ಹುಬ್ಬಳ್ಳಿ News

Discover the latest headlines in this section.

ನವ ಆನಂದನಗರದಲ್ಲಿ ನಳದಲ್ಲೇ ಹೊಲಸು ನೀರು – ಬಟ್ಟೆ, ಕಸ ಸೇರಿ ಕುಡಿಯಲು ಅಯೋಗ್ಯ

ನವ ಆನಂದನಗರದಲ್ಲಿ ನಳದಲ್ಲೇ ಹೊಲಸು ನೀರು – ಬಟ್ಟೆ, ಕಸ ಸೇರಿ ಕುಡಿಯಲು ಅಯೋಗ್ಯ

ಹುಬ್ಬಳ್ಳಿ: ಹುಬ್ಬಳ್ಳಿಯ ನವ ಆನಂದನಗರದ ನಿವಾಸಿಗಳ ಬಹುದಿನಗಳ ಆಕ್ರೋಶಕ್ಕೆ ಈಗ ನೇರ ಪುರಾವೆ ಸಿಕ್ಕಿದೆ. ಸ್ಥಳೀಯರು ತಮ್ಮ ಮನೆಗಳ ನಳಗಳಲ್ಲಿ (taps) ತುಂಬಿಸಿಕೊಂಡ ನೀರನ್ನು ಬಟ್ಟೆಯಿಂದ ಸಾಣಿಸಿದಾಗ ಕಸ, ಕೊಳೆ ಹಾಗೂ ಹೊಲಸು ಪತ್ತೆಯಾಗಿದೆ. ಅಂದರೆ, ಪೈಪ್ಲೈನ್ ಮೂಲಕವೇ ಮನೆಗಳಿಗೆ ಕಲುಷಿತ ನೀರು ಬರುತ್ತಿದೆ ಎಂಬುದು ಸ್ಪಷ್ಟವಾಗಿದೆ.ನಿವಾಸಿಯೊಬ್ಬರು ಮಾತನಾಡಿ, “ನಾವು ನಳ ತೆರೆದರೆ ಬಣ್ಣ ಬದಲಾದ, ದುರ್ವಾಸನೆಯ ನೀರು ಬರುತ್ತದೆ. ಸಾಣಿ ಬಟ್ಟೆ ಹಿಡಿದಾಗ ಅದರಲ್ಲಿ ಮಣ್ಣು, ತ್ಯಾಜ್ಯ ತುಂಬಿಕೊಂಡು ಬರುತ್ತದೆ. ಅದೇ ನೀರು ಕುಡಿದರೆ ಅನಾರೋಗ್ಯ ಗ್ಯಾರೆಂಟಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಕ್ಷಣದ ಪರಿಹಾರಕ್ಕೆ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ಆರೋಗ್ಯ ಸಂಕಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.ನವ ಆನಂದನಗರದಲ್ಲಿ ಕುಡಿಯುವ ನೀರು ಸಂಪೂರ್ಣ ಅಶುದ್ಧವಾಗಿದ್ದು, ನಳದಲ್ಲೇ ಕಸ ಬೆರೆತ ನೀರು ಪೂರೈಕೆಯಾಗುತ್ತಿದೆ. ಇದು ಗಂಭೀರ ನಿರ್ಲಕ್ಷ್ಯಕ್ಕೆ ನಿದರ್ಶನ.

Apr 15, 2026 | 05:27 AM
62 0
ಕೆಜೆಪಿ ಇಲ್ಲದ ಪ್ಲಾಟ್ಗಳಿಗೆ ‘ಎ ಖಾತಾ’: ವಲಯ ಕಚೇರಿ ಸಂಖ್ಯೆ 10 ರಲ್ಲಿ ಭ್ರಷ್ಟಾಚಾರದ ಆರೋಪ

ಕೆಜೆಪಿ ಇಲ್ಲದ ಪ್ಲಾಟ್ಗಳಿಗೆ ‘ಎ ಖಾತಾ’: ವಲಯ ಕಚೇರಿ ಸಂಖ್ಯೆ 10 ರಲ್ಲಿ ಭ್ರಷ್ಟಾಚಾರದ ಆರೋಪ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ ಸಂಖ್ಯೆ 10, ಹೆಗ್ಗೇರಿಯಲ್ಲಿ ಕರ್ನಾಟಕ ಸರ್ಕಾರದ ಯೋಜನಾ ಪ್ರಾಧಿಕಾರದ (ಕೆಜೆಪಿ) ಅನುಮೋದನೆ ಇಲ್ಲದ ಒಂದು ಲೇಔಟ್ನ ನ ಪ್ಲಾಟ್ಗಳಿಗೆ ‘ಎ ಖಾತಾ’ ಮಂಜೂರು ಮಾಡಿರುವ ಆರೋಪ ಕೇಳಿ ಬಂದಿದೆ. ಸಾಮಾನ್ಯ ನಾಗರಿಕರು ಪಾಲಿಕೆ ಕಚೇರಿಗಳಲ್ಲಿ ಅಲೆದಾಡಬೇಕಾಗಿದ್ದರೂ, ಪ್ರಭಾವಿ ವ್ಯಕ್ತಿಗಳು ನಿಯಮಗಳನ್ನು ಕಡೆಗಣಿಸಿ ಸುಲಭವಾಗಿ ‘ಎ ಖಾತಾ’ ಪಡೆದುಕೊಂಡಿರುವುದು ಅನುಮಾನ ಮೂಡಿಸಿದೆ.ಈ ಲೇಔಟ್ನ ಪ್ಲಾಟ್ಗಳಿಗೆ ಕೆಜೆಪಿ ಅನುಮೋದನೆ ಇಲ್ಲದಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ಸಾಮಾನ್ಯ ನಾಗರಿಕರಿಗೆ ಸಣ್ಣ ದಾಖಲೆಗಳಿಗಾಗಿಯೇ ದಿನಗಟ್ಟಲೆ ಅಲೆಯಬೇಕಾಗುತ್ತದೆ. ಆದರೆ ಇಲ್ಲಿ ಪೂರ್ಣ ದಾಖಲೆಗಳಿಲ್ಲದಿದ್ದರೂ, ವಲಯ ಕಚೇರಿಯು ‘ಎ ಖಾತಾ’ ಮಂಜೂರು ಮಾಡಿದೆ.ಹಿಂದಿನ ಸಹಾಯಕ ಆಯುಕ್ತ ಆಸಂಗಿ ಅವರು ಆ ಲೇಔಟ್ಗೆ ಸಂಬಂಧಿಸಿದ ‘ಎ ಖಾತಾ’ ಅರ್ಜಿಗಳನ್ನು ಕಾನೂನು ಸಲಹೆಗಾರರ ಕಚೇರಿಗೆ ಪರಿಶೀಲನೆಗೆ ಕಳುಹಿಸಿ, ನಂತರವೇ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಇದೀಗ ಅಧಿಕಾರ ವಹಿಸಿಕೊಂಡಿರುವ ಸಹಾಯಕ ಆಯುಕ್ತ ಸಬರದ್ ಅವರು ಈ ಹಿಂದೆ ಇದೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಯಾವುದೇ ಪರಿಶೀಲನೆಯನ್ನು ಲೆಕ್ಕಿಸದೆ, ದಾಖಲೆಗಳ ಕೊರತೆಯಿದ್ದರೂ ತ್ವರಿತವಾಗಿ ‘ಎ ಖಾತಾ’ ಮಂಜೂರು ಮಾಡಿದ್ದಾರೆ. ಪ್ರಸ್ತುತ ಮತ್ತೆ ಅದೇ ಹುದ್ದೆಯಲ್ಲಿ ವಿರಾಜಮಾನರಾಗಿದ್ದಾರೆ.ಈ ವಿವಾದದಲ್ಲಿ ಲೇಔಟ್ನ ಸಂಬಂಧಿಸಿದ ವಾರ್ಡ್ ನ ವಸೂಲಿಗಾರ ಪಟ್ಟದಕಲ್ಲ ಅವರ ಪಾತ್ರವೂ ಪ್ರಮುಖವಾಗಿದೆ. ಆರೋಪದ ಪ್ರಕಾರ, ಈ ಶುಭ ಕಾರ್ಯದಲ್ಲಿ ಸಹಾಯಕ ಆಯುಕ್ತ ಸಬರದ್ ಅವರ ಸಹಪಾಠಿಯಾಗಿರುವ ಪಟ್ಟದಕಲ್ಲ ಅವರು ಈ ‘ಎ ಖಾತಾ’ ಮಂಜೂರಾತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅಧಿಕಾರಿ ಮತ್ತು ವಸೂಲಿಗಾರ ನಡುವಿನ ಸ್ನೇಹದ ಆಧಾರದ ಮೇಲೆ ಅಕ್ರಮವನ್ನು ಸಮರ್ಥಿಸಲಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆ (KTCP Act), 1961 ರ ಸೆಕ್ಷನ್ 14 ಮತ್ತು 17 ರ ಪ್ರಕಾರ, ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸಿ ಲೇಔಟ್ ಮಾಡಬೇಕಾದರೆ ಯೋಜನಾ ಪ್ರಾಧಿಕಾರದ (ಕೆಜೆಪಿ) ಪೂರ್ವಾನುಮತಿ ಕಡ್ಡಾಯವಾಗಿದೆ. ಅನುಮೋದನೆ ಇಲ್ಲದ ಯಾವುದೇ ಲೇಔಟ್ ಅಥವಾ ಪ್ಲಾಟ್ಗೆ ‘ಎ ಖಾತಾ’ ನೀಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಲಯ ಕಚೇರಿ ಸಂಖ್ಯೆ 10 ರ ನಿರ್ಧಾರ ಸಂಪೂರ್ಣವಾಗಿ ನಿಯಮಬಾಹಿರವಾಗಿದೆ.ಪ್ರಶ್ನೆಗಳು:- ಕೆಜೆಪಿ ಅನುಮೋದನೆ ಇಲ್ಲದ ಲೇಔಟ್ಗೆ ‘ಎ ಖಾತಾ’ ಮಂಜೂರು ಮಾಡಲು ಸಹಾಯಕ ಆಯುಕ್ತರಿಗೆ ಯಾವ ಅಧಿಕಾರ ಇತ್ತು?- ಹಿಂದಿನ ಸಹಾಯಕ ಆಯುಕ್ತರ ಕಾನೂನು ಪರಿಶೀಲನೆಯ ಆದೇಶವನ್ನು ಏಕೆ ಕಡೆಗಣಿಸಲಾಯಿತು?- ಸಹಾಯಕ ಆಯುಕ್ತ ಸಬರದ್ ಮತ್ತು ವಸೂಲಿಗಾರ ಪಟ್ಟದಕಲ್ಲ ಅವರ ನಡುವಿನ ಸಂಬಂಧದಿಂದ ಈ ನಿರ್ಧಾರ ಪ್ರಭಾವಿತವಾಗಿದೆಯೇ?ಮುಂದಿನ ಕ್ರಮ:ಸಾಕ್ಷಿ ಸಮೇತ ಈ ಪ್ರಕರಣವನ್ನು ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತರಲಾಗುವುದು. ಈ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲಾ ವ್ಯಕ್ತಿಗಳ ಮುಖವಾಡವನ್ನು ಬಯಲಿಗೆ ತರಲಾಗುವುದು. ಭ್ರಷ್ಟ ಅಧಿಕಾರಿಗಳಿಗೆ ಮತ್ತೆ ಗೇಟ್ ಪಾಸ್ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪಬ್ಲಿಕ್ ರೈಡ್ _ತಪ್ಪು ಮಾಡಿದರೆ ಬಿಡಲ್ಲ.

Apr 14, 2026 | 09:32 AM
49 0
ಕೆಜೆಪಿ ಇಲ್ಲದ ಪ್ಲಾಟ್ಗಳಿಗೆ ‘ಎ ಖಾತಾ’: ವಲಯ ಕಚೇರಿ ಸಂಖ್ಯೆ 10 ರಲ್ಲಿ ಭ್ರಷ್ಟಾಚಾರದ ಆರೋಪ

ಕೆಜೆಪಿ ಇಲ್ಲದ ಪ್ಲಾಟ್ಗಳಿಗೆ ‘ಎ ಖಾತಾ’: ವಲಯ ಕಚೇರಿ ಸಂಖ್ಯೆ 10 ರಲ್ಲಿ ಭ್ರಷ್ಟಾಚಾರದ ಆರೋಪ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ ಸಂಖ್ಯೆ 10, ಹೆಗ್ಗೇರಿಯಲ್ಲಿ ಕರ್ನಾಟಕ ಸರ್ಕಾರದ ಯೋಜನಾ ಪ್ರಾಧಿಕಾರದ (ಕೆಜೆಪಿ) ಅನುಮೋದನೆ ಇಲ್ಲದ ಒಂದು ಲೇಔಟ್ನ ನ ಪ್ಲಾಟ್ಗಳಿಗೆ ‘ಎ ಖಾತಾ’ ಮಂಜೂರು ಮಾಡಿರುವ ಆರೋಪ ಕೇಳಿ ಬಂದಿದೆ. ಸಾಮಾನ್ಯ ನಾಗರಿಕರು ಪಾಲಿಕೆ ಕಚೇರಿಗಳಲ್ಲಿ ಅಲೆದಾಡಬೇಕಾಗಿದ್ದರೂ, ಪ್ರಭಾವಿ ವ್ಯಕ್ತಿಗಳು ನಿಯಮಗಳನ್ನು ಕಡೆಗಣಿಸಿ ಸುಲಭವಾಗಿ ‘ಎ ಖಾತಾ’ ಪಡೆದುಕೊಂಡಿರುವುದು ಅನುಮಾನ ಮೂಡಿಸಿದೆ.ಈ ಲೇಔಟ್ನ ಪ್ಲಾಟ್ಗಳಿಗೆ ಕೆಜೆಪಿ ಅನುಮೋದನೆ ಇಲ್ಲದಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ಸಾಮಾನ್ಯ ನಾಗರಿಕರಿಗೆ ಸಣ್ಣ ದಾಖಲೆಗಳಿಗಾಗಿಯೇ ದಿನಗಟ್ಟಲೆ ಅಲೆಯಬೇಕಾಗುತ್ತದೆ. ಆದರೆ ಇಲ್ಲಿ ಪೂರ್ಣ ದಾಖಲೆಗಳಿಲ್ಲದಿದ್ದರೂ, ವಲಯ ಕಚೇರಿಯು ‘ಎ ಖಾತಾ’ ಮಂಜೂರು ಮಾಡಿದೆ.ಹಿಂದಿನ ಸಹಾಯಕ ಆಯುಕ್ತ ಆಸಂಗಿ ಅವರು ಆ ಲೇಔಟ್ಗೆ ಸಂಬಂಧಿಸಿದ ‘ಎ ಖಾತಾ’ ಅರ್ಜಿಗಳನ್ನು ಕಾನೂನು ಸಲಹೆಗಾರರ ಕಚೇರಿಗೆ ಪರಿಶೀಲನೆಗೆ ಕಳುಹಿಸಿ, ನಂತರವೇ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಇದೀಗ ಅಧಿಕಾರ ವಹಿಸಿಕೊಂಡಿರುವ ಸಹಾಯಕ ಆಯುಕ್ತ ಸಬರದ್ ಅವರು ಈ ಹಿಂದೆ ಇದೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಯಾವುದೇ ಪರಿಶೀಲನೆಯನ್ನು ಲೆಕ್ಕಿಸದೆ, ದಾಖಲೆಗಳ ಕೊರತೆಯಿದ್ದರೂ ತ್ವರಿತವಾಗಿ ‘ಎ ಖಾತಾ’ ಮಂಜೂರು ಮಾಡಿದ್ದಾರೆ. ಪ್ರಸ್ತುತ ಮತ್ತೆ ಅದೇ ಹುದ್ದೆಯಲ್ಲಿ ವಿರಾಜಮಾನರಾಗಿದ್ದಾರೆ.ಈ ವಿವಾದದಲ್ಲಿ ಲೇಔಟ್ನ ಸಂಬಂಧಿಸಿದ ವಾರ್ಡ್ ನ ವಸೂಲಿಗಾರ ಪಟ್ಟದಕಲ್ಲ ಅವರ ಪಾತ್ರವೂ ಪ್ರಮುಖವಾಗಿದೆ. ಆರೋಪದ ಪ್ರಕಾರ, ಈ ಶುಭ ಕಾರ್ಯದಲ್ಲಿ ಸಹಾಯಕ ಆಯುಕ್ತ ಸಬರದ್ ಅವರ ಸಹಪಾಠಿಯಾಗಿರುವ ಪಟ್ಟದಕಲ್ಲ ಅವರು ಈ ‘ಎ ಖಾತಾ’ ಮಂಜೂರಾತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅಧಿಕಾರಿ ಮತ್ತು ವಸೂಲಿಗಾರ ನಡುವಿನ ಸ್ನೇಹದ ಆಧಾರದ ಮೇಲೆ ಅಕ್ರಮವನ್ನು ಸಮರ್ಥಿಸಲಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆ (KTCP Act), 1961 ರ ಸೆಕ್ಷನ್ 14 ಮತ್ತು 17 ರ ಪ್ರಕಾರ, ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸಿ ಲೇಔಟ್ ಮಾಡಬೇಕಾದರೆ ಯೋಜನಾ ಪ್ರಾಧಿಕಾರದ (ಕೆಜೆಪಿ) ಪೂರ್ವಾನುಮತಿ ಕಡ್ಡಾಯವಾಗಿದೆ. ಅನುಮೋದನೆ ಇಲ್ಲದ ಯಾವುದೇ ಲೇಔಟ್ ಅಥವಾ ಪ್ಲಾಟ್ಗೆ ‘ಎ ಖಾತಾ’ ನೀಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಲಯ ಕಚೇರಿ ಸಂಖ್ಯೆ 10 ರ ನಿರ್ಧಾರ ಸಂಪೂರ್ಣವಾಗಿ ನಿಯಮಬಾಹಿರವಾಗಿದೆ.ಪ್ರಶ್ನೆಗಳು:- ಕೆಜೆಪಿ ಅನುಮೋದನೆ ಇಲ್ಲದ ಲೇಔಟ್ಗೆ ‘ಎ ಖಾತಾ’ ಮಂಜೂರು ಮಾಡಲು ಸಹಾಯಕ ಆಯುಕ್ತರಿಗೆ ಯಾವ ಅಧಿಕಾರ ಇತ್ತು?- ಹಿಂದಿನ ಸಹಾಯಕ ಆಯುಕ್ತರ ಕಾನೂನು ಪರಿಶೀಲನೆಯ ಆದೇಶವನ್ನು ಏಕೆ ಕಡೆಗಣಿಸಲಾಯಿತು?- ಸಹಾಯಕ ಆಯುಕ್ತ ಸಬರದ್ ಮತ್ತು ವಸೂಲಿಗಾರ ಪಟ್ಟದಕಲ್ಲ ಅವರ ನಡುವಿನ ಸಂಬಂಧದಿಂದ ಈ ನಿರ್ಧಾರ ಪ್ರಭಾವಿತವಾಗಿದೆಯೇ?ಮುಂದಿನ ಕ್ರಮ:ಸಾಕ್ಷಿ ಸಮೇತ ಈ ಪ್ರಕರಣವನ್ನು ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತರಲಾಗುವುದು. ಈ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲಾ ವ್ಯಕ್ತಿಗಳ ಮುಖವಾಡವನ್ನು ಬಯಲಿಗೆ ತರಲಾಗುವುದು. ಭ್ರಷ್ಟ ಅಧಿಕಾರಿಗಳಿಗೆ ಮತ್ತೆ ಗೇಟ್ ಪಾಸ್ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪಬ್ಲಿಕ್ ರೈಡ್ _ತಪ್ಪು ಮಾಡಿದರೆ ಬಿಡಲ್ಲ.

Apr 12, 2026 | 04:03 PM
174 0
ಇಸ್ರೇಲ್-ಇರಾನ್ ಯುದ್ಧದ ಲೈವ್ ನವೀಕರಣಗಳು: ಯುಎಸ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಲು ಪ್ರಾರಂಭಿಸುತ್ತದೆ ಎಂದು ಟ್ರಂಪ್ ಹೇಳುತ್ತಾರೆ

ಇಸ್ರೇಲ್-ಇರಾನ್ ಯುದ್ಧದ ಲೈವ್ ನವೀಕರಣಗಳು: ಯುಎಸ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಲು ಪ್ರಾರಂಭಿಸುತ್ತದೆ ಎಂದು ಟ್ರಂಪ್ ಹೇಳುತ್ತಾರೆ

U.S. ಉಪಾಧ್ಯಕ್ಷ J.D. ವ್ಯಾನ್ಸ್ ಅವರು ಭಾನುವಾರದಂದು (ಏಪ್ರಿಲ್ 12, 2026) ಪಾಕಿಸ್ತಾನದಲ್ಲಿ ವರದಿಗಾರರಿಗೆ U.S. ಅಧಿಕಾರಿಗಳು ಒಪ್ಪಂದವಿಲ್ಲದೆ ಇರಾನ್‌ನೊಂದಿಗಿನ ಮಾತುಕತೆಗಳನ್ನು ಬಿಟ್ಟು ಯುನೈಟೆಡ್ ಸ್ಟೇಟ್ಸ್‌ಗೆ ಯೋಜಿಸುತ್ತಿದ್ದಾರೆ. ಇದನ್ನೂ ಓದಿ |  ಇರಾನ್ ವಿರುದ್ಧದ ಪ್ರಚಾರವು ಮುಗಿದಿಲ್ಲ, ಅಸ್ತಿತ್ವದ ಬೆದರಿಕೆಗಳನ್ನು ತೆಗೆದುಹಾಕಲಾಗಿದೆ: ನೆತನ್ಯಾಹು ಶ್ರೀ ವಾನ್ಸ್ ಅವರು 21 ಗಂಟೆಗಳಿಗೂ ಹೆಚ್ಚು ಕಾಲ ಹರಡಿದ ತೀವ್ರ ಪ್ರಯತ್ನಗಳ ಹೊರತಾಗಿಯೂ ಎರಡು ಕಡೆ ಭಿನ್ನಾಭಿಪ್ರಾಯಗಳ ಕಂದಕವನ್ನು ನಿವಾರಿಸಲು ಸಾಧ್ಯವಾಗದ ಕಾರಣ ಇರಾನ್‌ನೊಂದಿಗೆ ಇಸ್ಲಾಮಾಬಾದ್ ಮಾತುಕತೆ ವಿಫಲವಾಗಿದೆ ಎಂದು ಹೇಳಿದರು. ಶ್ರೀ ವಾನ್ಸ್ ಅವರು ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು "ನಂಬಲಾಗದ ಅತಿಥೇಯರು" ಎಂದು ಶ್ಲಾಘಿಸಿದರು. ಪ್ರತ್ಯೇಕವಾಗಿ, ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಎಸ್ಮೈಲ್ ಬಕೈ ಅವರು ಎಕ್ಸ್ ಸಂದೇಶದಲ್ಲಿ ಎರಡು ಕಡೆ ಒಪ್ಪಂದ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಮತ್ತು "ಎರಡೂ ಕಡೆಯ ನಡುವೆ ಹಲವಾರು ಸಂದೇಶಗಳು ಮತ್ತು ಪಠ್ಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ" ಎಂದು ದೃಢಪಡಿಸಿದ್ದಾರೆ.

Apr 12, 2026 | 02:20 PM
71 0