ಇಂಡಿಯಾ News

Discover the latest headlines in this section.

BLOಗಳು ಕಡ್ಡಾಯವಾಗಿ ಮನೆಗಳಿಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿಸಬೇಕು; ಧಾರ್ಮಿಕ ಸ್ಥಳಗಳಲ್ಲಿ ಪ್ರಕ್ರಿಯೆಗೆ ಅವಕಾಶವಿಲ್ಲ

BLOಗಳು ಕಡ್ಡಾಯವಾಗಿ ಮನೆಗಳಿಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿಸಬೇಕು; ಧಾರ್ಮಿಕ ಸ್ಥಳಗಳಲ್ಲಿ ಪ್ರಕ್ರಿಯೆಗೆ ಅವಕಾಶವಿಲ್ಲ

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ, ಮಸೀದಿ, ದೇವಸ್ಥಾನ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ SIR ಅರ್ಜಿಗಳನ್ನು ಭರ್ತಿ ಮಾಡುವುದು ಅಥವಾ ಸಂಗ್ರಹಿಸುವುದು ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಚುನಾವಣಾ ಆಯೋಗದ ಸೂಚನೆಯಂತೆ, ಬೂತ್ ಮಟ್ಟದ ಅಧಿಕಾರಿಗಳು (BLO) ಕಡ್ಡಾಯವಾಗಿ ಮತದಾರರ ಮನೆಗಳಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಅರ್ಜಿ ಭರ್ತಿ ಮಾಡಿಸಬೇಕು. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಮನೆ-ಮನೆಗೆ ಭೇಟಿ ಆಧಾರಿತವಾಗಿರಬೇಕು ಎಂದು ಸೂಚಿಸಲಾಗಿದೆ.ಧಾರ್ಮಿಕ ಸ್ಥಳಗಳನ್ನು ಅರ್ಜಿ ಸ್ವೀಕಾರ ಅಥವಾ ಭರ್ತಿಯ ಕೇಂದ್ರಗಳಾಗಿ ಬಳಸುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ನಿಷ್ಪಕ್ಷಪಾತತೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಈ ಹಿನ್ನೆಲೆಯಲ್ಲಿ BLOಗಳು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Jul 8, 2026 | 06:39 AM
271 0
ಒಡಿಶಾದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಕಳ್ಳಸಾಗಣೆ: ಹೈದರಾಬಾದ್ ಪೊಲೀಸರ ಭರ್ಜರಿ ಕಾರ್ಯಾಚರಣೆ, ₹56 ಲಕ್ಷ ಮೌಲ್ಯದ 110 ಕೆಜಿ ಗಾಂಜಾ ವಶ

ಒಡಿಶಾದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಕಳ್ಳಸಾಗಣೆ: ಹೈದರಾಬಾದ್ ಪೊಲೀಸರ ಭರ್ಜರಿ ಕಾರ್ಯಾಚರಣೆ, ₹56 ಲಕ್ಷ ಮೌಲ್ಯದ 110 ಕೆಜಿ ಗಾಂಜಾ ವಶ

ಹೈದರಾಬಾದ್: ಅಂತರರಾಜ್ಯ ಗಾಂಜಾ ಕಳ್ಳಸಾಗಣೆ ಜಾಲವನ್ನು ಹೈದರಾಬಾದ್ ನಗರ ಪೊಲೀಸ್ ಆಯುಕ್ತರ ಕಾರ್ಯಪಡೆ ಹಾಗೂ ಆದಿಬಟ್ಲಾ ಪೊಲೀಸರು ಜಂಟಿಯಾಗಿ ಭೇದಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 110 ಕೆಜಿ ಗಾಂಜಾ, ಎರಡು ಕಾರುಗಳು ಹಾಗೂ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹56 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರ ತನಿಖೆ ಪ್ರಕಾರ, ಮಹಾರಾಷ್ಟ್ರ ಮೂಲದ ಪ್ರಣವ್ ಸಿಂಗ್ ಈ ಜಾಲದ ಪ್ರಮುಖ ಕಿಂಗ್‌ಪಿನ್ ಆಗಿದ್ದು, ಒಡಿಶಾದ ಬೆರ್ಹಾಂಪುರದಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಅಕ್ರಮ ಲಾಭ ಗಳಿಸುತ್ತಿದ್ದನು. ಈ ದಂಧೆಗೆ ಪ್ರಶಾಂತ್ ಗಣೇಶ್ ಪಸಲ್ಕರ್, ರಾಜೇಶ್ ಹನುಮಂತ್ ಲೋಂಧೆ, ಶಹಾಜಿ ಗೋರಕ್ ಚಂಗನ್ ಹಾಗೂ ಒಡಿಶಾದ ಶ್ರೀಹರಿ ಲಿಮಾ ಸಹಕಾರ ನೀಡುತ್ತಿದ್ದರು.ಸುಮಾರು 10–12 ದಿನಗಳ ಹಿಂದೆ ಆರೋಪಿಗಳು ಮಹಾರಾಷ್ಟ್ರದಿಂದ ಟಾಟಾ ಹ್ಯಾರಿಯರ್ ಕಾರಿನಲ್ಲಿ ಒಡಿಶಾದ ಬೆರ್ಹಾಂಪುರಕ್ಕೆ ತೆರಳಿ ಲಾಡ್ಜ್‌ನಲ್ಲಿ ತಂಗಿದ್ದರು. ಅಲ್ಲಿ ಪ್ರಮುಖ ಪೂರೈಕೆದಾರ ಪ್ರಭಿತ್ ಪ್ರಧಾನ್‌ನಿಂದ ಗಾಂಜಾ ಖರೀದಿಸಿ, ಅದನ್ನು ಮಾರುತಿ ಎರ್ಟಿಗಾ ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಸಾಗಿಸಲು ಯೋಜನೆ ರೂಪಿಸಿದ್ದರು.ಜೂನ್ 25ರಂದು ಬೆರ್ಹಾಂಪುರದಿಂದ ಪಲಾಸ, ವಿಶಾಖಪಟ್ಟಣಂ, ರಾಜಮಹೇಂದ್ರವರಂ, ವಿಜಯವಾಡ, ಸೂರ್ಯಪೇಟೆ ಹಾಗೂ ಚೌಟುಪ್ಪಾಲ್ ಮಾರ್ಗವಾಗಿ ಮಹಾರಾಷ್ಟ್ರದ ಉರುಳಿ ಕಾಂಚನ್ ಕಡೆಗೆ ಗಾಂಜಾ ಸಾಗಿಸಲಾಗುತ್ತಿತ್ತು. ಕಾನೂನು ಜಾರಿ ಸಂಸ್ಥೆಗಳ ಕಣ್ತಪ್ಪಿಸಲು ಟಾಟಾ ಹ್ಯಾರಿಯರ್ ಕಾರನ್ನು ಮುಂಚಿತವಾಗಿ ಚಲಾಯಿಸಿ ಪೊಲೀಸ್ ಚೆಕ್‌ಪೋಸ್ಟ್‌ಗಳ ಮಾಹಿತಿ ನೀಡಲಾಗುತ್ತಿತ್ತು. ಜೊತೆಗೆ ಸಾಮಾನ್ಯ ಕರೆಗಳ ಬದಲು ಇಂಟರ್ನೆಟ್ ಕರೆಗಳನ್ನು ಬಳಸಿದ್ದು, ಟೋಲ್ ಪ್ಲಾಜಾಗಳಲ್ಲಿ ಪತ್ತೆಯಾಗದಂತೆ ಎರ್ಟಿಗಾ ಕಾರಿನ ನಂಬರ್ ಪ್ಲೇಟ್‌ನ್ನು ನಕಲಿ ಮಹಾರಾಷ್ಟ್ರ ನೋಂದಣಿ ಸಂಖ್ಯೆಯೊಂದಿಗೆ ಬದಲಾಯಿಸಲಾಗಿತ್ತು.ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಶಂಷಾಬಾದ್ ವಲಯ ಕಾರ್ಯಪಡೆ ಹಾಗೂ ಆದಿಬಟ್ಲಾ ಪೊಲೀಸರು ಬೊಂಗುಲೂರು ORR ಗೇಟ್ ಜಂಕ್ಷನ್ ಬಳಿ ಎರಡೂ ವಾಹನಗಳನ್ನು ತಡೆದು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.ವಿಚಾರಣೆ ವೇಳೆ ಆರೋಪಿಗಳು ಒಡಿಶಾದಲ್ಲಿ ಪ್ರತಿ ಕೆಜಿ ಗಾಂಜಾವನ್ನು ಸುಮಾರು ₹4,000ಕ್ಕೆ ಖರೀದಿಸಿ, ಮಹಾರಾಷ್ಟ್ರದಲ್ಲಿ ₹20,000ರಿಂದ ₹30,000ವರೆಗೆ ಮಾರಾಟ ಮಾಡಿ ಭಾರಿ ಅಕ್ರಮ ಲಾಭ ಗಳಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತ ಆರೋಪಿಗಳುಪ್ರಶಾಂತ್ ಗಣೇಶ್ ಪಸಲ್ಕರ್ @ ನಾನಾ (31), ಪುಣೆ, ಮಹಾರಾಷ್ಟ್ರರಾಜೇಶ್ ಹನುಮಂತ್ ಲೋಂಧೆ (31), ಪುಣೆ, ಮಹಾರಾಷ್ಟ್ರಶ್ರೀಹರಿ ಲಿಮಾ (26), ಗಜಪತಿ ಜಿಲ್ಲೆ, ಒಡಿಶಾಶಹಾಜಿ ಗೋರಕ್ ಚಂಗನ್ @ ಪಪ್ಪು (25), ಮಹಾರಾಷ್ಟ್ರತಲೆಮರೆಸಿಕೊಂಡಿರುವ ಆರೋಪಿಗಳುಪ್ರಣವ್ ಸಿಂಗ್ – ಕಿಂಗ್‌ಪಿನ್ಪ್ರಭಿತ್ ಪ್ರಧಾನ್ – ಪ್ರಮುಖ ಪೂರೈಕೆದಾರವಶಪಡಿಸಿಕೊಂಡ ವಸ್ತುಗಳು110 ಕೆಜಿ ಗಾಂಜಾಟಾಟಾ ಹ್ಯಾರಿಯರ್ ಕಾರುಮಾರುತಿ ಎರ್ಟಿಗಾ ಕಾರು4 ಮೊಬೈಲ್ ಫೋನ್‌ಗಳುಆರೋಪಿಗಳ ವಿರುದ್ಧದ ಹಿಂದಿನ ಪ್ರಕರಣಗಳುಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಪ್ರಶಾಂತ್ ವಿರುದ್ಧ ಎರಡು NDPS ಪ್ರಕರಣಗಳು ಹಾಗೂ ಒಂದು ಕೊಲೆ ಯತ್ನ ಪ್ರಕರಣ, ರಾಜೇಶ್ ವಿರುದ್ಧ ಒಂದು ಕೊಲೆ ಮತ್ತು ಒಂದು ಕೊಲೆ ಯತ್ನ ಪ್ರಕರಣ, ಶ್ರೀಹರಿ ಲಿಮಾ ವಿರುದ್ಧ ಒಂದು NDPS ಪ್ರಕರಣ ದಾಖಲಾಗಿವೆ.ಬಂಧಿತ ಆರೋಪಿಗಳು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಹೆಚ್ಚಿನ ತನಿಖೆಗಾಗಿ ಆದಿಬಟ್ಲಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಹೈದರಾಬಾದ್ ನಗರ ಪೊಲೀಸರು ತಿಳಿಸಿದ್ದಾರೆ.

Jun 30, 2026 | 10:23 AM
54 0
ಮಾರುವೇಷದಲ್ಲಿ ಪಬ್‌ಗೆ ನುಗ್ಗಿದ ಮಹಿಳಾ ಐಪಿಎಸ್ ಅಧಿಕಾರಿ; ಬೃಹತ್ ಸೆಕ್ಸ್ ರಾಕೆಟ್‌ ಬಯಲು

ಮಾರುವೇಷದಲ್ಲಿ ಪಬ್‌ಗೆ ನುಗ್ಗಿದ ಮಹಿಳಾ ಐಪಿಎಸ್ ಅಧಿಕಾರಿ; ಬೃಹತ್ ಸೆಕ್ಸ್ ರಾಕೆಟ್‌ ಬಯಲು

ಹೈದರಾಬಾದ್:ನಗರದ ಐಷಾರಾಮಿ ಪ್ರದೇಶದಲ್ಲಿರುವ ಪಬ್‌ವೊಂದರಲ್ಲಿ ನಡೆಯುತ್ತಿದ್ದ ಎನ್ನಲಾದ ಅನೈತಿಕ ಚಟುವಟಿಕೆಗಳ ವಿರುದ್ಧ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಮಾರುವೇಷದಲ್ಲಿ ನಡೆಸಿದ ಕಾರ್ಯಾಚರಣೆ ಭಾರೀ ಚರ್ಚೆಗೆ ಗ್ರಾಸವಾಗಿದೆ.ಮಾಹಿತಿಯ ಪ್ರಕಾರ, 'ಕಿಂಗ್ಸ್ & ಕ್ವೀನ್ಸ್ ಪಬ್'ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಡಿಸಿಪಿ ರೀತಿ ರಾಜ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು. ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಡಿಸಿಪಿ ಸ್ವತಃ ಸಾಮಾನ್ಯ ಮಹಿಳೆಯಂತೆ ಪಬ್‌ಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರೆಂದು ತಿಳಿದುಬಂದಿದೆ.ಪಬ್‌ನಲ್ಲಿ ಗ್ರಾಹಕರನ್ನು ಸೆಳೆಯಲು ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದ್ದು, ಅನೈತಿಕ ದಂಧೆ ನಡೆಯುತ್ತಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾದ ಬಳಿಕ ಡಿಸಿಪಿ ತಮ್ಮ ತಂಡಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಪಬ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.ದಾಳಿಯ ವೇಳೆ ನಾಲ್ವರು ಮಹಿಳೆಯರು ಹಾಗೂ ಐವರು ಪುರುಷರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ, ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ (PITA) ಹಾಗೂ ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಈ ಪಬ್ ವಿರುದ್ಧ ಈ ಹಿಂದೆಯೂ ಹಲವು ದೂರುಗಳು ದಾಖಲಾಗಿದ್ದವು ಎನ್ನಲಾಗಿದ್ದು, ಇತ್ತೀಚಿನ ಕಾರ್ಯಾಚರಣೆಯಿಂದ ಅಕ್ರಮ ಜಾಲದ ಕುರಿತು ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.ಸಾಮಾನ್ಯ ನಾಗರಿಕರ ಸುರಕ್ಷತೆಗಾಗಿ ಮಹಿಳಾ ಐಪಿಎಸ್ ಅಧಿಕಾರಿ ರೀತಿ ರಾಜ್ ಸ್ವತಃ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ನಗರದಲ್ಲಿ ನಡೆಯುವ ಇಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸುವುದಾಗಿ ತಿಳಿಸಿದ್ದಾರೆ.

Jun 9, 2026 | 04:54 AM
165 0
ದಿವ್ಯಾಂಗ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ: ರೈಲ್ವೇ ಪ್ಯಾಂಟ್ರಿ ಕಾರ್ ಸಿಬ್ಬಂದಿ ಬಂಧನ

ದಿವ್ಯಾಂಗ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ: ರೈಲ್ವೇ ಪ್ಯಾಂಟ್ರಿ ಕಾರ್ ಸಿಬ್ಬಂದಿ ಬಂಧನ

ಜಾರ್ಖಂಡ್: ಚಲಿಸುತ್ತಿದ್ದ ರೈಲಿನಲ್ಲಿ ದಿವ್ಯಾಂಗ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ರೈಲ್ವೇ ಪ್ಯಾಂಟ್ರಿ ಕಾರ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.ಪೊಲೀಸರ ಮಾಹಿತಿ ಪ್ರಕಾರ, 28 ವರ್ಷದ ದಿವ್ಯಾಂಗ ಮಹಿಳೆ ಒಡಿಶಾದಿಂದ ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ತಡರಾತ್ರಿ 2 ರಿಂದ 3 ಗಂಟೆಯ ಅವಧಿಯಲ್ಲಿ ಮಹಿಳೆ ತನ್ನ ಸೀಟಿನಿಂದ ಎದ್ದು ಶೌಚಾಲಯಕ್ಕೆ ತೆರಳಿದ ವೇಳೆ, ಪ್ಯಾಂಟ್ರಿ ಕಾರ್ ಉದ್ಯೋಗಿಯಾಗಿರುವ ರಾಮ್‌ಜೀತ್ ಎಂಬಾತ ಆಕೆಯ ಹಿಂದೆಯೇ ಹೋಗಿ ಶೌಚಾಲಯದೊಳಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಎನ್ನಲಾಗಿದೆ.ಆರೋಪಿ ಮದ್ಯದ ಅಮಲಿನಲ್ಲಿದ್ದ ಎಂದು ತಿಳಿದುಬಂದಿದ್ದು, ಮಹಿಳೆಯ ವಿರೋಧದ ನಡುವೆಯೂ ಬಲವಂತವಾಗಿ ಕೃತ್ಯ ಎಸಗಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.ಶೌಚಾಲಯದೊಳಗಿನಿಂದ ಮಹಿಳೆಯ ಕಿರುಚಾಟ ಹಾಗೂ "ಬೇಡ, ಬೇಡ" ಎಂಬ ಕೂಗು ಕೇಳಿಸಿಕೊಂಡ ಹಿನ್ನೆಲೆಯಲ್ಲಿ ರೈಲಿನಲ್ಲಿದ್ದ ಇಬ್ಬರು ಸಹ ಪ್ರಯಾಣಿಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅವರು ಬಲವಂತವಾಗಿ ಶೌಚಾಲಯದ ಬಾಗಿಲು ತೆರೆಯಿಸಿ ಒಳಗೆ ಪ್ರವೇಶಿಸಿದಾಗ ಆರೋಪಿಯು ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಯತ್ನಿಸುತ್ತಿರುವುದು ಕಂಡುಬಂದಿದೆ.ತಕ್ಷಣವೇ ಆರೋಪಿಯಿಂದ ಮಹಿಳೆಯನ್ನು ರಕ್ಷಿಸಿದ ಸಹ ಪ್ರಯಾಣಿಕರು, ಘಟನೆ ಕುರಿತು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ರೈಲು ಮುಂದಿನ ನಿಲ್ದಾಣ ತಲುಪುತ್ತಿದ್ದಂತೆ ರೈಲ್ವೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.ಈ ಘಟನೆ ಚಲಿಸುವ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಪ್ರಯಾಣಿಕರ ಭದ್ರತೆಗಾಗಿ ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ ಎಂಬ ಚರ್ಚೆಗೆ ಕಾರಣವಾಗಿದೆ.

Jun 8, 2026 | 08:59 AM
213 0
ನಾರ್ವೆ ಚೆಸ್ ಕಿರೀಟ ಭಾರತಕ್ಕೆ: ಪ್ರಜ್ಞಾನಂದ ಸಾಧನೆಗೆ ದೇಶದ ಮೆಚ್ಚುಗೆ

ನಾರ್ವೆ ಚೆಸ್ ಕಿರೀಟ ಭಾರತಕ್ಕೆ: ಪ್ರಜ್ಞಾನಂದ ಸಾಧನೆಗೆ ದೇಶದ ಮೆಚ್ಚುಗೆ

ಓಸ್ಲೊ (ನಾರ್ವೆ): ಭಾರತದ ಯುವ ಚೆಸ್ ಗ್ರ್ಯಾಂಡ್‌ಮಾಸ್ಟರ್ R. Praggnanandhaa ಅವರು ಪ್ರತಿಷ್ಠಿತ Norway Chess ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಜರ್ಮನಿಯ Vincent Keymer ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಪ್ರಜ್ಞಾನಂದ ಅವರು ಒಟ್ಟಾರೆ ಅಂಕಗಳಲ್ಲಿ ಅಗ್ರಸ್ಥಾನ ಪಡೆದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಈ ಸಾಧನೆಯೊಂದಿಗೆ ನಾರ್ವೆ ಚೆಸ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದ ಭಾರತದ ಮೊದಲ ಆಟಗಾರ ಎಂಬ ಅಪೂರ್ವ ಹಿರಿಮೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಚೆಸ್ ಸ್ಪರ್ಧೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವದ ಅಗ್ರ ಆಟಗಾರರು ಭಾಗವಹಿಸುತ್ತಾರೆ.ಕಿರಿಯ ವಯಸ್ಸಿನಲ್ಲೇ ಹಲವು ಅಂತಾರಾಷ್ಟ್ರೀಯ ಸಾಧನೆಗಳ ಮೂಲಕ ಗಮನ ಸೆಳೆದಿರುವ ಪ್ರಜ್ಞಾನಂದ ಅವರ ಈ ಗೆಲುವು ಭಾರತೀಯ ಚೆಸ್ ಲೋಕಕ್ಕೆ ಮತ್ತೊಂದು ಗರಿಮೆಯ ಕ್ಷಣವಾಗಿದೆ. ದೇಶದಾದ್ಯಂತ ಚೆಸ್ ಅಭಿಮಾನಿಗಳು ಹಾಗೂ ಕ್ರೀಡಾಭಿಮಾನಿಗಳು ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.ಪ್ರಜ್ಞಾನಂದ ಅವರ ಈ ಐತಿಹಾಸಿಕ ವಿಜಯವು ಭಾರತೀಯ ಚೆಸ್ ಕ್ರೀಡೆಯ ಬೆಳವಣಿಗೆಗೆ ಹೊಸ ಉತ್ತೇಜನ ನೀಡಿದ್ದು, ಯುವ ಆಟಗಾರರಿಗೆ ಪ್ರೇರಣೆಯಾಗಿದೆ.

Jun 6, 2026 | 11:55 AM
149 0
ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಶಾಸಕ ಮಹೇಶ್ ತೆಂಗಿನಕಾಯಿ ಭೇಟಿ

ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಶಾಸಕ ಮಹೇಶ್ ತೆಂಗಿನಕಾಯಿ ಭೇಟಿ

ಹುಬ್ಬಳ್ಳಿ: ಪಶ್ಚಿಮ ಬಂಗಾಳದಿಂದ ಹುಬ್ಬಳ್ಳಿಯ ಮಾರ್ಗವಾಗಿ ಗೋವಾ ರಾಜ್ಯಕ್ಕೆ ನೂರಾರು ವಲಸಿಗರು ತೆರಳುತ್ತಿರುವ ಹಿನ್ನೆಲೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣಕ್ಕೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ತೆಂಗಿನಕಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಬಸ್ ನಿಲ್ದಾಣದಲ್ಲಿ ತಂಗಿದ್ದ ವಲಸಿಗರ ದಾಖಲಾತಿಗಳು, ಗುರುತಿನ ಚೀಟಿಗಳು ಹಾಗೂ ಪ್ರಯಾಣದ ಮಾಹಿತಿಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಶಾಸಕ ಮಹೇಶ್ ತೆಂಗಿನಕಾಯಿ ಸೂಚನೆ ನೀಡಿದರು. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.ವಲಸಿಗರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

May 23, 2026 | 02:40 PM
131 0
ಬೋರ್‌ವೆಲ್ ನೀರು ಸರಬರಾಜು ಯೋಜನೆಗೆ ಶಾಸಕ ಎಸ್. ಮುನಿರಾಜು ಚಾಲನೆ

ಬೋರ್‌ವೆಲ್ ನೀರು ಸರಬರಾಜು ಯೋಜನೆಗೆ ಶಾಸಕ ಎಸ್. ಮುನಿರಾಜು ಚಾಲನೆ

ಬೆಂಗಳೂರು: ಪೀಣ್ಯದಾಸರಹಳ್ಳಿ ಸಮೀಪದ ವಿವಿಧ ವಾರ್ಡ್‌ಗಳಲ್ಲಿ ಬೋರ್‌ವೆಲ್ ನೀರು ಹರಿಸುವ ವ್ಯವಸ್ಥೆಗೆ ಶಾಸಕ S. Muniraju ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಚೊಕ್ಕಸಂದ್ರ ವಾರ್ಡ್‌ನ ಸಿ.ಎಂ. ನಾಗರಾಜ್ ಅವರ ಮನೆ ಹತ್ತಿರ, ಮಾರುತಿನಗರದ ಎಂ.ಎಂ. ಬ್ರೆಟ್ ಸ್ಕೂಲ್ ಸಮೀಪ, ನೆಲಗೆದರನಹಳ್ಳಿ ವಾರ್ಡ್‌ನ ನಿಸರ್ಗ ಶಾಲೆಯ ಹಿಂಭಾಗ, ಶಿವಪುರ ವಾರ್ಡ್‌ನ ಪ್ರಕಾಶ್ ಅವರ ಮನೆ ಹತ್ತಿರ ಹಾಗೂ ಪಾರ್ವತಿನಗರ ವಾರ್ಡ್‌ನ ಪೈಪ್‌ಲೈನ್ ಪಾರ್ಕ್ ಸಮೀಪ ಬೋರ್‌ವೆಲ್‌ಗಳಿಂದ ನೀರು ಹರಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿ.ಎಂ. ನಾಗರಾಜು, ಸುರೇಶ್ ಗೌಡ, ವಿಜಯಕುಮಾರ್, ವೆಂಕಟೇಶ್ (ವೆಂಕಿ), ಎಂಜಿನಿಯರ್‌ಗಳಾದ ವೆಂಕಟೇಶ್ ಹಾಗೂ ಪ್ರವೀಣ್ ಸೇರಿದಂತೆ ಸ್ಥಳೀಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.ಸ್ಥಳೀಯ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.ವರದಿ : ಪಬ್ಲಿಕ್ ರೈಡ್ ದೇವರಾಜ

May 15, 2026 | 02:40 AM
22 0
"ಡಾ. ಸಂಗನ ಬಸಪ್ಪ ಬಿರಾದಾರ್ ಅವರಿಗೆ 'ಬಸವಶ್ರೀ ಕಾಯಕ' ಶ್ರೇಷ್ಠ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ"

"ಡಾ. ಸಂಗನ ಬಸಪ್ಪ ಬಿರಾದಾರ್ ಅವರಿಗೆ 'ಬಸವಶ್ರೀ ಕಾಯಕ' ಶ್ರೇಷ್ಠ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ"

ಪಬ್ಲಿಕ್ ರೈಡ್ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಸಮಾಜ ಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ಜನಪ್ರಿಯ ವ್ಯಕ್ತಿ ಮತ್ತು ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ಮತ್ತು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಗನ ಬಸಪ್ಪ ಬಿರಾದಾರ್ ಅವರಿಗೆ ಕಾಫಿ ನಾಡಿನ ಹೆಸರಾಂತ ಟ್ರಸ್ಟ್ ಗಳಲ್ಲಿ ಒಂದಾದ ನಾಟ್ಯ ಮಯೂರಿ ನೃತ್ಯ ಟ್ರಸ್ಟಿನ ಸಂಸ್ಥಾಪಕಿ ಅಧ್ಯಕ್ಷೆ ಪ್ರೇಮಾಂಜಲಿ ಆಚಾರ್ಯ ಕಾರ್ಯದರ್ಶಿ ಪುಷ್ಪಲತಾ ಶಿವಣ್ಣ ಮತ್ತು ಪದಾಧಿಕಾರಿಗಳು ಸದಸ್ಯರು ಒಳಗೊಂಡಂತೆ ಡಾ. ಸಂಗನ ಬಸಪ್ಪ ಬಿರಾದಾರ್ ಅವರನ್ನು ಗುರುತಿಸಿ ನಗರದ ಪ್ರತಿಷ್ಠಿತ ಕಲಾ ಮಂದಿರದಲ್ಲಿ ಒಂದಾದ ರವಿಂದ್ರ ಕಲಾ ಮಂದಿರದ ಪಕ್ಕದಲ್ಲಿರುವ ನಯನ ಸಭಾಂಗಣದಲ್ಲಿ ದಿನಾಂಕ ೨೩ ಮೇ ೨೦೨೬ ಶನಿವಾರದಂದು ಡಾ. ಬಿರಾದಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ನಾಟ್ಯ ಮಯೂರಿ ನೃತ್ಯ ಟ್ರಸ್ಟಿನ ಸಂಸ್ಥಾಪಕಿ ಅಧ್ಯಕ್ಷೆ ಪ್ರೇಮಾಂಜಲಿ ಆಚಾರ್ಯ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.ವರದಿ : ಪಬ್ಲಿಕ್ ರೈಡ್ ದೇವರಾಜ್

May 15, 2026 | 02:38 AM
23 0
ಬಾವಿಯಲ್ಲಿ ಸಿಲುಕಿದ್ದ ಮೂವರ ಜೀವ ರಕ್ಷಿಸಿದ ಕಾರ್ಕಳ ಅಗ್ನಿಶಾಮಕ ದಳ

ಬಾವಿಯಲ್ಲಿ ಸಿಲುಕಿದ್ದ ಮೂವರ ಜೀವ ರಕ್ಷಿಸಿದ ಕಾರ್ಕಳ ಅಗ್ನಿಶಾಮಕ ದಳ

ಕಾರ್ಕಳ: ಬಾವಿಯ ಮಣ್ಣು ತೆಗೆಯುವ ವೇಳೆ ಅಪಾಯಕ್ಕೆ ಸಿಲುಕಿದ್ದ ಮೂವರು ಕಾರ್ಮಿಕರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ತಾಲೂಕಿನ ಕುಕ್ಕುಂದೂರು ಅಶ್ವಥಪುರದಲ್ಲಿ ನಡೆದಿದೆ.ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ (52) ಎಂಬವರು ಬಾವಿಯ ಮಣ್ಣು ತೆಗೆಯುವ ಕೆಲಸಕ್ಕಾಗಿ ಬಾವಿಗೆ ಇಳಿದಿದ್ದರು. ಈ ವೇಳೆ ರಾಜೇಶ್ ಮೇಲಕ್ಕೆ ಬರುವ ಸಂದರ್ಭ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರನ್ನು ರಕ್ಷಿಸಲು ಮುಂದಾದ ಪವನ್ ಹಾಗೂ ಗೋಪಾಲ್ ನಾಯ್ಕ ಕೂಡ ಬಾವಿಯೊಳಗೆ ಸಿಲುಕಿಕೊಂಡಿದ್ದರು.ಘಟನೆಯ ಮಾಹಿತಿ ತಕ್ಷಣವೇ ಕಾರ್ಕಳ ಅಗ್ನಿಶಾಮಕ ದಳಕ್ಕೆ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ತುರ್ತು ಕಾರ್ಯಾಚರಣೆ ನಡೆಸಿದರು. ಅಪಾರ ಎಚ್ಚರಿಕೆ ಹಾಗೂ ಸಾಹಸ ಪ್ರದರ್ಶಿಸಿದ ಅಗ್ನಿಶಾಮಕ ಸಿಬ್ಬಂದಿ, ಬಾವಿಯೊಳಗೆ ಸಿಲುಕಿದ್ದ ಮೂವರನ್ನೂ ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.ಗಾಯಗೊಂಡಿದ್ದ ರಾಜೇಶ್ ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅಗ್ನಿಶಾಮಕ ದಳದ ಈ ತ್ವರಿತ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

May 12, 2026 | 09:59 AM
198 0
ತಮಿಳುನಾಡು ಕಾಂಗ್ರೆಸ್‌ನ ಪ್ರಮುಖ ನಿರ್ಧಾರ: ಡಿಎಂಕೆ ಮೈತ್ರಿಗೆ ಬ್ರೇಕ್‌, ಜೋಸೆಫ್ ವಿಜಯ್ ಅವರ ಟಿವಿಕೆಗೆ ಬೆಂಬಲ

ತಮಿಳುನಾಡು ಕಾಂಗ್ರೆಸ್‌ನ ಪ್ರಮುಖ ನಿರ್ಧಾರ: ಡಿಎಂಕೆ ಮೈತ್ರಿಗೆ ಬ್ರೇಕ್‌, ಜೋಸೆಫ್ ವಿಜಯ್ ಅವರ ಟಿವಿಕೆಗೆ ಬೆಂಬಲ

ಚೆನ್ನೈ: ತಮಿಳುನಾಡು ಕಾಂಗ್ರೆಸ್‌ ಸಮಿತಿಯು ಪ್ರಮುಖ ರಾಜಕೀಯ ನಡೆಯನ್ನು ತೋರಿದ್ದು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ಮೈತ್ರಿಕೂಡವನ್ನು ತೊರೆಯುವುದಾಗಿ ಘೋಷಿಸಿದೆ. ಅದೇ ವೇಳೆ, ಜೋಸೆಫ್ ವಿಜಯ್ ಅವರ ನೇತೃತ್ವದ ತಮಿಳಗ ವಿಜಯ್ ಕಳಗಂ (ಟಿವಿಕೆ) ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದೆ.ತಮಿಳುನಾಡು ಕಾಂಗ್ರೆಸ್‌ನ ಉಸ್ತುವಾರಿ ನಾಯಕರು ಸುದ್ದಿಗಾರರೊಂದಿಗೆ ಮಾತನಾಡಿ, “ಭಾರತದ ಸಂವಿಧಾನವನ್ನು ನಂಬದ ಯಾವುದೇ ಕೋಮುವಾದಿ ಶಕ್ತಿಗಳನ್ನು ಮೈತ್ರಿಕೂಟದಿಂದ ದೂರವಿಡುವ ಶರತ್ತಿನ ಮೇಲೆ ಮಾತ್ರ ನಾವು ಟಿವಿಕೆಗೆ ಬೆಂಬಲ ನೀಡಲಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.ಡಿಎಂಕೆ ಮೈತ್ರಿ ತೊರೆಯಲು ಕಾರಣವೇನು?ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ನೀತಿ ಮತ್ತು ಆಡಳಿತ ವಿಚಾರಗಳಲ್ಲಿ ಅಭಿಪ್ರಾಯ ಭೇದ ಉಂಟಾಗಿತ್ತು. ವಿಶೇಷವಾಗಿ, ಕೇಂದ್ರ ಸರ್ಕಾರದ ವಿರುದ್ಧದ ನಿಲುವುಗಳು ಮತ್ತು ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳ ಏರಿಕೆಯ ಬಗ್ಗೆ ಕಾಂಗ್ರೆಸ್‌ಗೆ ಅಸಮಾಧಾನ ಇತ್ತು. ಈ ಹಿನ್ನೆಲೆಯಲ್ಲಿ ಮೈತ್ರಿ ಮುಂದುವರಿಸುವುದು ಕಷ್ಟಕರವಾಗಿತ್ತು.ಟಿವಿಕೆ ಪರವಾಗಿ ಕಾಂಗ್ರೆಸ್ ನಿಲುವು:ನಟ, ರಾಜಕಾರಣಿ ಜೋಸೆಫ್ ವಿಜಯ್ ಅವರು ತಮಿಳಗ ವಿಜಯ್ ಕಳಗಂ ಮೂಲಕ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಸಂವಿಧಾನವನ್ನು ಎತ್ತಿಹಿಡಿಯುವುದು, ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪ್ರತಿಪಾದಿಸುವುದು ಟಿವಿಕೆಯ ಪ್ರಮುಖ ಅಜೆಂಡಾ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.“ಟಿವಿಕೆ ಸರ್ಕಾರ ರಚಿಸಿದರೆ, ಸಂವಿಧಾನ ವಿರೋಧಿ ಮತ್ತು ಕೋಮುವಾದಿ ಶಕ್ತಿಗಳನ್ನು ಪ್ರತಿಭಟಿಸುವಲ್ಲಿ ಅವರು ನಮ್ಮೊಂದಿಗೆ ಸಹಕರಿಸಬೇಕು. ಈ ಷರತ್ತು ಪೂರೈಸದಿದ್ದರೆ, ಬೆಂಬಲ ಹಿಂಪಡೆಯಲಾಗುವುದು” ಎಂದು ಅವರು ಹೇಳಿದ್ದಾರೆ.ರಾಜ್ಯ ಮತ್ತು ರಾಷ್ಟ್ರೀಯ ರಾಜಕಾರಣದ ಪರಿಣಾಮ:ಡಿಎಂಕೆ ಮೈತ್ರಿ ತೊರೆಯುವ ನಿರ್ಧಾರವು ತಮಿಳುನಾಡು ರಾಜಕಾರಣದಲ್ಲಿ ಅಲೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ಈ ನಡೆಯು ಇತರ ಮೈತ್ರಿ ಪಕ್ಷಗಳ ಮೇಲೂ ಪ್ರಭಾವ ಬೀರಬಹುದು. ಅದೇ ಸಮಯದಲ್ಲಿ, ಟಿವಿಕೆ ಪಡೆಯುವ ಬೆಂಬಲದಿಂದ ರಾಜ್ಯದಲ್ಲಿ ಮೂರನೇ ಧ್ರುವ ರಾಜಕಾರಣಕ್ಕೆ ಚಾಲನೆ ದೊರಕುವ ನಿರೀಕ್ಷೆಯಿದೆ.ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಪ್ರತಿಕ್ರಿಯೆ ಇನ್ನೂ ಬರಬೇಕಾಗಿದೆ. ಆದರೆ, ತಮಿಳುನಾಡು ಘಟಕದ ಈ ನಿರ್ಧಾರವು ಹೈಕಮಾಂಡ್‌ಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಮುಂದಿನ ದಿನಗಳಲ್ಲಿ ಟಿವಿಕೆ ಮತ್ತು ಕಾಂಗ್ರೆಸ್ ನಡುವಿನ ಸಮನ್ವಯತೆಯ ಮಾತುಕತೆಗಳು ಮುಂದುವರಿಯುವ ಸಾಧ್ಯತೆಯಿದೆ. ಇದರೊಂದಿಗೆ, ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಸಮೀಕರಣಗಳು ಸಂಪೂರ್ಣ ಬದಲಾಗುವ ಸೂಚನೆ ಕಂಡುಬಂದಿದೆ.

May 6, 2026 | 09:39 AM
80 0
“ಅಕೌಂಟ್ ಹೋಲ್ಡರ್ ತನ್ನಿ” – ಬ್ಯಾಂಕ್ ನಿರ್ಲಕ್ಷ್ಯಕ್ಕೆ ಸಿಟ್ಟಾದ ಸೋದರ, ಸತ್ತ ಅಕ್ಕನ ಅಸ್ಥಿಪಂಜರ ಹೊತ್ತುಕೊಂಡು ಬ್ಯಾಂಕ್ಗೆ!

“ಅಕೌಂಟ್ ಹೋಲ್ಡರ್ ತನ್ನಿ” – ಬ್ಯಾಂಕ್ ನಿರ್ಲಕ್ಷ್ಯಕ್ಕೆ ಸಿಟ್ಟಾದ ಸೋದರ, ಸತ್ತ ಅಕ್ಕನ ಅಸ್ಥಿಪಂಜರ ಹೊತ್ತುಕೊಂಡು ಬ್ಯಾಂಕ್ಗೆ!

ಭುವನೇಶ್ವರ: ಒಡಿಶಾದ ಖಿಯೋಂಜರ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕೇವಲ ₹20,000 ಉಳಿತಾಯ ಹಿಂಪಡೆಯಲು ಬ್ಯಾಂಕ್ ಅಧಿಕಾರಿಗಳ ಕ್ರೂರ ಸೂಕ್ಷ್ಮತೆಯೇ ಕಾರಣವಾಗಿ, ಬಡ ಆದಿವಾಸಿ ಸಹೋದರನೊಬ್ಬ ತನ್ನ ಸತ್ತ ಅಕ್ಕನ ಅಸ್ಥಿಪಂಜರವನ್ನು ಹೆಗಲ ಮೇಲೆ ಇಟ್ಟುಕೊಂಡು ಬ್ಯಾಂಕಿಗೆ ಆಗಮಿಸಿದ ಘಟನೆ ಸಂಭವಿಸಿದೆ. ಈ ದುರಂತ ಘಟನೆಯು ಸಂವೇದನಾಶೀಲತೆಯಿಲ್ಲದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ನಿಯಮಗಳ ಹಿಂದೆ ಅಡಗಿಕೊಳ್ಳುವ ನಮ್ಮ ವ್ಯವಸ್ಥೆಯ ಕ್ರೌರ್ಯವನ್ನು ಬಯಲಿಗೆಳೆದಿದೆ. ಖಿಯೋಂಜರ್ ಜಿಲ್ಲೆಯ ಪಟನಾ ಬ್ಲಾಕ್ನ ಮಾಲಿಪೋಸಿ ಗ್ರಾಮದ ದಿಯಾನಾಲಿ ಗ್ರಾಮದ ಜೀತು ಮುಂಡಾ (50) ಎಂಬವರು ತಮ್ಮ ಅಕ್ಕ ಕಳರಾ ಮುಂಡಾ ಅವರ ಖಾತೆಯಲ್ಲಿದ್ದ ಹಣ ತೆಗೆಯಲು ಹಲವಾರು ಬಾರಿ ಒಡಿಶಾ ಗ್ರಾಮೀಣ ಬ್ಯಾಂಕ್ನ ಮಾಲಿಪೋಸಿ ಶಾಖೆಗೆ ತೆರಳಿದ್ದರು. ಆದರೆ ಬ್ಯಾಂಕ್ ಅಧಿಕಾರಿಗಳು “ಅಕೌಂಟ್ ಹೋಲ್ಡರ್ನನ್ನೇ ಕರೆದುಕೊಂಡು ಬನ್ನಿ” ಎಂದು ಹಠ ಹಿಡಿದಿದ್ದರು. ಅಕ್ಕ ಕಳರಾ ಅವರು ಜನವರಿ 26, 2026 ರಂದು ನಿಧನರಾಗಿದ್ದರೂ, ಅವರ ಮರಣದ ವಿಚಾರವನ್ನು ಬ್ಯಾಂಕ್ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಕೊನೆಗೆ ಸೋದರ ಜೀತು ಮುಂಡಾ ಅವರಿಗೆ ಸಿಟ್ಟೇ ಬಂದಿತು. ಅವರು ಅಕ್ಕನ ಸಮಾಧಿ ತೋಡಿ, ಅವಳ ಅಸ್ಥಿಪಂಜರವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು, ಸುಮಾರು 3 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಬ್ಯಾಂಕ್ಗೆ ತಂದರು. ಬ್ಯಾಂಕಿನ ಆವರಣದಲ್ಲಿ ಅಸ್ಥಿಪಂಜರವನ್ನು ಇರಿಸಿ, "ನಿಮ್ಮ ಅಕೌಂಟ್ ಹೋಲ್ಡರ್ ಇಲ್ಲಿದ್ದಾಳೆ, ಹಣ ಕೊಡಿ!" ಎಂದು ಪ್ರತಿಭಟನೆ ಮಾಡಿದರು. ಈ ದೃಶ್ಯವನ್ನು ನೋಡಿ ಬ್ಯಾಂಕ್ ಸಿಬ್ಬಂದಿ ಬೆಚ್ಚಿಬಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪಟನಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಿರಣ್ ಪ್ರಸಾದ್ ಸಾಹು ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ, ಜೀತು ಮುಂಡಾ ಅವರನ್ನು ಸಮಾಧಾನಪಡಿಸಿದರು. "ಜೀತು ಒಬ್ಬ ಅನಕ್ಷರಸ್ಥ ಆದಿವಾಸಿ. ಅವನಿಗೆ 'ಲೀಗಲ್ ಹೇರ್' ಅಥವಾ 'ನಾಮಿನಿ' ಎಂದರೇನು ಎಂದು ತಿಳಿದಿಲ್ಲ. ಸತ್ತವರ ಖಾತೆಯಿಂದ ಹಣ ತೆಗೆಯುವ ವಿಧಾನವನ್ನು ಬ್ಯಾಂಕ್ ಅಧಿಕಾರಿಗಳು ಅವನಿಗೆ ಸರಿಯಾಗಿ ತಿಳಿಸುವಲ್ಲಿ ವಿಫಲರಾಗಿದ್ದಾರೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಜೀತು ಮುಂಡಾ ಅವರಿಗೆ ಸೂಕ್ತ ಕಾನೂನು ಪ್ರಕ್ರಿಯೆಗಳ ಮೂಲಕ ಹಣ ಪಡೆದುಕೊಳ್ಳಲು ಸಹಾಯ ಮಾಡುವ ಭರವಸೆಯನ್ನು ಪೊಲೀಸರು ನೀಡಿದರು. ನಂತರ, ಅಕ್ಕನ ಅಸ್ಥಿಪಂಜರವನ್ನು ಪೊಲೀಸರ ನೇರ ನಿಯಂತ್ರಣದಲ್ಲಿ ಪುನಃ ಸಮಾಧಿ ಮಾಡಲಾಯಿತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜೀತು ಮುಂಡಾ, "ನಾನು ಹಲವು ಬಾರಿ ಬ್ಯಾಂಕಿಗೆ ಓಡಾಡಿದ್ದೇನೆ. ಅವರು ನನಗೆ 'ಅಕೌಂಟ್ ಹೋಲ್ಡರನ್ನು ಕರೆದುಕೊಂಡು ಬಾ' ಎಂದು ಹೇಳುತ್ತಿದ್ದರು. ನಾನು ಅವಳು ಸತ್ತು ಹೋಗಿದ್ದಾಳೆ ಎಂದು ಹೇಳಿದರೂ ಅವರು ನನ್ನ ಮಾತು ಕೇಳಲಿಲ್ಲ. ಕೊನೆಗೆ frustration ನಿಂದ, ನಾನೇ ಅವಳ ಸಮಾಧಿ ತೋಡಿ ಸತ್ತ ಸಾಕ್ಷಿಯಾಗಿ ಅಸ್ಥಿಪಂಜರವನ್ನು ತಂದೆ" ಎಂದು ಕಣ್ಣೀರಿನಿಂದ ಹೇಳಿದ್ದಾರೆ. ಈ ಘಟನೆ ಸಂಭವಿಸಿದ ಬಳಿಕವೂ ಸ್ಥಳೀಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ (BDO) ಮನಸ್ ದಂಡಪತ್ ಅವರು "ನನಗೆ ಈ ಬಗ್ಗೆ ಇದೀಗ ತಿಳಿಯಿತು" ಎಂದು ಹೇಳುವ ಮೂಲಕ ತಮ್ಮ ನಿರ್ಲಕ್ಷ್ಯವನ್ನು ತೋರಿಸಿಕೊಂಡಿದ್ದಾರೆ. ಇದೇ ವೇಳೆ, ವಿದೇಶಿ ಮಾಧ್ಯಮಗಳು ಈ ಘಟನೆಯನ್ನು ಭಾರತದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದೆ. ಡಿಜಿಟಲ್ ಇಂಡಿಯಾ, ಜನ್-ಧನ್ ಖಾತೆಗಳ ಮೂಲಕ ಆರ್ಥಿಕ ಸೇರ್ಪಡೆ ಸೇರಿದಂತೆ ಹಲವಾರು ಯೋಜನೆಗಳು ಗ್ರಾಮೀಣ ಭಾರತದಲ್ಲಿ ಮಹತ್ತರ ಬದಲಾವಣೆ ತಂದಿವೆ. ಆದರೆ, ಇಂತಹ ಪ್ರತ್ಯೇಕ ಘಟನೆಗಳನ್ನು ದುರುಪಯೋಗಪಡಿಸಿಕೊಂಡು ಬಿಬಿಸಿಯಂತಹ ರಣಹದ್ದುಗಳು ಭಾರತದ ವಿರುದ್ಧ ತಪ್ಪು ಪ್ರಚಾರ ನಡೆಸುವುದು ಖಂಡನೀಯ.ಬ್ಯಾಂಕ್ ಅಧಿಕಾರಿಗಳ ಈ ಹೃದಯಹೀನ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಂತಹ ಅಧಿಕಾರಿಗಳನ್ನು ತಕ್ಷಣ ಉದ್ಯೋಗದಿಂದ ವಜಾಗೊಳಿಸಬೇಕು. ಮುಂದಿನ ದಿನಗಳಲ್ಲಿ ಯಾವುದೇ ಬಡ, ಅನಕ್ಷರಸ್ಥ ಮತ್ತು ಆದಿವಾಸಿ ಸಹೋದರ/ಸಹೋದರಿ ಇಂತಹ ಕ್ರೌರ್ಯವನ್ನು ಎದುರಿಸಬಾರದು. ವ್ಯವಸ್ಥೆಯ ನಿಯಮಗಳು ಮನುಷ್ಯರ ಸೇವೆಗಾಗಿ ಹೊರತು, ಅವರನ್ನು ದುಃಖದಲ್ಲಿ ಮುಳುಗಿಸಲು ಅಲ್ಲ ಎಂಬುದನ್ನು ಅರಿಯಬೇಕಾದ ಸಮಯ ಇದು.ಪೊಲೀಸರು ಮತ್ತು ಆಡಳಿತ ಮಂಡಳಿ ಜೀತು ಮುಂಡಾ ಅವರಿಗೆ ಕಾನೂನುಬದ್ಧವಾಗಿ ನ್ಯಾಯ ಒದಗಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

Apr 28, 2026 | 07:31 AM
399 0
ಕುಡಿದ ಮತ್ತಿನಲ್ಲಿ ಪತ್ನಿಯ ಶಿರಚ್ಛೇದ ಮಾಡಿ ತಲೆಯೊಂದಿಗೆ ಗ್ರಾಮದಲ್ಲಿ ಸುತ್ತಾಡಿದ ಪತಿ!

ಕುಡಿದ ಮತ್ತಿನಲ್ಲಿ ಪತ್ನಿಯ ಶಿರಚ್ಛೇದ ಮಾಡಿ ತಲೆಯೊಂದಿಗೆ ಗ್ರಾಮದಲ್ಲಿ ಸುತ್ತಾಡಿದ ಪತಿ!

ಕೊರ್ಬಾ (ಛತ್ತೀಸ್ಗಢ): ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಅತ್ಯಂತ ದಾರುಣ ಮತ್ತು ವಿಚಿತ್ರ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಪತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಆ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಗ್ರಾಮದಲ್ಲಿ ಸುತ್ತಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ.ಪ್ರಾಪ್ತ ಮಾಹಿತಿಯ ಪ್ರಕಾರ, ಕೊರ್ಬಾ ಜಿಲ್ಲೆಯ ಸಲಿಕ್ ರಾಮ್ ಯಾದವ್ (58) ಎಂಬಾತ ಮದ್ಯಪಾನ ಮಾಡಿದ ನಂತರ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳದ ಉತ್ತುಂಗದಲ್ಲಿ ಆಕೆಯ ಶಿರಚ್ಛೇದ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೆ, ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕವಾಗಿ ಗ್ರಾಮದಲ್ಲಿ ಸುತ್ತಾಡಿದ್ದಾನೆ.ಆತನ ಈ ಕ್ರೌರ್ಯವನ್ನು ಕಂಡು ಗ್ರಾಮಸ್ಥರು ದಿಗ್ಭ್ರಾಂತರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆರೋಪಿ ಸಲಿಕ್ ರಾಮ್ ಯಾದವ್ ಸ್ವತಃ ಪೊಲೀಸರ ಮುಂದೆ ಶರಣಾಗಿದ್ದಾನೆ.ಪೊಲೀಸರ ವಿಚಾರಣೆ ವೇಳೆ, ತನ್ನ ಪತ್ನಿ ತನ್ನ ಬಗ್ಗೆಯೇ ಅನುಮಾನ ಹೊಂದಿದ್ದಳು. ಇದೇ ತನ್ನ ಅಪರಾಧಕ್ಕೆ ಕಾರಣ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆಗಳನ್ನು ಕೈಗೊಂಡಿದ್ದಾರೆ. ಮೃತೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

Apr 24, 2026 | 02:15 PM
76 0