಗಿದೆ.ಈ ಘಟನೆಯಲ್ಲಿ ಲಾರಿಯ ಕೆಳಗೆ ಸಿಲುಕಿದ ನಾಲ್ಕೈದು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತರಲ್ಲಿ ಬೈಕ್ ಸವಾರ ಕೂಡ ಒಬ್ಬನಾಗಿದ್ದಾನೆ. ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಎಸ್. ಜಾಹ್ನವಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜೆಸಿಬಿ ಸಹಾಯದಿಂದ ಬಿದ್ದ ಲಾರಿಯನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದೆ.ಸ್ಥಳದಲ್ಲಿ ಲಾರಿ ತೆರವು ಕಾರ್ಯಾಚರಣೆ ವೀಕ್ಷಿಸಲು ತಂಡೋಪತಂಡವಾಗಿ ಜನರು ಜಮಾಯಿಸಿದ್ದು, ನೆರೆದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.ಈ ಘಟನೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Apr 20, 2026 | 05:57 AM
111 0
ಬಸವಣ್ಣನವರ ವಚನಾಮೃತ ಮನುಕುಲಕ್ಕೆ ಮಾದರಿ: ಎಸ್. ಮುನಿರಾಜು

ಬಸವಣ್ಣನವರ ವಚನಾಮೃತ ಮನುಕುಲಕ್ಕೆ ಮಾದರಿ: ಎಸ್. ಮುನಿರಾಜು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ;' ಯಾವುದೇ ಜಾತಿ, ಧರ್ಮ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನತೆಯ ತತ್ವ ಸಾರಿ ಅಕ್ಷರ ಜ್ಞಾನ, ಅನ್ನ ದಾಸೋಹ, ಆಶ್ರಯ ನೀಡಿದ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು' ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.ಸಿಡೇದಹಳ್ಳಿಯ ಸರ್ಕಲ್ ನಲ್ಲಿ ಬಸವಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಎಚ್. ರಾಜು ನೇತೃತ್ವದಲ್ಲಿ ಆಯೋಜಿಸಲಾದ ಬಸವ ಜಯಂತಿ ಹಾಗೂ ಸಿದ್ದಗಂಗಾ ಶ್ರೀಗಳ 119ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿದರು.ಬಸವಣ್ಣನವರ ವಚನಾಮೃತ ಇಡೀ ಮನುಕುಲಕ್ಕೆ ಮಾದರಿಯಾಗಿದೆ. ಅದರಂತೆ ನಡೆದ ಸಿದ್ದಗಂಗಾ ಶ್ರೀಗಳ ಆದರ್ಶ ವ್ಯಕ್ತಿತ್ವ ಇಂದು ಸಮಾಜಕ್ಕೆ ಮಾದರಿಯಾಗಿದೆ' ಎಂದು ತಿಳಿಸಿದರು.ಅಧ್ಯಕ್ಷ ಪಿ.ಎಚ್. ರಾಜು ಮಾತನಾಡಿ,' ಶ್ರೀಗಳ ಆಶಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೆಳೆದು ಇಂದು ದೇಶ ವಿದೇಶದ ಮೂಲೆ ಮೂಲೆಗಳನ್ನು ನೆಲೆಸಿದ್ದಾರೆ. ಅಂತಹ ಶ್ರೀಗಳ ಜಯಂತೋತ್ಸವ ಇಂದು ಅವರ ಸ್ಮರಣೆಯಲ್ಲಿ ಆಚರಿಸಲಾಗುತ್ತಿದೆ' ಎಂದರು.ಈ ವೇಳೆ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಅನ್ನದಾನ, ಕೋಸಂಬರಿ ವಿತರಿಸಲಾಯಿತು.ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಅಶ್ವತ್ಥಪ್ಪ, ಸೋಲಾರ್ ಸುಬ್ಬಣ್ಣ, ಎಂ.ಬಿ. ದಯಾನಂದ್, ಸುಜಾತ ಮೇಲೇಗೌಡ, ಕೃಷ್ಣಮೂರ್ತಿ, ಮುರಳಿ, ಚಿಕ್ಕಸಂದ್ರ ಮೋಹನ್, ಲಾರಿ ಮುನಿರಾಜು, ಎಂ. ಬಸವರಾಜು, ರವಿ ಮತ್ತು ಪದಾಧಿಕಾರಿಗಳು ಇದ್ದರು. ವರದಿ: ಪಬ್ಲಿಕ್ ರೈಡ್ ದೇವರಾಜ್

Apr 19, 2026 | 11:40 AM
59 0
ಹಾರ್ಮೋಜ್ ಜಲಸಂಧಿ ಏಪ್ರಿಲ್ 27ರವರೆಗೆ ವಾಣಿಜ್ಯ ಹಡಗುಗಳಿಗೆ ಮುಕ್ತ: ಇರಾನ್ ಐತಿಹಾಸಿಕ ಘೋಷಣೆ

ಹಾರ್ಮೋಜ್ ಜಲಸಂಧಿ ಏಪ್ರಿಲ್ 27ರವರೆಗೆ ವಾಣಿಜ್ಯ ಹಡಗುಗಳಿಗೆ ಮುಕ್ತ: ಇರಾನ್ ಐತಿಹಾಸಿಕ ಘೋಷಣೆ

ಲೆಬನಾನ್-ಇಸ್ರೇಲ್ ತಾತ್ಕಾಲಿಕ ಕದನ ವಿರಾಮದ ಬೆನ್ನಲ್ಲೇ ಇರಾನ್ ಮಹತ್ವದ ನಿರ್ಧಾರ; ಟ್ರಂಪ್ ಸ್ವಾಗತಟೆಹ್ರಾನ್/ವಾಷಿಂಗ್ಟನ್:ಲೆಬನಾನ್ ಮತ್ತು ಇಸ್ರೇಲ್ ನಡುವಿನ 10 ದಿನಗಳ ತಾತ್ಕಾಲಿಕ ಕದನ ವಿರಾಮ ಗುರುವಾರ ಜಾರಿಗೊಂಡ ತಕ್ಷಣವೇ ಇರಾನ್ ಶುಕ್ರವಾರ ಅಚ್ಚರಿಯ ಘೋಷಣೆ ಮಾಡಿದೆ. ಹಾರ್ಮೋಜ್ ಜಲಸಂಧಿಯನ್ನು ಏಪ್ರಿಲ್ 27ರವರೆಗೆ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ ಎಂದು ಇರಾನ್ ತಿಳಿಸಿದೆ.ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ. “ಹಾರ್ಮೋಜ್ ಜಲಸಂಧಿಯು ಏಪ್ರಿಲ್ 27ರ ತನಕ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಪೂರ್ಣವಾಗಿ ಮುಕ್ತವಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕ್ಷಣ ಸ್ವಾಗತಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ “ಥ್ಯಾಂಕ್ ಯೂ” ಎಂದು ಸಂಕ್ಷಿಪ್ತವಾಗಿ ಪೋಸ್ಟ್ ಮಾಡಿರುವ ಟ್ರಂಪ್, ಪಶ್ಚಿಮ ಏಷ್ಯಾದ ಸಂಘರ್ಷವು ಶೀಘ್ರವೇ ಕೊನೆಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.ಲೆಬನಾನ್ ಮತ್ತು ಇಸ್ರೇಲ್ ನಡುವಿನ ತಾತ್ಕಾಲಿಕ ಕದನ ವಿರಾಮವು ಕೇವಲ 10 ದಿನಗಳ ಅವಧಿಗೆ ಮಾತ್ರವಾಗಿದ್ದು, ಗುರುವಾರದಿಂದ ಜಾರಿಯಲ್ಲಿದೆ. ಈ ಕದನ ವಿರಾಮದ ಬೆನ್ನಲ್ಲೇ ಇರಾನ್ ಮಾಡಿರುವ ಹಾರ್ಮೋಜ್ ಜಲಸಂಧಿ ಮುಕ್ತತೆಯ ಘೋಷಣೆಯು ಪ್ರಾದೇಶಿಕ ಸಮುದ್ರ ಮಾರ್ಗಗಳ ಸುರಕ್ಷತೆ ಮತ್ತು ವಾಣಿಜ್ಯ ಸಾಗಾಣಿಕೆಗೆ ಮಹತ್ವದ ಬೆಳವಣಿಗೆಯಾಗಿದೆ.ಹಾರ್ಮೋಜ್ ಜಲಸಂಧಿಯು ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾಗಿದ್ದು, ಇದರ ಮುಕ್ತತೆಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ತರುವ ನಿರೀಕ್ಷೆಯಿದೆ.**ಸಂಕ್ಷಿಪ್ತ ಸಾರಾಂಶ:**- ಇರಾನ್ ಹಾರ್ಮೋಜ್ ಜಲಸಂಧಿಯನ್ನು ಏಪ್ರಿಲ್ 27ರವರೆಗೆ ಎಲ್ಲಾ ವಾಣಿಜ್ಯ ಹಡಗುಗಳಿಗೆ ಮುಕ್ತಗೊಳಿಸಿದೆ.- ಲೆಬನಾನ್-ಇಸ್ರೇಲ್ ನಡುವಿನ 10 ದಿನಗಳ ತಾತ್ಕಾಲಿಕ ಕದನ ವಿರಾಮದ ಬೆನ್ನಲ್ಲೇ ಈ ಘೋಷಣೆ.- ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರ ಸ್ವಾಗತಿಸಿ ‘ಥ್ಯಾಂಕ್ ಯೂ’ ಪೋಸ್ಟ್ ಮಾಡಿದ್ದಾರೆ.- ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳ್ಳುವ ವಿಶ್ವಾಸವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.

Apr 18, 2026 | 06:52 AM
56 0
ಛತ್ರಪತಿ ಸಂಭಾಜಿನಗರದಲ್ಲಿ ಮೊಬೈಲ್ ಕಳವು ಪ್ರಯತ್ನ ವಿರೋಧಿಸಿದ ಯುವಕನ ಮೇಲೆ ಚಾಕು ದಾಳಿ

ಛತ್ರಪತಿ ಸಂಭಾಜಿನಗರದಲ್ಲಿ ಮೊಬೈಲ್ ಕಳವು ಪ್ರಯತ್ನ ವಿರೋಧಿಸಿದ ಯುವಕನ ಮೇಲೆ ಚಾಕು ದಾಳಿ

ಛತ್ರಪತಿ ಸಂಭಾಜಿನಗರ: ನಗರದ API ಕಾರ್ನರ್ ಪ್ರದೇಶದಲ್ಲಿ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ ದುಷ್ಕರ್ಮಿಗಳನ್ನು ವಿರೋಧಿಸಿದ ಯುವಕನೊಬ್ಬನ ಮೇಲೆ ಕ್ರೂರ ಚಾಕು ದಾಳಿ ನಡೆದಿದೆ. ಈ ಘಟನೆಯಲ್ಲಿ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಬಲಿಪಶುವನ್ನು ಕರಣ್ ಜಾಧವ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗುರುತಿಸಲಾಗದ ದುಷ್ಕರ್ಮಿಗಳು ಆತನ ಮೊಬೈಲ್ ಫೋನ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಕರಣ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಗಳು ತೀಕ್ಷ್ಣವಾದ ಚಾಕುವಿನಿಂದ ಕರಣ್ ಅವರ ಹೊಟ್ಟೆಗೆ ಇರಿತವನ್ನು ಮಾಡಿದ್ದಾರೆ.ತೀವ್ರ ಗಾಯಗೊಂಡ ಕರಣ್ ಅವರನ್ನು ತಕ್ಷಣ ಸ್ಥಳೀಯ MGM ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.ಘಟನೆಯ ಸಂಪೂರ್ಣ ಅನುಕ್ರಮವು ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯರ ಪ್ರಕಾರ, API ಕಾರ್ನರ್ ಪ್ರದೇಶದಲ್ಲಿ ಸಣ್ಣಪುಟ್ಟ ಕಳವು ಪ್ರಕರಣಗಳು ಸಾಮಾನ್ಯವಾಗಿದ್ದು, ಇದೀಗ ಹಿಂಸಾತ್ಮಕ ಘಟನೆ ನಡೆದಿರುವುದು ಆತಂಕ ಮೂಡಿಸಿದೆ.ಹೆಚ್ಚಿನ ತನಿಖೆ ಮುಂದುವರೆದಿದೆ.

Apr 16, 2026 | 07:19 AM
543 0
ಇಂದು ಬಿಹಾರಕ್ಕೆ ಮೊದಲ ಬಿಜೆಪಿ ಮುಖ್ಯಮಂತ್ರಿ, ಸಿಎಂ ರೇಸ್‌ನಲ್ಲಿ ಸಾಮ್ರಾಟ್‌ ಚೌಧರಿ?

ಇಂದು ಬಿಹಾರಕ್ಕೆ ಮೊದಲ ಬಿಜೆಪಿ ಮುಖ್ಯಮಂತ್ರಿ, ಸಿಎಂ ರೇಸ್‌ನಲ್ಲಿ ಸಾಮ್ರಾಟ್‌ ಚೌಧರಿ?

ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳಲಿದ್ದು, ಹಾಲಿ ಸಿಎಂ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿ ನಾಯಕ ಸಾಮ್ರಾಟ್‌ ಚೌಧರಿ ಸಿಎಂ ರೇಸ್‌ನಲ್ಲಿದ್ದು, ನಿತೀಶ್ ಪುತ್ರ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.ಹಿಂದಿ ಭಾಷಿಕ ಪ್ರದೇಶಗಳ ಪೈಕಿ ಇದುವರೆಗೂ ಬಿಜೆಪಿ ಮುಖ್ಯಮಂತ್ರಿ ಕಾಣದ ಏಕೈಕ ರಾಜ್ಯವಾಗಿದ್ದ ಬಿಹಾರ, ಮಂಗಳವಾರ ಮೊದಲ ಬಿಜೆಪಿ ಮುಖ್ಯಮಂತ್ರಿ ಆಯ್ಕೆಗೆ ಸಾಕ್ಷಿಯಾಗಲಿದೆ. ಹಾಲಿ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್‌ ಕುಮಾರ್‌ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಬಳಿಕ ಸರ್ಕಾರದ ನೇತೃತ್ವವನ್ನು ಬಿಜೆಪಿ ಮೊದಲ ಬಾರಿಗೆ ವಹಿಸಿಕೊಳ್ಳಲಿದೆ. ಬಿಜೆಪಿ ನಾಯಕ ಸಾಮ್ರಾಟ್‌ ಚೌಧರಿ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

Apr 14, 2026 | 07:17 AM
42 0