ಕರ್ನಾಟಕ News

Discover the latest headlines in this section.

BIS ಪ್ರಮಾಣೀಕೃತ ಉತ್ಪನ್ನಗಳನ್ನೇ ಬಳಸಿ, ಸುರಕ್ಷಿತ ಜೀವನ ನಡೆಸಿ: ಡಾ. ನಾಗರಾಜು ಕೆ.ಸಿ.ಹುರುಳಿಹಳ್ಳಿಯಲ್ಲಿ BIS ವತಿಯಿಂದ SHINE ಜಾಗೃತಿ ಕಾರ್ಯಕ್ರಮ

BIS ಪ್ರಮಾಣೀಕೃತ ಉತ್ಪನ್ನಗಳನ್ನೇ ಬಳಸಿ, ಸುರಕ್ಷಿತ ಜೀವನ ನಡೆಸಿ: ಡಾ. ನಾಗರಾಜು ಕೆ.ಸಿ.ಹುರುಳಿಹಳ್ಳಿಯಲ್ಲಿ BIS ವತಿಯಿಂದ SHINE ಜಾಗೃತಿ ಕಾರ್ಯಕ್ರಮ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಭಾರತೀಯ ಮಾನಕ ಬ್ಯೂರೋ (BIS), ಬೆಂಗಳೂರು ಶಾಖೆಯ SHINE (Standards Help Inform & Nurture Empowered Women) ಯೋಜನೆಯಡಿ ಜೂನ್ 27, 2026 (ಶನಿವಾರ) ರಂದು ನೆಲಮಂಗಲ ತಾಲ್ಲೂಕಿನ ಹುರುಳಿಹಳ್ಳಿ ಗ್ರಾಮದಲ್ಲಿ ಮಹಿಳೆಯರಿಗಾಗಿ ಗ್ರಾಹಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ  ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ್ ಕೆ ಸಿ, ಮಾತನಾಡಿ "BIS ಪ್ರಮಾಣೀಕೃತ ಉತ್ಪನ್ನಗಳನ್ನೇ ಬಳಸಿ, ಸುರಕ್ಷಿತ ಜೀವನ ನಡೆಸಿ" ಎಂದು ಕರೆ ನೀಡಿದರು. ಅವರು ಭಾರತೀಯ ಮಾನಕ ಬ್ಯೂರೋ (BIS) ಕಾರ್ಯಚಟುವಟಿಕೆಗಳು, ISI ಗುರುತು, ಹಾಲ್‌ಮಾರ್ಕ್, BIS CARE ಆ್ಯಪ್, ಕಡ್ಡಾಯ BIS ಪ್ರಮಾಣೀಕರಣ ಹೊಂದಿರುವ ಉತ್ಪನ್ನಗಳು, ಗುಣಮಟ್ಟದ ಉತ್ಪನ್ನಗಳ ಆಯ್ಕೆ, ಗ್ರಾಹಕರ ಹಕ್ಕುಗಳು ಹಾಗೂ ಸುರಕ್ಷಿತ ಖರೀದಿಯ ಮಹತ್ವದ ಕುರಿತು ಮಹಿಳೆಯರಿಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಅಧ್ಯಕ್ಷ ಶ್ರೀ ರಾಮು ಹುರುಳಿಹಳ್ಳಿ ಉಪಸ್ಥಿತರಿದ್ದು, ಗ್ರಾಹಕರ ಜಾಗೃತಿ ಮತ್ತು ಗುಣಮಟ್ಟದ ಉತ್ಪನ್ನಗಳ ಬಳಕೆಯ ಅಗತ್ಯತೆಯ ಕುರಿತು ಮಾತನಾಡಿದರು.ಶ್ರೀ ವರಲಕ್ಷ್ಮಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಪಂಕಜ ಅವರ ನೇತೃತ್ವದಲ್ಲಿ 25 ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ BIS ಪ್ರಮಾಣೀಕರಣ, ISI ಗುರುತುಗಳನ್ನು ಗುರುತಿಸುವ ವಿಧಾನ, BIS CARE ಆ್ಯಪ್ ಬಳಕೆ ಹಾಗೂ ಗ್ರಾಹಕರ ಸುರಕ್ಷತೆಯ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ISI ಗುರುತುಗಳ ಮಾಹಿತಿ ಹೊಂದಿರುವ ಜಾಗೃತಿ ಕಿಟ್‌ಗಳನ್ನು ವಿತರಿಸಲಾಯಿತು.ಗುಣಮಟ್ಟದ ಉತ್ಪನ್ನಗಳ ಬಳಕೆ, ಮಹಿಳಾ ಸಬಲೀಕರಣ ಹಾಗೂ ಸುರಕ್ಷಿತ ಗ್ರಾಹಕ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಮಹಿಳೆಯರು ಹಾಗೂ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.ವರದಿ : ಪಬ್ಲಿಕ್ ರೈಡ್ ದೇವರಾಜ್

Jul 1, 2026 | 08:25 AM
99 0
ಹುಬ್ಬಳ್ಳಿ: ಗದಿಗೆಪ್ಪಗೌಡರ್ ವಿರುದ್ಧ ಜಾತಿ ನಿಂದನೆ ಆರೋಪ; ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲು

ಹುಬ್ಬಳ್ಳಿ: ಗದಿಗೆಪ್ಪಗೌಡರ್ ವಿರುದ್ಧ ಜಾತಿ ನಿಂದನೆ ಆರೋಪ; ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲು

ಹುಬ್ಬಳ್ಳಿ: ಜಾತಿ ನಿಂದನೆ ಮಾಡಿದ್ದು ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಗಿರೀಶ್ ಗದಿಗೆಪ್ಪಗೌಡರ್ ಹಾಗೂ ಹರ್ಷ ಎಂಬುವರ ವಿರುದ್ಧ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಳೇ ಹುಬ್ಬಳ್ಳಿಯ ನಿವಾಸಿ ವಿನಾಯಕ ಜಕ್ಕನೂರು ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.ದೂರಿನ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ ಕೇಶ್ವಾಪುರ ಪೂರ್ವ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದ ವಿಚಾರವಾಗಿ ದೂರುದಾರ ಹಾಗೂ ಆರೋಪಿತರ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಇತ್ತೀಚೆಗೆ ವಿನಾಯಕ ಜಕ್ಕನೂರು ಅವರು ಗೋಕುಲ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿರುವ ಸಲೂನ್‌ಗೆ ತೆರಳಿದ್ದ ವೇಳೆ ಆರೋಪಿತರು ಅವರನ್ನು ಗುರಾಯಿಸಿ ನೋಡಿದ್ದಲ್ಲದೆ, ಜಾತಿ ಹೆಸರನ್ನು ಉಲ್ಲೇಖಿಸಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಅಲ್ಲದೆ, "ನನ್ನ ಬಳಿ ಎರಡು ಗನ್‌ಗಳಿವೆ" ಎಂದು ಹೇಳಿ ಜೀವ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.ದೂರಿನ ಆಧಾರದ ಮೇಲೆ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ ಸಂಬಂಧಿತ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Jun 28, 2026 | 04:23 AM
132 0
ಮೊಹರಂ ಹಿಂದೂ ಹಾಗೂ ಮುಸ್ಲಿಂ ಬಾಂಧವರ ಬಾವೈಕತೆಗೆ ಭದ್ರ ಬುನಾದಿಯಾಗಲಿ- ಬ.ನಾ.ರವಿ

ಮೊಹರಂ ಹಿಂದೂ ಹಾಗೂ ಮುಸ್ಲಿಂ ಬಾಂಧವರ ಬಾವೈಕತೆಗೆ ಭದ್ರ ಬುನಾದಿಯಾಗಲಿ- ಬ.ನಾ.ರವಿ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ : ಮೊಹರಂ ಹಬ್ಬ ಹಿಂದೂ ಮತ್ತು ಮುಸ್ಲಿಮರು ಯಾವುದೇ ಭೇದಭಾವವಿಲ್ಲದೆ ಅತ್ಯಂತ ಸಡಗರದಿಂದ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಆಚರಿಸಲಾಗುತ್ತದೆ ಎಂದುಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ,ಹಾಗೂ ಹೆಗ್ಗನಹಳ್ಳಿ ಕಾಂಗ್ರೆಸ್ ಜಿಬಿಎ ಆಕಾಂಕ್ಷಿ  ಬ.ನಾ.ರವಿ ತಿಳಿಸಿದರು.ದಾಸರಹಳ್ಳಿ ವಿ.ಕ್ಷೇತ್ರದ ಹೆಗ್ಗನಹಳ್ಳಿಯಲ್ಲಿಮುಸ್ಲಿಂ ಬಾಂಧವರು ಅಯೋಜಿಸಲಾಗಿದ್ದ ಮೊಹರಂ ಆಚರಣೆಯಲ್ಲಿ ಹೆಗ್ಗನಹಳ್ಳಿ ಕಾಂಗ್ರೆಸ್‌ ಮುಖಂಡ ಬ.ನಾ.ರವಿ ರವರು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿ ಮುಸ್ಲಿಂ ಗುರುಗಳ ಅರ್ಶೀವಾದ ಪಡೆದರು.ತ್ಯಾಗ ಬಲಿದಾನ ಮತ್ತು ಇತಿಹಾಸದ ಮಹತ್ವವನ್ನು ಸಾರುವ ಮೊಹರಂ ಹಬ್ಬ ಈ ತಿಂಗಳಲ್ಲಿ ಧಾರ್ಮಿಕ ಆಚರಣೆ ಇದಾಗಿದ್ದು ಹಿಂದೂ ಹಾಗೂ ಮುಸ್ಲಿಂ ಬಾಂಧವರ ಬಾವೈಕತೆಗೆ ಭದ್ರ ಬುನಾದಿಯಾಗಲಿ ಎಂದು ಶುಭಕೋರಿದರು.ಈ ಸಂಧರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಎ.ವಿ ರಂಗರಾಜ್,ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಮೈಕಲ್ ಬಾಬು ,ಪಶ್ಚಿಮ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಾಜು. ಉಮೇಶ್ ಹೈದರಾಲಿ,ಮುನ್ನ ,ಶಪೀ, ಆಲಿ ಇದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Jun 26, 2026 | 12:54 PM
83 0
ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ ಬಿಜೆಪಿ

ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ ಬಿಜೆಪಿ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ ಸಮೀಪದ ವಿಡಿಯಾ ಸ್ಕೂಲ್ ಬಸ್ ನಿಲ್ದಾಣದ ಹತ್ತಿರ ಕ್ಷೇತ್ರದ ಬಿಜೆಪಿ ವತಿಯಿಂದ ಶಾಸಕ ಎಸ್. ಮುನಿರಾಜು ಅವರ ನೇತೃತ್ವದಲ್ಲಿ ತುರ್ತುಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಕಾಂಗ್ರೆಸ್ ಪಕ್ಷ ದೇಶದ ಪರ ಧ್ವನಿ ಎತ್ತಿದ ಲಕ್ಷಾಂತರ ಜನರನ್ನು ಜೈಲಿಗೆ ತಳ್ಳಿ ವಿಕೃತಿ ಮೆರೆಯಲಾಗಿತ್ತು. ಇಂತಹ ಅಸಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿದ ದೇಶದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ಮತ್ತುಕಾಂಗ್ರೆಸ್‌ನ ಈ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಇಟ್ಟ ದಿನ, ಸಂವಿಧಾನ ಹತ್ಯಾದಿವಸ್ ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೋಮಶೇಖರ್, ಸುಜಾತ ಮುನಿರಾಜು, ಉಮಾದೇವಿ ನಾಗರಾಜು, ಬಿ.ಎಂ. ನಾರಾಯಣ್, ಬಿ.ಎಸ್. ಅನಿಲ್ ಕುಮಾರ್, ಭರತ್ ಸೌಂದರ್ಯ, ಟಿ. ಶಿವಕುಮಾರ್, ಗುರುಪ್ರಸಾದ್, ವಿನೋದ್ ಗೌಡ, ಮುರಳಿ ಮುಂತಾದವರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Jun 25, 2026 | 04:08 PM
22 0
ಅಂತರರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆ: ಧಾರವಾಡ ಜಿಲ್ಲೆಯಲ್ಲಿ 49.950 ಕೆ.ಜಿ. ಗಾಂಜಾ ನಾಶ

ಅಂತರರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆ: ಧಾರವಾಡ ಜಿಲ್ಲೆಯಲ್ಲಿ 49.950 ಕೆ.ಜಿ. ಗಾಂಜಾ ನಾಶ

ಧಾರವಾಡ, ಜೂ.25: ಅಂತರರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲಾ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಜಪ್ತಪಡಿಸಿದ್ದ ಸುಮಾರು 49 ಕೆ.ಜಿ. 950 ಗ್ರಾಂ ಗಾಂಜಾವನ್ನು ಗುರುವಾರ ನಾಶಪಡಿಸಿದರು.ಪ್ರಧಾನ ಕಚೇರಿ ಬೆಂಗಳೂರು ನಿರ್ದೇಶನದಂತೆ, ಎನ್‌ಡಿಪಿಎಸ್ (NDPS) ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ಜಪ್ತಗೊಂಡ ಮಾದಕ ವಸ್ತುಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ರಚಿಸಲಾದ “ಡ್ರಗ್ ಡಿಸ್ಪೋಸಲ್ ಕಮಿಟಿ” ಸಭೆ ಜೂನ್ 17ರಂದು ನಡೆದಿದ್ದು, ಜಪ್ತ ವಸ್ತುಗಳನ್ನು ನಾಶಪಡಿಸಲು ತೀರ್ಮಾನಿಸಲಾಗಿತ್ತು.ಅದರಂತೆ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025 ಹಾಗೂ 2026ನೇ ಸಾಲಿನಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಮೂರು ಪ್ರಕರಣಗಳಲ್ಲಿ ಜಪ್ತಗೊಂಡಿದ್ದ ಗಾಂಜಾವನ್ನು (ಮಾದರಿ ಪರೀಕ್ಷೆಗಾಗಿ ಉಳಿಸಿಕೊಂಡ ಪ್ರಮಾಣ ಹೊರತುಪಡಿಸಿ) ನಾಶಪಡಿಸಲಾಯಿತು.ಹುಬ್ಬಳ್ಳಿ ತಾಲೂಕಿನ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ M/s Rio Green India Ltd (CBMWTF) ಘಟಕದಲ್ಲಿ ಗಾಂಜಾವನ್ನು ಸುಟ್ಟು ನಾಶಪಡಿಸಲಾಯಿತು.ಈ ವೇಳೆ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಧಾರವಾಡ ಗ್ರಾಮೀಣ ಉಪವಿಭಾಗದ ಡಿಎಸ್‌ಪಿ ವಿನೋದ ಮುಕ್ತೆದಾರ, ನವಲಗುಂದ ವೃತ್ತದ ಸಿಪಿಐ ರವಿ ಕಪ್ಪತ್ತನವರ ಸೇರಿದಂತೆ ಡ್ರಗ್ ಡಿಸ್ಪೋಸಲ್ ಸಮಿತಿಯ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಮಾದಕ ವಸ್ತುಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಮುಂದುವರಿಸಿದ್ದು, ಸಮಾಜವನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಹಾಗೂ ಕಾನೂನು ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Jun 25, 2026 | 02:40 PM
114 0
ಸೈಕಲ್‌ನಲ್ಲೇ ಕೃಷಿ ಕ್ರಾಂತಿ: ಕಡಿಮೆ ವೆಚ್ಚದಲ್ಲಿ ಕಳೆ ನಿಯಂತ್ರಣಕ್ಕೆ ರೈತನ ಹೊಸ ತಂತ್ರ

ಸೈಕಲ್‌ನಲ್ಲೇ ಕೃಷಿ ಕ್ರಾಂತಿ: ಕಡಿಮೆ ವೆಚ್ಚದಲ್ಲಿ ಕಳೆ ನಿಯಂತ್ರಣಕ್ಕೆ ರೈತನ ಹೊಸ ತಂತ್ರ

ದಾವಣಗೆರೆ: ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ರೈತ ದಂಪತಿಯೊಬ್ಬರು ತಮ್ಮ ಚಾತುರ್ಯದಿಂದ ಹೊಸ ಕೃಷಿ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಹರಿಹರ ತಾಲೂಕಿನ ಎರೆಹೊಸಹಳ್ಳಿ ಗ್ರಾಮದ ರೈತ ಸಂಜೀವಪ್ಪ ರೆಡ್ಡಿ ಮತ್ತು ಅವರ ಪತ್ನಿ, ಬಳಕೆಯಲ್ಲಿರದ ಹಳೆಯ ಸೈಕಲ್‌ಗೆ ಎಡೆಕುಂಟೆ ಅಳವಡಿಸಿ ಮೆಕ್ಕೆಜೋಳದ ಹೊಲದಲ್ಲಿ ಕಳೆ ತೆಗೆಯುವ ಕಾರ್ಯ ನಡೆಸುತ್ತಿದ್ದಾರೆ.ಎತ್ತುಗಳ ಕೊರತೆ, ಬಾಡಿಗೆ ದರದ ಏರಿಕೆ ಹಾಗೂ ಟ್ರ್ಯಾಕ್ಟರ್‌ಗಳಿಗೆ ಬೇಕಾಗುವ ಡೀಸೆಲ್ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳದ ಸಾಲುಗಳ ನಡುವೆ ಸೈಕಲ್ ಆಧಾರಿತ ಕುಂಟೆಯನ್ನು ಚಲಾಯಿಸುವ ಮೂಲಕ ಸುಲಭವಾಗಿ ಕಳೆ ನಿಯಂತ್ರಣ ಮಾಡುತ್ತಿದ್ದಾರೆ.ಈ ವಿಧಾನದಿಂದ ಸಮಯ ಮತ್ತು ಹಣ ಎರಡನ್ನೂ ಉಳಿತಾಯ ಮಾಡಬಹುದು. ಅಲ್ಲದೆ ಸಣ್ಣ ಮತ್ತು ಅಲ್ಪಭೂಧಾರಕ ರೈತರಿಗೆ ಇದು ಉತ್ತಮ ಪರ್ಯಾಯವಾಗಬಹುದು ಎಂದು ಸಂಜೀವಪ್ಪ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.ರೈತನ ಈ ವಿನೂತನ ಆವಿಷ್ಕಾರ ಇದೀಗ ಸುತ್ತಮುತ್ತಲಿನ ರೈತರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಡಿಮೆ ವೆಚ್ಚದ ಕೃಷಿ ತಂತ್ರಜ್ಞಾನಕ್ಕೆ ಮಾದರಿಯಾಗಿದೆ. ಕೃಷಿಯಲ್ಲಿ ಹೊಸ ಆಲೋಚನೆಗಳು ಹಾಗೂ ಸ್ಥಳೀಯ ಸಂಪನ್ಮೂಲಗಳ ಸದುಪಯೋಗದಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದನ್ನು ಈ ರೈತ ದಂಪತಿ ಸಾಬೀತುಪಡಿಸಿದ್ದಾರೆ.

Jun 24, 2026 | 07:10 AM
216 0
ನೆಲಗೆದರನಹಳ್ಳಿ ವಾರ್ಡ್ ಜಿಬಿಎ ಆಕಾಂಕ್ಷಿ,ಕೆ ಅರ್ ಎಸ್ ಪಕ್ಷದ ಕಾರ್ಯದರ್ಶಿಬಿ.ಶಿವಕುಮಾರ್ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ಗಣ್ಯರು.

ನೆಲಗೆದರನಹಳ್ಳಿ ವಾರ್ಡ್ ಜಿಬಿಎ ಆಕಾಂಕ್ಷಿ,ಕೆ ಅರ್ ಎಸ್ ಪಕ್ಷದ ಕಾರ್ಯದರ್ಶಿಬಿ.ಶಿವಕುಮಾರ್ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ಗಣ್ಯರು.

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಕರ್ನಾಟಕ ರಾಷ್ಟ್ರ ಸಮಿತಿ (ಕೆ ಅರ್ಎಸ್) ಪಾರ್ಟಿಯ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ, ಬೆ.ಉತ್ತರ ಜಿಲ್ಲೆಯ 2024ರ ಲೋಕಸಭಾ ಆಭ್ಯರ್ಥಿ ,ಸಮಾಜ ಸೇವಕರು ಹಾಗೂ ದಾಸರಹಳ್ಳಿ ಕ್ಷೇತ್ರದ ನೆಲಗೆದರನಹಳ್ಳಿ ವಾರ್ಡ್ ಜಿಬಿಎ ಆಕಾಂಕ್ಷಿ ಶಿವಕುಮಾರ್ ಬಿ ರವರ ಜನ್ಮದಿನವನ್ನು ಅಭಿಮಾನಿಗಳು ಸ್ನೇಹಿತರ ಬಳಗ ಅದ್ದೂರಿಯಾಗಿ ಆಚರಿಸಿದರು.ಈ ವೇಳೆ ಕೆ ಅರ್ ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ರಾಜ್ಯಾಧ್ಯಕ್ಷ ದೀಪಕ್, ವೀರಶೈವ ಮುಖಂಡ, ಹೆಚ್ ಎಂ ಟಿ ಲೇಔಟ್ ಸ್ನೇಹ ಜೀವಿ ಬಳಗದ ಅಧ್ಯಕ್ಷ ಎಂ ಕೆ ಜಗದೀಶ್,ಮುಖಂಡರಾದ ಸತೀಶ್ ಆರಾಧ್ಯ,ನಾಗಸಂದ್ರ ನಾಗೇಶ್,ಹರೀಶ್,ಶಿವಣ್ಣ ಮಣಿ ಓಂಕಾರ್ ,ಕುಟುಂಬಸ್ಥರಾದ ಪತ್ನಿ ಲತಾ, ಮಕ್ಕಳಾದ ಲಾವಣ್ಯ,ಸ್ವಾತಿ, ಮತ್ತಿತರ ಗಣ್ಯರು ಭಾಗವಹಿಸಿ ಶಾಲು ಹೊದಿಸಿ,ಮೈಸೂರು ಪೇಟ ತೊಡಿಸಿ ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ಹುಟ್ಟುಹಬ್ಬಕ್ಕೆ ಶುಭಕೋರಿದರುವರದಿ : ಪಬ್ಲಿಕ್ ರೈಡ್ ದೇವರಾಜ್

Jun 22, 2026 | 04:06 AM
80 0
ಹುಬ್ಬಳ್ಳಿ ಪೂರ್ವ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಲು ವ್ಯಾಪಾರಿಗಳ ಆಗ್ರಹ

ಹುಬ್ಬಳ್ಳಿ ಪೂರ್ವ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಲು ವ್ಯಾಪಾರಿಗಳ ಆಗ್ರಹ

ಹುಬ್ಬಳ್ಳಿ: ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ನಗರದ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.ನಗರದ ಜವಳಿಸಾಲ ಹಿರೇಪೇಟೆ ವೃತ್ತದಲ್ಲಿ ನಡೆದ ಸಮೂಹ ವರ್ತಕರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.ಸಭೆಯಲ್ಲಿ ಮಾತನಾಡಿದ ಮುಖಂಡರು, ಶಾಸಕ ಪ್ರಸಾದ್ ಅಬ್ಬಯ್ಯ ಅವರು ಹುಬ್ಬಳ್ಳಿ ಪೂರ್ವ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ದಾಖಲಿಸಿರುವುದಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಅವರಂತಹ ಅನುಭವಿಗಳಾದ ನಾಯಕರಿಗೆ ಸಚಿವ ಸ್ಥಾನ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.ಈ ಭಾಗಕ್ಕೆ ಸಚಿವ ಸ್ಥಾನ ದೊರೆತಲ್ಲಿ ಸರ್ಕಾರದ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದು ವ್ಯಾಪಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ತಾರಾದೇವಿ ವಾಲಿ, ವಿಜಯಕುಮಾರ್ ಅಳಗುಂಡಗಿ, ಚಂದ್ರಶೇಖರ ಅಳಗುಂಡಗಿ, ಅನ್ವರ ಮುಧೋಳ, ಮೋಹನ ಸವಣೂರ, ಗೌತಮ ಜೈನ್, ಗೋವಿಂದ ಶರ್ಮಾ, ತೇಜಾರಾಮ್ ಪಾಟೀಲ್, ನರೇಂದ್ರ ಜೈನ್, ಲಲಿತ ಜೈನ್ ಹಾಗೂ ಪತ್ರಕರ್ತ ಜಗದೀಶ್ ಬುರ್ಲಬುಡ್ಡಿ ಸೇರಿದಂತೆ ವರ್ತಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Jun 20, 2026 | 07:55 AM
33 0
ಜನರ ಸಮಸ್ಯೆ ಬಗೆಹರಿಸಿದ ಸಾರ್ಥಕತೆ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಜನರ ಸಮಸ್ಯೆ ಬಗೆಹರಿಸಿದ ಸಾರ್ಥಕತೆ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಅಪಾಯಕಾರಿ 33 ಕೆವಿ ವಿದ್ಯುತ್‌ ಲೈನ್‌ ಸ್ಥಳಾಂತರಶಿಗ್ಗಾಂವಿ, ಜೂ 19, 2026:ಪಟ್ಟಣದ ಮೊಲಾಲಿ ನಗರದ ಜನರ ಹಲವು ವರ್ಷಗಳಿಂದ ಇದ್ದ ಸಮಸ್ಯೆ ಬಗೆಹರಿಸಿದ ಸಾರ್ಥಕ ಸೇವೆಯ ಮನೋಭಾವ ನನ್ನಲ್ಲಿ ಮೂಡಿದೆ ಎಂದು ಹೆಸ್ಕಾಂನ ಅಧ್ಯಕ್ಷರಾದ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ ಅವರು ಹೇಳಿದ್ದಾರೆ. ಮೊಲಾಲಿ ನಗರದ 33 ಕೆ.ವಿ. ವಿದ್ಯುತ್‌ ಲೈನ್‌ ಸ್ಥಳಾಂತರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮೊಲಾಲಿ ನಗರದ ಮನೆಗಳ ಮೇಲೆ 33 ಕೆ.ವಿ ವಿದ್ಯುತ್‌ ಲೈನ್‌ ಹಾದು ಹೋಗಿದ್ದವು. ಮನೆಗಳ ಛಾವಣಿಗಳ ಮೇಲೆ ಹತ್ತಿದರೆ ಕೈಗೆಟುಕ ಅಂತರದಲ್ಲಿ ಲೈನ್‌ಗಳಿದ್ದವು. ಪರಿಣಾಮ ಹಲವು ಬಾರಿ ವಿದ್ಯುತ್‌ ಅವಘಡಗಳ ಸಂಭವಿಸಿ ಪ್ರಾಣಹಾನಿಯಂತಹ ಘಟನೆಗಳು ಕೂಡ ನಡೆದಿದ್ದವು. ಇದೊಂದು ಗಂಭೀರ ಸಮಸ್ಯೆಯಾಗಿತ್ತು. ಇಲ್ಲಿನ ಜನರು ಸದಾ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದರು. ಇದೀಗ ಸಮಸ್ಯೆ ಬಗೆಹರಿಸಲಾಗಿದೆ," ಎಂದರು. "ಮೊಲಾಲಿ ನಗರವಾಸಿಗಳು ತಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದರು. ನಾನು ಕೂಡ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದೆ. ಕಳೆದ ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರೂ.38 ಲಕ್ಷ ಅನುದಾನದಲ್ಲಿ ವಿದ್ಯುತ್‌ ಲೈನ್‌ಗಳನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ಮಾಡಿದ್ದೇನೆ. ಈ ಮೂಲಕ ಈ ಜನರ ಬಹು ವರ್ಷಗಳ ಸಮಸ್ಯೆಯನ್ನು ಬಗೆಹರಿಸಿದ ಸಂತೋಷ ನನಗಾಗಿದೆ," ಎಂದು ಹೇಳಿದರು.ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು, ಪಟ್ಟಣದ ಹಿರಿಯರು, ಮುಖಂಡರು ಸೇರಿದಂತೆ ಹಲವು ಉಪಸ್ಥಿತರಿದ್ದರು.

Jun 19, 2026 | 04:29 PM
27 0
ಜನರ ಸಮಸ್ಯೆ ಬಗೆಹರಿಸಿದ ಸಾರ್ಥಕತೆ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಜನರ ಸಮಸ್ಯೆ ಬಗೆಹರಿಸಿದ ಸಾರ್ಥಕತೆ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಅಪಾಯಕಾರಿ 33 ಕೆವಿ ವಿದ್ಯುತ್‌ ಲೈನ್‌ ಸ್ಥಳಾಂತರಶಿಗ್ಗಾಂವಿ, ಜೂ 19, 2026:ಪಟ್ಟಣದ ಮೊಲಾಲಿ ನಗರದ ಜನರ ಹಲವು ವರ್ಷಗಳಿಂದ ಇದ್ದ ಸಮಸ್ಯೆ ಬಗೆಹರಿಸಿದ ಸಾರ್ಥಕ ಸೇವೆಯ ಮನೋಭಾವ ನನ್ನಲ್ಲಿ ಮೂಡಿದೆ ಎಂದು ಹೆಸ್ಕಾಂನ ಅಧ್ಯಕ್ಷರಾದ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ ಅವರು ಹೇಳಿದ್ದಾರೆ. ಮೊಲಾಲಿ ನಗರದ 33 ಕೆ.ವಿ. ವಿದ್ಯುತ್‌ ಲೈನ್‌ ಸ್ಥಳಾಂತರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮೊಲಾಲಿ ನಗರದ ಮನೆಗಳ ಮೇಲೆ 33 ಕೆ.ವಿ ವಿದ್ಯುತ್‌ ಲೈನ್‌ ಹಾದು ಹೋಗಿದ್ದವು. ಮನೆಗಳ ಛಾವಣಿಗಳ ಮೇಲೆ ಹತ್ತಿದರೆ ಕೈಗೆಟುಕ ಅಂತರದಲ್ಲಿ ಲೈನ್‌ಗಳಿದ್ದವು. ಪರಿಣಾಮ ಹಲವು ಬಾರಿ ವಿದ್ಯುತ್‌ ಅವಘಡಗಳ ಸಂಭವಿಸಿ ಪ್ರಾಣಹಾನಿಯಂತಹ ಘಟನೆಗಳು ಕೂಡ ನಡೆದಿದ್ದವು. ಇದೊಂದು ಗಂಭೀರ ಸಮಸ್ಯೆಯಾಗಿತ್ತು. ಇಲ್ಲಿನ ಜನರು ಸದಾ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದರು. ಇದೀಗ ಸಮಸ್ಯೆ ಬಗೆಹರಿಸಲಾಗಿದೆ," ಎಂದರು. "ಮೊಲಾಲಿ ನಗರವಾಸಿಗಳು ತಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದರು. ನಾನು ಕೂಡ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದೆ. ಕಳೆದ ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರೂ.38 ಲಕ್ಷ ಅನುದಾನದಲ್ಲಿ ವಿದ್ಯುತ್‌ ಲೈನ್‌ಗಳನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ಮಾಡಿದ್ದೇನೆ. ಈ ಮೂಲಕ ಈ ಜನರ ಬಹು ವರ್ಷಗಳ ಸಮಸ್ಯೆಯನ್ನು ಬಗೆಹರಿಸಿದ ಸಂತೋಷ ನನಗಾಗಿದೆ," ಎಂದು ಹೇಳಿದರು.ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು, ಪಟ್ಟಣದ ಹಿರಿಯರು, ಮುಖಂಡರು ಸೇರಿದಂತೆ ಹಲವು ಉಪಸ್ಥಿತರಿದ್ದರು.

Jun 19, 2026 | 04:29 PM
3 0
ಸಮಾಜ ಸೇವೆಗಾಗಿ ನೇಸರ ಫೌಂಡೇಶನ್ ಆರಂಭ

ಸಮಾಜ ಸೇವೆಗಾಗಿ ನೇಸರ ಫೌಂಡೇಶನ್ ಆರಂಭ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:' ಬಡ ಜನರಿಗೆ ನೆರವಾಗಲು ಮತ್ತು ಸಮಾಜ ಸೇವೆಗೆಂದೇ ನೇಸರ ಫೌಂಡೇಶನ್ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯ'ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಬಸ್ ನಿಲ್ದಾಣದ ಹತ್ತಿರ ವಿಸ್ಟಾ ಸೂಟ್ಸ್ ಬಿಲ್ಡಿಂಗ್ ನಲ್ಲಿ ನೇಸರ ಫೌಂಡೇಶನ್ ಕಚೇರಿ ಉದ್ಘಾಟಿಸಿ ಮಾತನಾಡಿದರು.ಸಮಾಜದ ಏಳಿಗೆಗೆ ಮತ್ತು ಬಡಜನರ ಬಾಳಿಗೆ ಬೆಳಕಾಗಿ ಕೊಡಗೆ ನೀಡಿದಾಗ ಸಿಗುವ ತೃಪ್ತಿ ತಮ್ಮ ಮನೆಗೆ ಮಾಡಿದ ಕಾರ್ಯದಲ್ಲಿ ಸಿಗುವುದಿಲ್ಲ. ಆದ್ದರಿಂದ ಸಂಸ್ಥೆ ನಿಂತ ನೀರಾಗದೆ ಹರಿಯುವ ನೀರಿನಂತೆ ಕ್ರಿಯಾಶೀಲವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಿ'ಎಂದು ಸಲಹೆ ನೀಡಿದರು.ನೇಸರ ಫೌಂಡೇಶನ್ ಸಂಸ್ಥಾಪಕ ಬಿ.ಎಸ್. ಅನಿಲ್ ಕುಮಾರ್ ಮಾತನಾಡಿ,' ಈಗಾಗಲೇ ಆರೋಗ್ಯ ಶಿಬಿರ, ರಕ್ತದಾನ ಶಿಬಿರ,ಮರಬಿದ್ದ ಜಾಗದಲ್ಲಿ ಗಿಡ ನೆಟ್ಟು ಪೋಷಣೆ ಕಾರ್ಯ ಕೈಗೊಂಡಿದ್ದೇವೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು, ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತೇವೆ'ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸುಜಾತ ಮುನಿರಾಜು, ಸ್ವಪ್ನ, ಮಾಜಿ ಉಪಮೇಯರ್ ಹರೀಶ್ ನೂರಾರು ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.  ವರದಿ : ಪಬ್ಲಿಕ್ ರೈಡ್ ದೇವರಾಜ್

Jun 19, 2026 | 03:22 AM
74 0
ಹುಬ್ಬಳ್ಳಿಯ ಹೊಸೂರು ವೃತ್ತದಲ್ಲಿ ಭೀಕರ ಅಪಘಾತ ತಪ್ಪಿದ ಘಟನೆ: ಕ್ಷಣ ಮಾತ್ರದಲ್ಲಿ ಪಾರಾದ ಸ್ಕೂಟಿ ಚಾಲಕ

ಹುಬ್ಬಳ್ಳಿಯ ಹೊಸೂರು ವೃತ್ತದಲ್ಲಿ ಭೀಕರ ಅಪಘಾತ ತಪ್ಪಿದ ಘಟನೆ: ಕ್ಷಣ ಮಾತ್ರದಲ್ಲಿ ಪಾರಾದ ಸ್ಕೂಟಿ ಚಾಲಕ

ಹುಬ್ಬಳ್ಳಿ, ಜೂನ್ 17: ನಗರದ ಹೊಸೂರು ವೃತ್ತದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟಿ ಚಾಲಕನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಸ್ಕೂಟಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಲಾರಿಯ ಕೆಳಗೆ ಸಿಲುಕಿಕೊಂಡಿದೆ. ಆದರೆ ಅಪಾಯವನ್ನು ಅರಿತ ಸ್ಕೂಟಿ ಚಾಲಕ ಕೂಡಲೇ ವಾಹನದಿಂದ ಜಿಗಿದು ಮುಂದೆ ಓಡಿದ ಪರಿಣಾಮ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ.ಘಟನೆಯಿಂದ ಕೆಲಕಾಲ ಹೊಸೂರು ವೃತ್ತದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಸ್ಥಳೀಯರು ಮತ್ತು ವಾಹನ ಸವಾರರು ಘಟನೆಯ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಕುರಿತು ಸ್ಥಳೀಯ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆಯೇ ಎಂಬ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Jun 17, 2026 | 12:16 PM
276 0