ಕರ್ನಾಟಕ News

Discover the latest headlines in this section.

ದೇವೇಗೌಡರ 94 ನೇ ಜನ್ಮೋತ್ಸವದ ಅಂಗವಾಗಿ ಸಾವಿರಾರು ಜನರಿಗೆ ಭರ್ಜರಿ ನಾನ್ ವೆಜ್ ಊಟ.ಭಾರತರತ್ನ ಪುರಸ್ಕಾರ ನೀಡುವಂತೆ ಕೇಂದ್ರಕ್ಕೆ ಒತ್ತಾಯ.

ದೇವೇಗೌಡರ 94 ನೇ ಜನ್ಮೋತ್ಸವದ ಅಂಗವಾಗಿ ಸಾವಿರಾರು ಜನರಿಗೆ ಭರ್ಜರಿ ನಾನ್ ವೆಜ್ ಊಟ.ಭಾರತರತ್ನ ಪುರಸ್ಕಾರ ನೀಡುವಂತೆ ಕೇಂದ್ರಕ್ಕೆ ಒತ್ತಾಯ.

ಪಬ್ಲಿಕ್ ರೈಡ್ ನ್ಯೂಸ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜೇಶ್ವರಿನಗರದಲ್ಲಿ ಮಾಜಿ ನಗರಸಭೆ ಸದಸ್ಯ,ರಾಜ್ಯ ಜೆಡಿಎಸ್ ಕಾರ್ಯದರ್ಶಿಎಂ‌ ಶಿವಣ್ಣ ಹಾಗೂ ರಾಜಗೋಪಾಲನಗರ ವಾರ್ಡ್ ಹಾಗೂ ರಾಜೇಶ್ವರಿನಗರ ವಾರ್ಡ್ ಅಧ್ಯಕ್ಷ ಕೆ. ತಿಮ್ಮರಾಜು ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಜನ್ಮದಿನವನ್ನು ಬೃಹತ್ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹಬ್ಬದ ರೀತಿಯಲ್ಲಿ ಸಾವಿರಾರು ಜನಗಳಿಗೆ ಭರ್ಜರಿ ಬಾಡೂಟ ಏರ್ಪಡಿಸಿ ಆಚರಿಸಿದರು.ಈ ವೇಳೆ ಮಾಜಿ ನಗರಸಭೆ ಸದಸ್ಯ,ರಾಜ್ಯ ಕಾರ್ಯದರ್ಶಿಎಂ‌ ಶಿವಣ್ಣ ಮಾತನಾಡಿ ಇಡೀ ದೇಶದ ರಾಜಕಾರಣದಲ್ಲಿ ದೇವೇಗೌಡರು ಭೀಷ್ಮ ಇದ್ದಹಾಗೆ ,ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿಯಾಗಿದ್ದಾಗ ಅನೇಕ ನೀರಾವರಿ ಯೋಜನೆಗಳನ್ನು ತಂದು ಹಸಿರು ಕ್ರಾಂತಿಗೆ ಮುನ್ನಡಿ ಬರೆದವರು.ಅವರು ತಮ್ಮ ವಯಸ್ಸನ್ನು ಲೆಕ್ಕಿಸದೆ ಅನೇಕ ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯ ಕ್ರೀಯಾ ಶೀಲರಾಗಿ ಈ  ಇಳಿವಯಸ್ಸಿನಲ್ಲೂ ಕೂಡ ರಾಷ್ಟ್ರದ ರಾಜ್ಯದ ಪ್ರಗತಿಗೆ ,ರೈತರ ಏಳ್ಗಗೆಗೆ ಸದಾ ಶ್ರಮಿಸುತ್ತಿರುವ ಹಿರಿಯ ಜೀವ ದೇವೇಗೌಡರು ಅಂತವರಿಗೆ ಭಾರತ ರತ್ನ ಪುರಸ್ಕಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು  ರಾಜ್ಯದ ಎಲ್ಲಾ ರಾಜಕಾರಣಿಗಳು ಹಾಗೂ ಪಕ್ಷದ ಮುಖಂಡರು ಒತ್ತಾಯ ಮಾಡಬೇಕು ಎಂದು ತಿಳಿಸಿದರು ಈ ಸಂಧರ್ಭದಲ್ಲಿರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಅಂದಾನಪ್ಪರಾಜ್ಯ ವಕ್ತಾರರಾದ ದೇವರಾಜು,ಕ್ಷೇತ್ರದ ಅಧ್ಯಕ್ಷ ಎಂ ಮುನಿಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿ ಜಯಣ್ಣ,ಯೂತ್ ಜನತಾದಳದ ಅಧ್ಯಕ್ಷ ವಿನಯ್ ಎಂ ಶಿವಣ್ಣ, ಕ್ಷೇತ್ರದ ಮಹಿಳಾ ಅಧ್ಯಕ್ಷೆ ಛಾಯ, ಪಾರ್ವತಿನಗರ ವಾರ್ಡ್ ಅಧ್ಯಕ್ಷ ಶಿವೇಗೌಡ,ಚೊಕ್ಕಸಂದ್ರ ವಾರ್ಡ್ ಅಧ್ಯಕ್ಷ ಕದರೇಶ್,ಲಗ್ಗೆರೆ ವಾರ್ಡ್ ಜಿಬಿಎ ಆಕಾಂಕ್ಷಿ ಬೈರಪ್ಪ, ಜೆಡಿಎಸ್ ಮುಖಂಡರಾದ ಸಿಜೆ ರಮೇಶ್, ಕೆಂಪೇಗೌಡ ಅಭಿವೃದ್ಧಿ ಟ್ರಸ್ಟಿನ ಸದಸ್ಯ ಬಿಕೆ ಮಲ್ಲೇಶ್ ,ವೇಂಕಟೇಶ್, ಕೃಷ್ಣ ,ಶ್ರೀನಿವಾಸ್, ಸುಂದರ್, ವಿನಯ್ ಕೃಷ್ಣಪ್ಪ ,ಪ್ರಶಾಂತ್ ಕೌರವ,ಲೋಕಿ ,ಗಿರೀಶ್, ಶ್ರೀನಾಥ್, ನಾಗಭೂಷಣ್,ವರದಿ : ಪಬ್ಲಿಕ್ ರೈಡ್ ದೇವರಾಜ್

May 24, 2026 | 06:06 AM
13 0
"ಮಾರಮ್ಮ ದೇವಿ ಜಾತ್ರಾ ನಿಮಿತ್ಯ ಕಾಂಗ್ರೆಸ್ ಮುಖಂಡ ಆರ್  ಮುನಿರಾಜುನ ಮನೆಯ ಭೋಜನ ಕೂಟದಲ್ಲಿ  ಪಾಲ್ಗೊಂಡ ಮಾಜಿ ಶಾಸಕ ಆರ್ ಮಂಜುನಾಥ್ "

"ಮಾರಮ್ಮ ದೇವಿ ಜಾತ್ರಾ ನಿಮಿತ್ಯ ಕಾಂಗ್ರೆಸ್ ಮುಖಂಡ ಆರ್ ಮುನಿರಾಜುನ ಮನೆಯ ಭೋಜನ ಕೂಟದಲ್ಲಿ ಪಾಲ್ಗೊಂಡ ಮಾಜಿ ಶಾಸಕ ಆರ್ ಮಂಜುನಾಥ್ "

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ನೆಲಗೆದರನಹಳ್ಳಿಯ ಪ್ರಸಿದ್ಧ ಶಕ್ತಿ ದೇವತೆ ಮಾರಮ್ಮ ದೇವಿಯ ಪರಮ ಭಕ್ತರು ಗ್ರಾಮದ ಯುವ ಮುಖಂಡರು ಹಾಗೂ ಮಾಜಿ ನಗರ ಸಭಾ ಸದಸ್ಯೆ ಮರೇಮ್ಮ  ರಾಜಣ್ಣ ಪಂಡರಹಳ್ಳಿ ಅವರ ಸುಪುತ್ರ ಕಾಂಗ್ರೆಸ್ ಪ್ರಭಾವಿ ನಾಯಕ ಆರ್ ಮುನಿರಾಜು ಅವರು ತಮ್ಮ ತಂದೆ ತಾಯಿಯ ಪುರಾತನ ಕಾಲದಿಂದಲೂ ನಡೆದು ಕೊಂಡು ಬಂದ ಸಂಪ್ರದಾಯ ಮಾರ್ಗದರ್ಶದಂತೆ ತಾಯಿ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಆಚರಿಸಿಕೊಂಡು ಬರುವ ಮೂಲಕ ಸಹಸ್ರಾರು ಸಾರ್ವಜನಿಕ ಬಂದು ಭಗನಿಯರಿ ಗೆ ಪ್ರೀತಿಯ ಭೋಜನ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ  ಮಾಜಿ ಶಾಸಕ ಆರ್ ಮಂಜುನಾಥ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಶಾಲು ಹೊದಿಸಿ ಫಲಪುಷ್ಪ ದೊಂದಿಗೆ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಆರ್ ಮುನಿರಾಜು ಅವರ ಧರ್ಮಪತ್ನಿ ಮಕ್ಕಳು ಮತ್ತು ಕುಟುಂಬಸ್ಥರು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದು ಭೋಜನ ಸ್ವೀಕರಿಸಿ ಮುನಿರಾಜು ಅವರಿಗೆ  ಕುಟುಂಬಸ್ಥರಿಗೆ ಶುಭ ಹಾರೈಸಿದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 23, 2026 | 02:22 PM
29 0
ದಾಸರಹಳ್ಳಿ ಸಮಾಜಸೇವಕ ಎನ್ ಪಿ ಮುನಿಕೃಷ್ಣರವರ ಮನೆಗೆ ಶಾಸಕ ಎಸ್ ಮುನಿರಾಜು  ಸೌಹಾರ್ಧ ಭೇಟಿ.

ದಾಸರಹಳ್ಳಿ ಸಮಾಜಸೇವಕ ಎನ್ ಪಿ ಮುನಿಕೃಷ್ಣರವರ ಮನೆಗೆ ಶಾಸಕ ಎಸ್ ಮುನಿರಾಜು ಸೌಹಾರ್ಧ ಭೇಟಿ.

ಪಬ್ಲಿಕ್ ರೈಡ್ ನ್ಯೂಸ್ ಜಾತ್ರೆ ಹಬ್ಬ ಹರಿದಿನಗಳಲ್ಲಿ ನಮ್ಮ ಜನರು ಜಾತಿ, ಮತ, ಭೇದಗಳನ್ನೆಲ್ಲ ಮರೆತು ಎಲ್ಲರೂ ಒಂದಾಗಿ ಸೇರಲು ಸಹಕಾರಿ. ಈ ಭವ್ಯ ಆಚರಣೆಯು ನಮ್ಮ ಜನರ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಶ್ರೀ ಮಹೇಶ್ವರಮ್ಮ ದೇವಿಯು ನಮ್ಮ ದಾಸರಹಳ್ಳಿ ಕ್ಷೇತ್ರದ ಸಮಸ್ತ ಜನತೆಗೆ ಆಯಸ್ಸು,ಆರೋಗ್ಯ, ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ,ಹಾಗೂ ದಾಸರಹಳ್ಳಿಯಲ್ಲಿ   ದಂಪತಿಗಳು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲು ಶ್ರೀ ನೆಲೆ ಮಹೇಶ್ವರಮ್ಮನ ಕೃಪೆ ಅವರ ಮೇಲಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ', ಎಂದು ಶಾಸಕ ಎಸ್ ಮುನಿರಾಜು ಹೇಳಿದರು.ದಾಸರಹಳ್ಳಿ ವಾರ್ಡಿನ  ಸಮಾಜಸೇವಕರಾದ  ಎನ್‌.ಪಿ‌.ಮುನಿಕೃಷ್ಣ,ಶಿಲ್ಪಾ ಎನ್ ಪಿ ಮುನಿಕೃಷ್ಣರವರು ಕುಟುಂಬದವರು ಉರಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಭೋಜನ ಕೂಟದಲ್ಲಿ ಭಾಗವಹಿಸಿ ಉಭಯ ಕುಶಲೋಪರಿ ವಿಚಾರಿಸಿದರು. ಈ ವೇಳೆ ಶಾಸಕ ಎಸ್ ಮುನಿರಾಜು ರವರಿಗೆ ಶ್ರೀ ಸೀತಾರಾಮ ಲಕ್ಷ್ಮಣ ಸಮೇತ ಅಂಜನೇಯನ ವಿಗ್ರಹ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರು ಭಜಪ್ಪ, ರಿಷಿತ್ ಎಂ ಮುನಿಕೃಷ್ಣ, ಕೃಷ್ಣಪ್ಪ, ಬಾಬು ಸಿಂಗ್, ಆರ್ ಎಸ್ ಎಸ್ ಅಮರ್, ಎಂ. ಮುನಿರಾಜು, ವೇಮಾಚ ಲಾರೆಡ್ಡಿ, ಕೇಬಲ್ ಜಗದೀಶ್, ಇರ್ಫಾನ್, ಗಿಡ್ಡು, ಮಹೇಶ್ವರಿ ವಿನಾಯಕ ಗೆಳೆಯರ ಬಳಗದ ಚೇತನ್ ಕುಮಾರ್, ಶ್ರೀನಿವಾಸ್, ಚೇತನ್ ಕೃಷ್ಣಪ್ಪ, ನಾಗರಾಜು, ಸೂರಿ, ಪ್ರಸಾದ್ ಎಸ್, ಮಲ್ಲಿಕಾರ್ಜುನ್, ಯೋಗೇಂದ್ರ ನಾಥ್ ಸೇರಿದಂತೆ ಹಲವಾರು ಗಣ್ಯರು,ಕುಟುಂಬಸ್ಥರು, ನೂರಾರು ಸಂಖ್ಯೆಯಲ್ಲಿ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರುವರದಿ : ಪಬ್ಲಿಕ್ ರೈಡ್ ದೇವರಾಜ್

May 22, 2026 | 12:34 PM
15 0
ಎಂಇಐ ಬಡಾವಣೆಯ ಕುಂದು ಕೊರತೆಗಳ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ: ಶಾಸಕ ಎಸ್. ಮುನಿರಾಜು

ಎಂಇಐ ಬಡಾವಣೆಯ ಕುಂದು ಕೊರತೆಗಳ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ: ಶಾಸಕ ಎಸ್. ಮುನಿರಾಜು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಬಾಗಲಗುಂಟೆ ವಾರ್ಡ್ ಎಂಇಐ ಬಡಾವಣೆಯಲ್ಲಿನ ಕುಂದು ಕೊರತೆಗಳನ್ನು ಬಗೆಹರಿಸಲು ಎಲ್ಲಾ ವಿಭಾಗದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ಸೂಕ್ತ ಕ್ರಮ ವಹಿಸಬೇಕು ಎಂದು ಶಾಸಕ ಎಸ್. ಮುನಿರಾಜು ಅಧಿಕಾರಿಗಳಿಗೆ ಸೂಚಿಸಿದರು.      ಎಂಇಐ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ್ ಗೌಡ್ರು ನೇತೃತ್ವದಲ್ಲಿಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಶಾಸಕ ಮುನಿರಾಜು ಅವರು ಇಂದು ಸ್ಥಳ ಪರಿಶೀಲಿಸಿದರು.      ಕಸದ ಸಮಸ್ಯೆ,ನೂತನ ಮನೆ ಕಟ್ಟುವವರ ಮನೆಯ ನಕ್ಷೆ ಪರಿಶೀಲನೆ, ಚರಂಡಿಯಲ್ಲಿ ಮಣ್ಣು ಸುರಿಯುವವರ ವಿರುದ್ಧ ಕ್ರಮ, ಉದ್ಯಾನದ ಪಕ್ಕದ ರಸ್ತೆಗಳಲ್ಲಿ ವಾರಗಟ್ಟಲೆ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ, ವಿದ್ಯುತ್ ತಂತಿಗಳಿಗೆ ಅಡ್ಡಿಪಡಿಸುವ ಕೊಂಬೆಗಳ ಕತ್ತರಿಸುವಿಕೆ, ಬಿಬಿಎಂಪಿ ಹಿಂಭಾಗದ ಗ್ರೌಂಡ್ ಸುತ್ತಲೂ ತಂತಿ ಬೇಲಿ ಮತ್ತು ಗೇಟ್ ಅಳವಡಿಕೆ, ಉದ್ಯಾನದಲ್ಲಿರುವ ಶೌಚಾಲಯ ಬಳಸಲು ಸರಿಪಡಿಸುವುದು, ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ಕ್ರಮ ಇನ್ನು ಮುಂತಾದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಆಯಾ ವಿಭಾಗದ ಅಧಿಕಾರಿಗಳಿಗೆ ಶಾಸಕ ಎಸ್ ಮುನಿರಾಜು ಖಡಕ್ ಸೂಚನೆ ನೀಡಿದರು.       ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದಗುರು ಪ್ರಸಾದ್,ಲಕ್ಷ್ಮೀ ವೆಂಕಟೇಶ, ಕೃಷ್ಣಮೂರ್ತಿ, ಮಧುಸೂದನ್ ಸೇರಿದಂತೆ ಜಿಬಿಎ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು,ಸಂಚಾರ ಪೋಲೀಸರು ಹಾಗೂ ಸುತ್ತಮುತ್ತಲ ನಿವಾಸಿಗಳು ಇದ್ದರು.ವರದಿ :  ಪಬ್ಲಿಕ್ ರೆಡ್ ದೇವರಾಜ್

May 22, 2026 | 12:31 PM
35 0
ಬಳ್ಳಾರಿಯಲ್ಲಿ ದುರಂತ ಪತಿ ಹಾಗೂ ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಬಳ್ಳಾರಿಯಲ್ಲಿ ದುರಂತ ಪತಿ ಹಾಗೂ ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಬಳ್ಳಾರಿ: ಪತಿ ಹಾಗೂ ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬರು ಡೆತ್ ನೋಟ್ ಬರೆದು ನೇಣಿಗೆ ಶರಣಾದ ದುರ್ಘಟನೆ ಬಳ್ಳಾರಿ ಜಿಲ್ಲೆಯ Kampli ಪಟ್ಟಣದಲ್ಲಿ ನಡೆದಿದೆ.ಐಶ್ವರ್ಯ (24) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯರಾಗಿರುವ ಪ್ರದೀಪ್ ಕುಮಾರ್ ಅವರು ಐಶ್ವರ್ಯಳನ್ನು ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.ಮದುವೆಯಾದ ದಿನದಿಂದಲೇ ಪತಿ ಪ್ರದೀಪ್ ಕುಮಾರ್ ಹಾಗೂ ಅತ್ತೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅತ್ತೆಯ ಕಿರುಕುಳ ಹೆಚ್ಚಾಗಿದ್ದರೂ ಪತಿ ಪತ್ನಿಯ ಬೆಂಬಲಕ್ಕೆ ನಿಲ್ಲದೆ ನಿರ್ಲಕ್ಷ್ಯ ವಹಿಸುತ್ತಿದ್ದನೆಂದು ಆರೋಪಿಸಲಾಗಿದೆ.ಮಾನಸಿಕ ಹಿಂಸೆ ತಾಳಲಾರದೆ ಬೇಸತ್ತ ಐಶ್ವರ್ಯ ತವರು ಮನೆಗೆ ಬಂದು ಆತ್ಮಹತ್ಯೆಗೆ ನಿರ್ಧಾರ ಮಾಡಿಕೊಂಡಿದ್ದು, ನೇಣಿಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಡೆತ್ ನೋಟ್‌ನಲ್ಲಿ ಆತ್ಮಹತ್ಯೆಗೆ ಕಾರಣಗಳನ್ನೂ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ Kampli Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತಿ ಪ್ರದೀಪ್ ಕುಮಾರ್ ಹಾಗೂ ಅವರ ತಾಯಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

May 20, 2026 | 03:57 AM
170 0
ಐತಿಹಾಸಿಕ ಮಹೇಶ್ವರಮ್ಮ  ದೇವಸ್ಥಾನದಲ್ಲಿ ಆರತಿ ಮೆರವಣಿಗೆ

ಐತಿಹಾಸಿಕ ಮಹೇಶ್ವರಮ್ಮ ದೇವಸ್ಥಾನದಲ್ಲಿ ಆರತಿ ಮೆರವಣಿಗೆ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ: ದಾಸರಹಳ್ಳಿ ಗ್ರಾಮದಲ್ಲಿ  ಐತಿಹಾಸಿಕ ಇತಿಹಾಸವಿರುವ  ಮಹೇಶ್ವರಮ್ಮ ದೇವರ ಜಾತ್ರೆಯು ಸೋಮವಾರದಿಂದ 21  ಗುರುವಾರದವರೆಗೆ ನಾಲ್ಕು ದಿನಗಳ ಕಾಲ ವೈಭವದಿಂದ ಜರುಗಲಿದೆ.ಮಂಗಳವಾರ ಧನಿನ ಮಾರಮ್ಮ ಮತ್ತು  ಮಹೇಶ್ವರಮ್ಮ ದೇವರ ರಥೋತ್ಸವದಲ್ಲಿ ಆರತಿ ಹೊತ್ತ ಭಕ್ತಾದಿಗಳು ದಾಸರಹಳ್ಳಿಯ ಉಮಾ ಮಹೇಶ್ವರಿ ದೇವಸ್ಥಾನದಿಂದ ಮೆಟ್ರೋ ಮಾರ್ಗವಾಗಿ ಕನ್ನಡ ಕಸ್ತೂರಿ ರಸ್ತೆಯ ಮಾರ್ಗದಲ್ಲಿ ದೇವರ ಮೆರವಣಿಗೆ ಮೂಲಕ ನೆಲೆ ಮಹೇಶ್ವರಮ್ಮ ದೇವಸ್ಥಾನದ ಹತ್ತಿರ ತೆರಳಿ ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ಹಾಯುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿದರು. ಸಂಜೆ ಚಪ್ಲಲಮ್ಮ ದೇವರಿಗೆ ಆರತಿ ಹಾಗೂ ಪೂಜಾ ಕಾರ್ಯಕ್ರಮ ಜರುಗಿತು.ಇದೇ ವೇಳೆ ಶಾಸಕ ಎಸ್. ಮುನಿರಾಜು ಅವರ ಕುಟುಂಬದವರು ಮೆರವಣಿಗೆಯಲ್ಲಿ ಭಾಗಿಯಾದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 19, 2026 | 04:26 PM
47 0
ಏಸ್ ಕಮ್ಮೂನಿಕೇಷನ್ ವತಿಯಿಂದ  3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಂಪರ್ ಕೊಡುಗೆಗಳ ಘೋಷಣೆ.

ಏಸ್ ಕಮ್ಮೂನಿಕೇಷನ್ ವತಿಯಿಂದ 3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಂಪರ್ ಕೊಡುಗೆಗಳ ಘೋಷಣೆ.

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ಏಸ್ ಕಮ್ಮೂನಿಕೇಷನ್  ಸಹೋದರರಾದ ದೇವರಾಜ್,ನವೀನ್, ರಮೇಶ್ ಮಾಲೀಕತ್ವದ  ನೆಲಗದರನಹಳ್ಳಿ ಮುಖ್ಯರಸ್ತೆ ಯಲ್ಲಿರುವ ಶೋ ರೂಂ ನಲ್ಲಿ 3 ನೇ ವರ್ಷದ ವಾರ್ಷಿಕೋತ್ಸವಕ್ಕೆ ಶಾಸಕ ಎಸ್. ಮುನಿರಾಜು ಆಗಮಿಸಿ ಶುಭಕೋರಿದರು.ಈಗಾಗಲೇ ಏಸ್ ಕಮ್ಮೂನಿಕೇಷನ್ ಹೋಮ್ ಅಪ್ಲೆಯನ್ಸಸ್ ಮತ್ತು ಪರ್ನೀಚರ್ಸ್ ಹಾಗೂ ಮೊಬೈಲ್ ಗಳ ಮೇಲೆ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ ಬಂಪರ್ ಕೊಡುಗೆಗಳ ಘೋಷಣೆ ಮಾಡಲಾಯಿತು.ಜೊತೆಗೆ ಝೀರೋ ಡೌಪೇಮಂಟ್ ನೊಂದಿಗೆ ವಿಥ್ಔಟ್ ಬಡ್ಡಿ ಆಪರ್ ನೀಡಲಾಯಿತು‌.ಗ್ರಾಹಕರ ಸೇವೆಯೆ ನಮ್ಮಗುರಿ ಎಂದುಕೊಂಡು ಒಂದು ಟಿವಿ ಕೊಂಡರೆ ಹೋಮ್ ಥೀಯೇಟರ್, ಅಥವಾ  ಸ್ಟಪ್ಲೈಜರ್  ಅಥವಾ ಡಿಸ್ ಹಾಗೂ ಪ್ರಿಜ್ಡ್ ತಗೊಂಡರೆಕುಕ್ಕರ್ ,ಮಿಕ್ಸಿ ,ಗ್ಯಾಸ್ ಸ್ಟವ್,ವಾಸಿಂಗ್ ಮೆಷಿನ್,ಕೊಂಡರೆ ಗ್ರೈಂಡರ್, ಅಥವಾ ಗ್ಯಾಸ್ ಸ್ಟವ್,ಹತ್ತು ಸಾವಿರಕ್ಕೂ ಹೆಚ್ಚು ಬೆಲೆಯ ಮೊಬೈಲ್ ಕೊಂಡರೆ ಹತ್ತು ಸಾವಿರದ ಬೆಲೆಯ 10ವಸ್ತುಗಳನ್ನು ಪರ್ನಿವರ್ಸ್ ಟೀಪಾಯ್, ಡ್ಸೆಂಸಿಂಗ್ ಟೇಬಲ್, ಬಿನ್ ಬ್ಯಾಗ್, ಉಚಿತವಾಗಿ  ನೀಡಲಾಗುವುದು. ಇದಕ್ಕೆ ಪಾನ್ ಕಾರ್ಡ್, ಅಧಾರ್ ಕಾರ್ಡ್ ಮಾತ್ರ ತಂದರೆ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದುಮಾಲೀಕರು ತಿಳಿಸಿದರು.ಈ ಸಂಧರ್ಭದಲ್ಲಿ ಚಿತ್ತನಟರಾದ ಮೇಘನಾ  ಗೋವಂಕರ,ಸುಶ್ಮಿತಾ ಜಗಪ್ಪ,ವಾಣಿಶ್ರೀ,ರೇಪರ್ಪ್ರಿಯಾಂಕಾ,ಶಶಿ ಕುಮಾರ್,ರಾಧ ಭಗವತ್,ಶೋಭರಾಜ್, ಓಂ ಪ್ರಕಾಶ್ ರಾವ್, ಮಿಮಿಕ್ರಿ ಗೋಪಿ ಬಿಗ್ ಬಾಸ್ ಕರಿಬಸಪ್ಪ,ಮಜಾಟಾಕೀಸ್ ವಿಶ್ವ ,ತುಕಾಲಿ ಸಂತುಜಾನ್ವಿ- ಬಿಗ್ ಬಾಸ್ ಸ್ಪರ್ಧಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 19, 2026 | 02:39 PM
83 0
ಹಳೆಯ ಎರಡು ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ? ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಆಗ್ರಹ

ಹಳೆಯ ಎರಡು ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ? ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಆಗ್ರಹ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಹಳೆಯ ಎರಡು ಪ್ರಮುಖ ವಿದ್ಯುತ್ ಮಾರ್ಗಗಳಾದ ನೆಲಮಂಗಲ ಉಪ ಕೇಂದ್ರದಿಂದ ಬೃಂದಾವನದ ಬಳಿ ಇರುವ ಗೋಪುರದವರೆಗೂ ಸದರಿ 110 ಕೆವಿ ವಿದ್ಯುತ್ ಮಾರ್ಗವನ್ನು 220 ಕೆವಿ ಮಾರ್ಗ ಹಾಗೂ ನೆಲಮಂಗಲ ಉಪಕೇಂದ್ರದಿಂದ 220/66 ಕೆವಿ ವಿದ್ಯುತ್ ಅನ್ನು ಪೀಣ್ಯ ಉಪಕೇಂದ್ರದವರೆಗೂ ಪ್ರಸ್ತುತವಿರುವ ಪೀಣ್ಯ ಉಪಕೇಂದ್ರಕ್ಕೆ ಸಂಪರ್ಕ 400/220 ಕೆವಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಯಿತು.ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಶಿವನಪುರ, ಗಜ್ಜಗದಹಳ್ಳಿ, ನಾರಾಯಣಪ್ಪನಪಾಳ್ಯ, ಹಾರೋಕ್ಯಾತನಹಳ್ಳಿ, ದೊಂಬರಹಳ್ಳಿ,ಲಕ್ಷ್ಮೀಪುರ, ಶ್ರೀಕಂಠಪುರ, ಕರಿವೋಬನಹಳ್ಳಿ, ತಿರುಮಲಾಪುರ, ದೊಡ್ಡಬಿದರೆಕಲ್ಲು ನೆಲಗದರನಹಳ್ಳಿ, ಶಿವಪುರ, ಚೊಕ್ಕಸಂದ್ರ ಮತ್ತು ಪೀಣ್ಯ 2ನೇ ಹಂತದ ಮೂಲಕ ಹಾದುಹೋಗಲಿದ್ದು ಹೊಸದಾಗಿ ನಿರ್ಮಿಸಲಾಗುವ ವಿದ್ಯುತ್ ಗೋಪುರಗಳ (Towers) ಜಾಗದ ನೈಜ ಭೂಮಾಲೀಕರಿಗೆ ನಿಯಮಾನುಸಾರ ಪರಿಹಾರ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶಿಸಿರುವ ಹಿನ್ನಲೆಯಲ್ಲಿ ಪೀಣ್ಯದ ಎಸ್.ಆರ್.ಎಸ್ ಹತ್ತಿರದ ಕೆಪಿಟಿಸಿಎಲ್ ಆವರಣದಲ್ಲಿ ಇಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಶೇ.30 ರಷ್ಟು ಪರಿಹಾರಕ್ಕೆ ಒಪ್ಪದ ಭೂ ಮಾಲೀಕರು ವಿರೋಧ ವ್ಯಕ್ತಪಡಿಸಿದರು.ಭೂ ಮಾಲೀಕ ಸಿದ್ದಗಂಗಯ್ಯ ಮಾತನಾಡಿ,' ಕೆಪಿಟಿಸಿಎಲ್ ಅವರು ಬಫರ್ ಜೋನ್ ಎಂದು 38 ಮೀಟರ್ ಅಗಲ ಜಮೀನು ಒತ್ತುವರಿ ಮಾಡಿ ಲಕ್ಷಾಂತರ ಜನರು ಕಟ್ಟಿರುವ ಮನೆ ಹಾಗೂ ನಿವೇಶನಗಳನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ.ಹೈಟೆನ್ಶನ್ ಎತ್ತರ ಮತ್ತು ಅಗಲ ಮಾಡುತ್ತಿದ್ದಾರೆ ನಮಗೆ ಯಾವುದೇ ಮಾಹಿತಿ ನೀಡದೆ ಪರಿಹಾರವನ್ನು ನೀಡದೆ ಅಕ್ರಮ ನಡೆಸುತ್ತಿದ್ದಾರೆ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಲಿ ಅಥವಾ ಸುರಂಗ ಕೊರೆದು ಅಂಡರ್ ಗ್ರೌಂಡ್ ಕೇಬಲ್ ಹಾಕಿ ಅಲ್ಲಲ್ಲಿ ಸಬ್ ಸ್ಟೇಷನ್ ಗಳನ್ನು ಮಾಡಲಿ, ಇದರಿಂದ ನಮ್ಮ ಆಕ್ಷೇಪಣೆ ಇಲ್ಲ' ಎಂದು ಆಗ್ರಹಿಸಿದರು.ತಿಪ್ಪೇನಹಳ್ಳಿ ಗ್ರಾಮದ ನಿವಾಸಿ ಲೋಕೇಶ್,' ಕೆಪಿಟಿಸಿಎಲ್ ನವರು ಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಜನರ ವಿರುದ್ಧ ಕೆಲಸ ಮಾಡುತ್ತಿರುವ ಕೆಪಿಟಿಸಿಎಲ್ ವಿರುದ್ಧ ದಿಕ್ಕಾರ ಹಾಕುತ್ತೇವೆ. ಪೊಲೀಸ್ ಇಲಾಖೆಯವರನ್ನು ಕರೆಸಿ ನಮಗೆ ಎದುರಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ. ನಾವು ಅಲ್ಲಿ ಕೆಲಸ ಮಾಡಲು ಬಿಡುವುದಿಲ್ಲ' ಎಂದು ವಿರೋಧ ವ್ಯಕ್ತಪಡಿಸಿದರು.ಸಭೆಯಲ್ಲಿ ಕೆಪಿಟಿಸಿಎಲ್ ಎಇಇ ಲತಾ, ಎಂಜಿನಿಯರ್ ಗಳಾದ ಸುಮ, ಸೌಮ್ಯ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಚಿಕ್ಕಸ್ವಾಮಿ, ಪ್ರಶಾಂತ್ ಹಾಗೂ ನೂರಾರು ಭೂಮಾಲೀಕರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 18, 2026 | 01:54 PM
63 0
ಹಳೆಯ ಎರಡು ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ? ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಆಗ್ರಹ

ಹಳೆಯ ಎರಡು ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ? ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಆಗ್ರಹ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಹಳೆಯ ಎರಡು ಪ್ರಮುಖ ವಿದ್ಯುತ್ ಮಾರ್ಗಗಳಾದ ನೆಲಮಂಗಲ ಉಪ ಕೇಂದ್ರದಿಂದ ಬೃಂದಾವನದ ಬಳಿ ಇರುವ ಗೋಪುರದವರೆಗೂ ಸದರಿ 110 ಕೆವಿ ವಿದ್ಯುತ್ ಮಾರ್ಗವನ್ನು 220 ಕೆವಿ ಮಾರ್ಗ ಹಾಗೂ ನೆಲಮಂಗಲ ಉಪಕೇಂದ್ರದಿಂದ 220/66 ಕೆವಿ ವಿದ್ಯುತ್ ಅನ್ನು ಪೀಣ್ಯ ಉಪಕೇಂದ್ರದವರೆಗೂ ಪ್ರಸ್ತುತವಿರುವ ಪೀಣ್ಯ ಉಪಕೇಂದ್ರಕ್ಕೆ ಸಂಪರ್ಕ 400/220 ಕೆವಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಯಿತು.ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಶಿವನಪುರ, ಗಜ್ಜಗದಹಳ್ಳಿ, ನಾರಾಯಣಪ್ಪನಪಾಳ್ಯ, ಹಾರೋಕ್ಯಾತನಹಳ್ಳಿ, ದೊಂಬರಹಳ್ಳಿ,ಲಕ್ಷ್ಮೀಪುರ, ಶ್ರೀಕಂಠಪುರ, ಕರಿವೋಬನಹಳ್ಳಿ, ತಿರುಮಲಾಪುರ, ದೊಡ್ಡಬಿದರೆಕಲ್ಲು ನೆಲಗದರನಹಳ್ಳಿ, ಶಿವಪುರ, ಚೊಕ್ಕಸಂದ್ರ ಮತ್ತು ಪೀಣ್ಯ 2ನೇ ಹಂತದ ಮೂಲಕ ಹಾದುಹೋಗಲಿದ್ದು ಹೊಸದಾಗಿ ನಿರ್ಮಿಸಲಾಗುವ ವಿದ್ಯುತ್ ಗೋಪುರಗಳ (Towers) ಜಾಗದ ನೈಜ ಭೂಮಾಲೀಕರಿಗೆ ನಿಯಮಾನುಸಾರ ಪರಿಹಾರ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶಿಸಿರುವ ಹಿನ್ನಲೆಯಲ್ಲಿ ಪೀಣ್ಯದ ಎಸ್.ಆರ್.ಎಸ್ ಹತ್ತಿರದ ಕೆಪಿಟಿಸಿಎಲ್ ಆವರಣದಲ್ಲಿ ಇಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಶೇ.30 ರಷ್ಟು ಪರಿಹಾರಕ್ಕೆ ಒಪ್ಪದ ಭೂ ಮಾಲೀಕರು ವಿರೋಧ ವ್ಯಕ್ತಪಡಿಸಿದರು.ಭೂ ಮಾಲೀಕ ಸಿದ್ದಗಂಗಯ್ಯ ಮಾತನಾಡಿ,' ಕೆಪಿಟಿಸಿಎಲ್ ಅವರು ಬಫರ್ ಜೋನ್ ಎಂದು 38 ಮೀಟರ್ ಅಗಲ ಜಮೀನು ಒತ್ತುವರಿ ಮಾಡಿ ಲಕ್ಷಾಂತರ ಜನರು ಕಟ್ಟಿರುವ ಮನೆ ಹಾಗೂ ನಿವೇಶನಗಳನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ.ಹೈಟೆನ್ಶನ್ ಎತ್ತರ ಮತ್ತು ಅಗಲ ಮಾಡುತ್ತಿದ್ದಾರೆ ನಮಗೆ ಯಾವುದೇ ಮಾಹಿತಿ ನೀಡದೆ ಪರಿಹಾರವನ್ನು ನೀಡದೆ ಅಕ್ರಮ ನಡೆಸುತ್ತಿದ್ದಾರೆ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಲಿ ಅಥವಾ ಸುರಂಗ ಕೊರೆದು ಅಂಡರ್ ಗ್ರೌಂಡ್ ಕೇಬಲ್ ಹಾಕಿ ಅಲ್ಲಲ್ಲಿ ಸಬ್ ಸ್ಟೇಷನ್ ಗಳನ್ನು ಮಾಡಲಿ, ಇದರಿಂದ ನಮ್ಮ ಆಕ್ಷೇಪಣೆ ಇಲ್ಲ' ಎಂದು ಆಗ್ರಹಿಸಿದರು.ತಿಪ್ಪೇನಹಳ್ಳಿ ಗ್ರಾಮದ ನಿವಾಸಿ ಲೋಕೇಶ್,' ಕೆಪಿಟಿಸಿಎಲ್ ನವರು ಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಜನರ ವಿರುದ್ಧ ಕೆಲಸ ಮಾಡುತ್ತಿರುವ ಕೆಪಿಟಿಸಿಎಲ್ ವಿರುದ್ಧ ದಿಕ್ಕಾರ ಹಾಕುತ್ತೇವೆ. ಪೊಲೀಸ್ ಇಲಾಖೆಯವರನ್ನು ಕರೆಸಿ ನಮಗೆ ಎದುರಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ. ನಾವು ಅಲ್ಲಿ ಕೆಲಸ ಮಾಡಲು ಬಿಡುವುದಿಲ್ಲ' ಎಂದು ವಿರೋಧ ವ್ಯಕ್ತಪಡಿಸಿದರು.ಸಭೆಯಲ್ಲಿ ಕೆಪಿಟಿಸಿಎಲ್ ಎಇಇ ಲತಾ, ಎಂಜಿನಿಯರ್ ಗಳಾದ ಸುಮ, ಸೌಮ್ಯ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಚಿಕ್ಕಸ್ವಾಮಿ, ಪ್ರಶಾಂತ್ ಹಾಗೂ ನೂರಾರು ಭೂಮಾಲೀಕರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 18, 2026 | 01:54 PM
6 0
No Image

ಬೆಳಗಾವಿಯಲ್ಲಿ ಅನಧಿಕೃತ ಬಡ್ಡಿ ವ್ಯವಹಾರ: ಶಿವಾನಂದ ನೀಲಣ್ಣವರ್ ಬಂಧನ

ಧಾರವಾಡದಲ್ಲೂ ಚೀಟಿ ವ್ಯವಹಾರ ಆರೋಪ; ಕ್ರಮಕ್ಕೆ ಸಾರ್ವಜನಿಕರ ಒತ್ತಾಯಬೆಳಗಾವಿ: ಅನಧಿಕೃತ ಬಡ್ಡಿ ಮತ್ತು ಠೇವಣಿ ವ್ಯವಹಾರ ನಡೆಸಿದ ಆರೋಪದ ಮೇಲೆ ಬೆಳಗಾವಿಯ ಶಿವಂ ಅಸೋಸಿಯಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಅವರನ್ನು ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಪ್ರಕರಣದಲ್ಲಿ 50 ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.ಈ ಕುರಿತು ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಮ್ಮದ್ ರೋಷನ್, ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಶಿವಾನಂದ ನೀಲಣ್ಣವರ್ ವಿವಿಧ ರಾಜ್ಯಗಳ ಜನರಿಂದ ಕೈಸಾಲ ಮತ್ತು ಹೂಡಿಕೆ ಹೆಸರಿನಲ್ಲಿ ದೊಡ್ಡ ಪ್ರಮಾಣದ ಹಣ ಸಂಗ್ರಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರು.ಶಿವಾನಂದ ನೀಲಣ್ಣವರ್ ಬಳಿ ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಹಣ ಠೇವಣಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. “1 ಲಕ್ಷ ರೂ. ಠೇವಣಿ ಇಟ್ಟರೆ ವಾರ್ಷಿಕ ಶೇಕಡಾ 36ರಷ್ಟು ಬಡ್ಡಿ ನೀಡಲಾಗುವುದು” ಎಂದು ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ಹಣ ಸಂಗ್ರಹ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಒಟ್ಟು ಎಷ್ಟು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಲಾಗಿದೆ ಎಂಬುದು ತನಿಖೆ ಬಳಿಕ ಸ್ಪಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳ ಆಧಾರದ ಮೇಲೆ ಅಧಿಕಾರಿಗಳು ಶಿವಾನಂದ ನೀಲಣ್ಣವರ್ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿದ್ದು, ದೊಡ್ಡ ಪ್ರಮಾಣದ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿ ತಿಂಗಳು ಒಂದೇ ಖಾತೆಯಿಂದ 300ರಿಂದ 400 ಕೋಟಿ ರೂಪಾಯಿವರೆಗೆ ವ್ಯವಹಾರ ನಡೆದಿರುವ ಮಾಹಿತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.ಅದೇ ವೇಳೆ, ರಿಸರ್ವ್ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಗಳ ನಿಯಮಗಳನ್ನು ಪಾಲಿಸದೆ ಹಣಕಾಸು ಚಟುವಟಿಕೆ ನಡೆಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಪಿಐಡಿ ಕಾಯ್ದೆಯಡಿ ವಿಶೇಷ ತನಿಖಾ ವಿಭಾಗವನ್ನು ತೆರೆಯಲಾಗಿದೆ.ಇನ್ನೊಂದೆಡೆ, ಧಾರವಾಡದಲ್ಲಿಯೂ ಇದೇ ರೀತಿಯ ಚೀಟಿ ವ್ಯವಹಾರ ಆರೋಪ ಸದ್ದು ಮಾಡುತ್ತಿದೆ. ಅಯಾಜ್ ಗೋರೆಖಾನ್ ಎಂಬಾತ ಮಹಿಳೆಯರಿಂದ ಚೀಟಿ ವ್ಯವಹಾರದ ಹೆಸರಿನಲ್ಲಿ ಹಣ ಸಂಗ್ರಹಿಸಿ ಮೋಸ ಮಾಡಿದ್ದಾನೆ ಎಂದು ಕೆಲ ದಿನಗಳ ಹಿಂದೆ ಹಲವು ಮಹಿಳೆಯರು ಆಗಿನ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ದೂರು ನೀಡಿದ್ದರು.ಈ ದೂರಿನ ಪರಿಶೀಲನೆ ವೇಳೆ ಅಯಾಜ್ ಗೋರೆಖಾನ್ ಅವರ ಹೆಸರಿನಲ್ಲಿ ಯಾವುದೇ ಕಾನೂನುಬದ್ಧ ಚೀಟಿ ವ್ಯವಹಾರ ಪರವಾನಿಗೆ ಇಲ್ಲ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿತ್ತು. ಸಹಕಾರ ಇಲಾಖೆಯ ಅಧಿಕಾರಿಗಳು ತಪ್ಪು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರೇಟ್‌ಗೆ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಈಗ ಬೆಳಗಾವಿಯಲ್ಲಿ ನಡೆದಿರುವ ಬೆಳವಣಿಗೆ ಹಿನ್ನೆಲೆ, ಧಾರವಾಡದಲ್ಲಿಯೂ ಪರವಾನಿಗೆ ಇಲ್ಲದೆ ಹಣಕಾಸು ವ್ಯವಹಾರ ನಡೆಸುತ್ತಿರುವವರ ವಿರುದ್ಧ ನೂತನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂಬುದನ್ನು ಸಾರ್ವಜನಿಕರು ಕಾದುನೋಡುತ್ತಿದ್ದಾರೆ.

May 17, 2026 | 05:53 AM
11 0
ಅಥಣಿಯಲ್ಲಿ ಅಂತಾರಾಜ್ಯ ಮಹಿಳಾ ಕಳ್ಳಿಯರ ಬಂಧನ – 68 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಅಥಣಿಯಲ್ಲಿ ಅಂತಾರಾಜ್ಯ ಮಹಿಳಾ ಕಳ್ಳಿಯರ ಬಂಧನ – 68 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಅಥಣಿ: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡುತ್ತಿದ್ದ ಅಂತಾರಾಜ್ಯ ಮಹಿಳಾ ಕಳ್ಳಿಯರನ್ನು ಅಥಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಹೇಮಾ ಕಸಬೇಕರ ಹಾಗೂ ನಿಲಂ ಕಾಂಬಳೆ ಎಂದು ಗುರುತಿಸಲಾಗಿದೆ. ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಪೊಲೀಸರು ಬಲೆ ಬೀಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.ಪೊಲೀಸರ ವಿಚಾರಣೆಯ ವೇಳೆ ವಿವಿಧ ಪ್ರದೇಶಗಳಲ್ಲಿ ನಡೆದ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳಿಂದ ಸುಮಾರು 68 ಲಕ್ಷ ರೂಪಾಯಿ ಮೌಲ್ಯದ 42.5 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬಸ್ ಹತ್ತುವ ಹಾಗೂ ಇಳಿಯುವ ಸಂದರ್ಭಗಳಲ್ಲಿ ಉಂಟಾಗುವ ಜನದಟ್ಟಣೆ, ಗದ್ದಲ ಮತ್ತು ತಳ್ಳಾಟವನ್ನು ದುರುಪಯೋಗಪಡಿಸಿಕೊಂಡು ಮಹಿಳಾ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.ಪ್ರಯಾಣಿಕರ ರೂಪದಲ್ಲಿ ಬಂದು ಯಾರಿಗೂ ಅನುಮಾನ ಬಾರದಂತೆ ಕಾರ್ಯಾಚರಣೆ ನಡೆಸುತ್ತಿದ್ದ ಈ ಮಹಿಳಾ ಕಳ್ಳಿಯರ ಬಂಧನದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಥಣಿ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

May 17, 2026 | 03:44 PM
135 0
ಹುಬ್ಬಳ್ಳಿ ಶಿವಪುತ್ರ ನಗರದಲ್ಲಿ ಭಾರೀ ಮಳೆಗೆ ದೊಡ್ಡ ಮರ ಉರುಳಿ ಅವಾಂತರ

ಹುಬ್ಬಳ್ಳಿ ಶಿವಪುತ್ರ ನಗರದಲ್ಲಿ ಭಾರೀ ಮಳೆಗೆ ದೊಡ್ಡ ಮರ ಉರುಳಿ ಅವಾಂತರ

ಹುಬ್ಬಳ್ಳಿ: ನಗರದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ವಾರ್ಡ್ ನಂ. 53ರ ಶಿವಪುತ್ರ ನಗರದಲ್ಲಿ ದೊಡ್ಡ ಮರ ದರೇಗುರುಳಿದ ಘಟನೆ ನಡೆದಿದೆ. ಮರ ಉರುಳಿದ ಪರಿಣಾಮ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ನೆಲಕ್ಕುರುಳಿ ದರ್ಗಾ ಹಾಗೂ ಮನೆಯೊಂದಕ್ಕೆ ಹಾನಿಯಾಗಿದೆ.ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ತಕ್ಷಣವೇ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿದ್ಯುತ್ ಕಂಬ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕಕ್ಕೂ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಸದಸ್ಯ ಶ್ರೀ ಆರಿಫ್ ಭದ್ರಾಪೂರ ಅವರು ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮರ ತೆರವು ಹಾಗೂ ಹಾನಿಗೊಳಗಾದ ಪ್ರದೇಶದ ದುರಸ್ತಿ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಭಾರೀ ಮಳೆಯ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

May 17, 2026 | 02:08 PM
216 0