ಕರ್ನಾಟಕ News

Discover the latest headlines in this section.

ಹೆಸ್ಕಾಂನಿಂದ ಜನಪರ ಕಾರ್ಯ : ಅಧ್ಯಕ್ಷ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ

ಹೆಸ್ಕಾಂನಿಂದ ಜನಪರ ಕಾರ್ಯ : ಅಧ್ಯಕ್ಷ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ

ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ  ರೂ.10 ಪೈಸೆ ಮರುಪಾವತಿಗ್ರಾಹಕರ ಸೇವೆಯೆ ನಮ್ಮ ಮೊದಲ ಆದ್ಯತೆಹುಬ್ಬಳ್ಳಿ, ಮೇ 06, 2026 :  ಇಂಧನ ಸಚಿವರಾದ ಕೆ.ಜೆ ಜಾರ್ಜ್‌ ಅವರ ಮಾರ್ಗದರ್ಶನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹೆಸ್ಕಾಂ, 2024-25ರ ಸಾಲಿನಲ್ಲಿ 153.46 ಕೋಟಿ ರೂ. ಉಳಿತಾಯ ಮಾಡಿದ್ದು, ಈ ಹಣವನ್ನು ಗ್ರಾಹಕರಿಗೆ ಮರು ಪಾವತಿಸುತ್ತಿದ್ದೇವೆ ಎಂದು ಹೆಸ್ಕಾಂ ಅಧ್ಯಕ್ಷರಾದ ಸೈಯದ್‌ ಅಜೀಮ್‌ಪೀರ್‌ ಎಸ್‌. ಖಾದ್ರಿ ಅವರು ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿದ್ಯುತ್ ಖರೀದಿ, ಪೂರೈಕೆಯನ್ನು ಉತ್ತಮವಾಗಿ ನಿರ್ವಹಿಸಿದ ಪರಿಣಾಮ 2024-2025ರಲ್ಲಿ ಹೆಸ್ಕಾಂ 153.46 ಕೋಟಿ ರೂ. ಉಳಿತಾಯ ಮಾಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಆದೇಶದ ಅನ್ವಯ 2024-25 ನೇ ಆರ್ಥಿಕ ವರ್ಷದ ಪ್ರತಿಯೊಬ್ಬ ಗ್ರಾಹಕರಿಗೆ ಮಾತ್ರ 2024-25ನೇ ಸಾಲಿನ ಅವಧಿಯಲ್ಲಿ ಅವರ ನಿಜವಾದ ಬಳಕೆಯನ್ನು ಆಧರಿಸಿ ಪ್ರತಿ ಯೂನಿಟ್‌ಗೆ 10 ಪೈಸೆಯಂತೆ 2026-2027ರಲ್ಲಿ ಪ್ರತಿ ತಿಂಗಳು  ಸಮಾನ ಕಂತುಗಳಲ್ಲಿ (12 ಕಂತುಗಳು) ಮರು ಪಾವತಿಸಲಾಗುತ್ತದೆ. ಈ ಮೊತ್ತವನ್ನು ವಿದ್ಯುತ್‌ ಬಿಲ್‌ನಲ್ಲಿ ಆರ್ಥಿಕ ವರ್ಷ (FY) 25 ಟ್ರೂ ಅಪ್‌ ಶುಲ್ಕ ಎಂದು ಪ್ರತ್ಯೇಕವಾಗಿ ನಮೂದಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಸದಾ ರೈತರ ಪರ ಕೆಲಸ ಮಾಡುತ್ತಿದೆ. ರೈತರಿಗೆ ಹಗಲು ಹೊತ್ತಿನಲ್ಲಿಯೇ ಏಳು ಗಂಟೆಗಳ ಕಾಲ ವಿದ್ಯುತ್‌ ನೀಡುವ ನಿಟ್ಟಿನಲ್ಲಿ ಕುಸುಮ್‌ ಬಿ ಹಾಗೂ ಕುಸುಮ್‌ ಸಿ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಹಕರಿಗೆ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ ಯಶಸ್ವಿಯಾಗಿದೆ. ಮುಖ್ಯಮಂತ್ರಿಗಳ ಹಾಗೂ ಇಂಧನ ಸಚಿವರ ಸಹಕಾರದೊಂದಿಗೆ ಹೆಸ್ಕಾಂ ಜನಪರವಾಗಿ ಕೆಲಸ ಮಾಡುತ್ತಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ನವೀಕೃತ ಶೀಘ್ರ ಸಂಪರ್ಕ ಯೋಜನೆಯನ್ನೂ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

May 7, 2026 | 01:38 AM
23 0
ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆಗೆ ರೂ.1000 ದಂಡ; ಹೊಸ ಕಾನೂನು ಜಾರಿ

ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆಗೆ ರೂ.1000 ದಂಡ; ಹೊಸ ಕಾನೂನು ಜಾರಿ

ಧಾರವಾಡ: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು, ತಂಬಾಕು ಉತ್ಪನ್ನಗಳನ್ನು ಬಳಸಿದವರಿಗೆ ಈಗ ರೂ.200 ಬದಲಿಗೆ ರೂ.1000 ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರಕಟಣೆ ಹೊರಡಿಸಿದ್ದಾರೆ.ಕರ್ನಾಟಕ ತಂಬಾಕು ತಿದ್ದುಪಡಿ ಅಧಿನಿಯಮ-2024ರಂತೆ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಹಿಂದೆ ರೂ.200 ಇದ್ದ ದಂಡವನ್ನು ಹೆಚ್ಚಿಸಿ ರೂ.1,000 ವರೆಗೆ ವಿಧಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.ಹೆಚ್ಚುವರಿಯಾಗಿ, ಹುಕ್ಕಾ ಬಾರ್ ನಡೆಸುವವರಿಗೆ ಕನಿಷ್ಠ 1 ವರ್ಷದಿಂದ ಗರಿಷ್ಠ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಮತ್ತು ರೂ.50,000ದಿಂದ ರೂ.1 ಲಕ್ಷದವರೆಗೆ ದಂಡ ವಿಧಿಸಲಾಗುವುದು.21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ, ಹಾಗೂ ಶಿಕ್ಷಣ ಸಂಸ್ಥೆಗಳ 100 ಮೀಟರ್ ಸುತ್ತಳತೆಯೊಳಗೆ ಸಿಗರೇಟ್ ಅಥವಾ ಬಿಡಿ ತಂಬಾಕು ಮಾರಾಟ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ರೂ.1,000 ವರೆಗೆ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.ಸಾರ್ವಜನಿಕರು ಹೊಸ ನಿಯಮಗಳನ್ನು ಪಾಲಿಸಬೇಕು. ಉಲ್ಲಂಘನೆ ಕಂಡುಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬಹುದು.

May 6, 2026 | 01:33 AM
53 0
ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಮಾನತೆಯ ತತ್ವ ನಾವೆಲ್ಲ ಪಾಲಿಸಬೇಕು: ಶಾಸಕ ಎಸ್. ಮುನಿರಾಜು

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಮಾನತೆಯ ತತ್ವ ನಾವೆಲ್ಲ ಪಾಲಿಸಬೇಕು: ಶಾಸಕ ಎಸ್. ಮುನಿರಾಜು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಅಂಬೇಡ್ಕರ್ ಅವರು ಭಾರತ ಭಾಗ್ಯ ವಿಧಾತರೆಂಬ ಅಭಿದಾನದೊಂದಿಗೆ ನಮಗೆಲ್ಲಾ ಸಂವಿಧಾನ ರೂಪಿಸಿ, ಸರ್ವಸಮಾನತೆಯನ್ನು ಹಂಬಲಿಸಿದವರು. ಭಾರತವು ಸ್ವಾತಂತ್ರ್ಯ ಆಗುವುದರೊಂದಿಗೆ - ಸಂವಿಧಾನ ಕೂಡಾ ಜೊತೆ ಜೊತೆಗೆ ನಮಗೆಲ್ಲಾ ಜಾತ್ಯಾತೀತ ಪರಿಕಲ್ಪನೆ ಯನ್ನು ಒಡಮೂಡಿಸಿದ ಕೀರ್ತಿಗೆ ಅಂಬೇಡ್ಕರ್ ಅವರು ಭಾಜನರು" ಎಂದು ಶಾಸಕ ಎಸ್. ಮುನಿರಾಜು ನುಡಿದರು.ಹಾವನೂರು ಬಡಾವಣೆಯಲ್ಲಿ ಕನ್ನಡಿಗರ ಕಹಳೆ ಹಿತರಕ್ಷಣಾ ವೇದಿಕೆ ಮತ್ತು ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ 135 ನೇ ಜಯಂತಿ, ಬಸವೇಶ್ವರ ಜಯಂತಿ, ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.ಸಾಹಿತಿ ವೈ.ಬಿ.ಎಚ್. ಜಯದೇವ್ ಮಾತನಾಡಿ,' ಜಗತ್ತಿನ ಎಲ್ಕಾ ದಾರ್ಶನಿಕರ ಆಶಯ ಹಾಗೂ ಆದರ್ಶಗಳು ಸಮಾನತೆಯನ್ನು ಸಾರುತ್ತವೆ. ಸತ್ಯ,ಅಹಿಂಸೆ ಹಾಗೂ ತ್ಯಾಗವನ್ನು ಪ್ರತಿಪಾದಿಸುವ ಈ ಮಹಾನುಭಾವರ ಹಾದಿಯಲ್ಲಿ ಇಂದಿನ ಆಧುನಿಕ ಯುವ ಜನಾಂಗ ಸಾಗಬೇಕಿದೆ. ಅನಾಚಾರ, ದುರಾಚಾರಗಳ ಮಾರ್ಗದಲ್ಲಿ ನಡೆಯುತ್ತಿರುವ ಶೋಷಣೆ, ಅತ್ಯಾಚಾರ ಮುಂತಾದ ಅಪಸವ್ಯಗಳನ್ನು ನಿವಾರಿಸಲು ಈ ಮಹಾತ್ಮರ ತತ್ವಗಳನ್ನು, ಆದರ್ಶಗಳನ್ನು ಪಾಲಿಸುವುದೇ ನಿಜಕ್ಕೂ ನಮ್ಮ ಮುಂದೆ ಇರುವ ಮಹಾಮಾರ್ಗ' ಎಂದರು. ಕನ್ನಡಿಗರ ಕಹಳೆ ಹಿತರಕ್ಷಣಾ ವೇದಿಕೆ ಸಂಸ್ಥಾಪಕಿ ಸುನಿತಾ ಬಾಯಿ ಎಲ್ ಮಾತನಾಡಿ,' ನಮ್ಮ ವೇದಿಕೆಯಿಂದ ನಾಡು ನುಡಿ ರಕ್ಷಣೆ ಅಲ್ಲದೆ ಸಮಾಜ ಸೇವೆ ಸಾಂಸ್ಕೃತಿಕ ಚಟುವಟಿಕೆಯನ್ನು ಕೂಡ ನಾವು ತೊಡಗಿಸಿಕೊಂಡಿದ್ದೇವೆ. ಇಂದು ಸಮಾಜದಲ್ಲಿ ಗಣ್ಯರನ್ನು ಮತ್ತು ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ' ಎಂದರು.ಎ.ಬಿ.ಬಿ. ಮಂಜಣ್ಣ ಅವರು ಮಾತನಾಡಿ" ಅಂಬೇಡ್ಕರ್ ಅವರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನಮ್ಮ ಸಂಘಟನೆಗಳ ಪಾತ್ರ ಮಹತ್ತರವಾದುದು. ಈ ದಿಸೆಯಲ್ಲಿ ಕನ್ನಡಿಗರ ಕಹಳೆ ಹಿತರಕ್ಷಣಾ ವೇದಿಕೆ ಅತ್ಯಂತ ಸಮರ್ಥವಾಗಿ ಶ್ರಮಿಸುತ್ತಿದೆ. ಸಮಾನತೆ ಹಾಗೂ ಮಹಿಳಾ ಸಬಲತೆಗಾಗಿ ಆಶಿಸಿದ ಅಂಬೇಡ್ಕರ್ ಅವರ ತತ್ವಗಳು ಎಲ್ಲರ ಮನೆ ಮಾತಾಗಬೇಕು " ಎಂದು ನುಡಿದರುಸಮಾರಂಭದಲ್ಲಿ ಶ್ರೀ ಮಾರುತಿ ಕೋಲಾಟ ತಂಡದಿಂದ ಮಹಿಳೆಯರು ಜಾನಪದ ಗೀತೆಗಳಿಗೆ ಕೋಲಾಟ, ಭರತನಾಟ್ಯ ಮತ್ತು ಸಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಾರ್ಮಿಕರತ್ನ, ಆದರ್ಶ ಸ್ಪೂರ್ತಿ ರತ್ನ, ಮಾಧ್ಯಮ ರತ್ನ, ವಿದ್ಯಾರ್ಥಿ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಇದೇ ವೇಳೆ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ ಉಚಿತ ಕನ್ನಡಕ, ವಾಕಿಂಗ್ ಸ್ಟಿಕ್, ಪೌರಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್ ವಿತರಣೆ ಮಾಡಲಾಯಿತು.ಸಮಾಜ ಸೇವಕ ಮಂಜುನಾಥ್ (ಎಬಿಬಿ), ಸಮಾಜಸೇವಕರಾದ ಭರತ್ ಸೌಂದರ್ಯ, ಬಿ. ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಆನಂದ್ ರೆಡ್ಡಿ, ಅಭಯಕೃಷ್ಣಯ್ಯ, ಬುಲೆಟ್ ಬಾಬು, ಪತ್ರಕರ್ತ ಪ್ರಶಾಂತ್ ಗೌಡ, ಪ್ರಜಾವಾಣಿ ವರದಿಗಾರ ಪ್ರಸನ್ನ ಕುಮಾರ್.ವೇದಿಕೆ ರಾಜ್ಯಾಧ್ಯಕ್ಷ ಗಣೇಶ್ ಭಾರದ್ವಾಜ್, ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಮಂಜುನಾಥ್ ಮುಂತಾದವರಿದ್ದರು. ವರದಿ:ಪಬ್ಲಿಕ್ ರೈಡ್ ದೇವರಾಜ್

May 3, 2026 | 04:54 AM
225 0
ಹುಬ್ಬಳ್ಳಿ: ಪೇಪರ್ ಲೇಸ್ ಡಿಜಿಟಲ್ ನೋಂದಣಿಯಿಂದ ತೀವ್ರ ತೊಂದರೆ; ಹಿಂದಿನ ವ್ಯವಸ್ಥೆ ಮುಂದುವರೆಸಲು ಆಗ್ರಹ

ಹುಬ್ಬಳ್ಳಿ: ಪೇಪರ್ ಲೇಸ್ ಡಿಜಿಟಲ್ ನೋಂದಣಿಯಿಂದ ತೀವ್ರ ತೊಂದರೆ; ಹಿಂದಿನ ವ್ಯವಸ್ಥೆ ಮುಂದುವರೆಸಲು ಆಗ್ರಹ

ಹುಬ್ಬಳ್ಳಿ: ರಾಜ್ಯ ಸರ್ಕಾರವು ಕಾವೇರಿ ತಂತ್ರಾಂಶದ ಮೂಲಕ ಪೇಪರ್ ಲೇಸ್ ಡಿಜಿಟಲ್ ನೋಂದಣಿ ಜಾರಿಗೆ ಮುಂದಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಯೋಜನೆಯಿಂದ ಆಸ್ತಿ ದಾಖಲಾತಿಗೆ ಯಾವುದೇ ಭದ್ರತೆ ಇಲ್ಲದಂತಾಗಿದ್ದು, ಡಿಜಿ ಲಾಕರ್ನಲ್ಲಿ ದಾಖಲೆಗಳು ಸೇವ್ ಆಗುವುದರಿಂದ ಆಸ್ತಿ ಖರೀದಿದಾರರಿಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಧಾರವಾಡ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರರ ಟ್ರಸ್ಟ್ ಆರೋಪಿಸಿದೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಜಿಲ್ಲಾಧ್ಯಕ್ಷ ಶಾಂತರಾಜ ಪೋಳ, ಕೂಡಲೇ ಸರ್ಕಾರವು ಪೇಪರ್ ಲೇಸ್ ಜೊತೆಗೆ ಹಿಂದಿನ ಪತ್ರ ವ್ಯವಹಾರದ ನೋಂದಣಿ ವ್ಯವಸ್ಥೆಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು."ಹಲವಾರು ವರ್ಷಗಳಿಂದ ಆಸ್ತಿ ಖರೀದಿ, ಮಾರಾಟ ಸೇರಿದಂತೆ ಎಲ್ಲ ನೋಂದಣಿ ಕಾರ್ಯಗಳು ಪತ್ರ ವ್ಯವಹಾರದ ಮೂಲಕ ನಡೆಯುತ್ತಿದ್ದವು. ಆದರೆ ಈಗ ಕೇವಲ ಪೇಪರ್ ಲೇಸ್ ನೋಂದಣಿ ಮಾಡುವ ಮೂಲಕ ಸರ್ಕಾರ ಭೂಮಾಫಿಯಾ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗಿದೆ. ಈ ವ್ಯವಸ್ಥೆಯಿಂದ ಯಾರ ಆಸ್ತಿ, ಯಾರು ಖರೀದಿ ಅಥವಾ ಮಾರಾಟ ಮಾಡಿದ್ದಾರೆಂಬುದು ಪತ್ತೆಯಾಗದು" ಎಂದು ಅವರು ಆತಂಕ ವ್ಯಕ್ತಪಡಿಸಿದರು.ಅನಕ್ಷರಸ್ಥರು, ಸಾಮಾನ್ಯ ಜನರು ಹಾಗೂ ಇಲಾಖೆಯ ಅಧಿಕಾರಿ-ಸಿಬ್ಬಂದಿಗೂ ಈ ಡಿಜಿಟಲ್ ವ್ಯವಸ್ಥೆಯಿಂದ ತೀವ್ರ ತೊಂದರೆಯಾಗಲಿದೆ ಎಂದು ಅವರು ಎಚ್ಚರಿಸಿದರು. "ನೋಂದಣಿಗಾಗಿ ಎಲ್ಲರೂ ಶಿಕ್ಷಣ ಪಡೆದವರಾಗಿರಬೇಕಿಲ್ಲ. ಅನಕ್ಷರಸ್ಥರಿಗೆ ಡಿಜಿಟಲ್ ಕಾರ್ಯವಿಧಾನ ಅರ್ಥವಾಗದು" ಎಂದು ತಿಳಿಸಿದರು.ರಾಜ್ಯ ಸರ್ಕಾರವು ಚಾಮರಾಜನಗರದಲ್ಲಿ ಈ ಪೇಪರ್ ಲೇಸ್ ನೋಂದಣಿಯನ್ನು ಮೊದಲ ಹಂತದಲ್ಲಿ ಜಾರಿಗೊಳಿಸಿ ಯಶಸ್ವಿಯಾಗಿದೆ ಎಂದು ಸಾರಿದರೂ, ಅಲ್ಲಿ ಅನೇಕ ಸಮಸ್ಯೆಗಳು ಎದುರಾಗಿರುವುದಾಗಿ ಅವರು ಆರೋಪಿಸಿದರು. ಅನ್ಯ ರಾಜ್ಯಗಳಲ್ಲಿ ಪೇಪರ್ ಲೇಸ್ ಮತ್ತು ಪೇಪರ್ ಸಹಿತ ನೋಂದಣಿ ಎರಡೂ ವ್ಯವಸ್ಥೆಗಳು ಜಾರಿಯಲ್ಲಿವೆ. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕು ಎಂದು ಪೋಳ ಒತ್ತಾಯಿಸಿದರು.ಕೇವಲ ಪೇಪರ್ ಲೇಸ್ ಡಿಜಿಟಲ್ ನೋಂದಣಿ ಮಾತ್ರ ಜಾರಿ ಮಾಡಿದಲ್ಲಿ ರಾಜ್ಯದ ಸಾವಿರಾರು ದಸ್ತುಬರಹಗಾರರು ನಿರುದ್ಯೋಗಿಗಳಾಗುವ ಅನಿವಾರ್ಯತೆ ಎದುರಾಗಲಿದೆ. ಆದ್ದರಿಂದ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಹಿಂದಿನ ಪತ್ರ ವ್ಯವಸ್ಥೆಯ ಜೊತೆಗೆ ಡಿಜಿಟಲ್ ನೋಂದಣಿ ಮಾಡುವುದಕ್ಕೆ ತಮಗೆ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಈ ಕುರಿತು ರಾಜ್ಯದ ಎಲ್ಲ ದಸ್ತುಬರಹಗಾರರೊಂದಿಗೆ ಚರ್ಚಿಸಿ ಮುಂದಿನ ಆಂದೋಲನದ ರೂಪರೇಖೆ ಸಿದ್ಧಪಡಿಸಲಾಗುವುದು ಎಂದು ಅವರು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ವಿನೋದಗೌಡ ಪಾಟೀಲ, ಉಪಾಧ್ಯಕ್ಷ ರಾಮಚಂದ್ರ ಸಾಳಂಕೆ, ಗುರುನಾಥ ಯಾತಗೇರಿ, ಮಹವೀರ ಕಂಚಗಾರ, ರುಕ್ಮಿಣಿಬಾಯಿ ಛಲವಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

May 2, 2026 | 08:15 AM
112 0
ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಬಳಿ ಡೆಲಿವರಿ ಸಿಬ್ಬಂದಿ ಅನುಚಿತ ವರ್ತನೆ: ಸಾರ್ವಜನಿಕರ ಆಕ್ರೋಶ

ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಬಳಿ ಡೆಲಿವರಿ ಸಿಬ್ಬಂದಿ ಅನುಚಿತ ವರ್ತನೆ: ಸಾರ್ವಜನಿಕರ ಆಕ್ರೋಶ

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಅಕ್ಷಯ ಪಾರ್ಕ್ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಡೆಲಿವರಿ ಪ್ಲಾಟ್ಫಾರ್ಮ್ನ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿಬ್ಬಂದಿಗಳು ಸಾರ್ವಜನಿಕರ ವಾಹನಕ್ಕೆ ಗುದ್ದಿದ ಜೊತೆಗೆ ಅಸಭ್ಯವಾಗಿ ಧಮ್ಕಿ ನೀಡಿರುವ ಆರೋಪ ಕೇಳಿ ಬಂದಿದೆ.ಈ ಘಟನೆ ಹುಬ್ಬಳ್ಳಿ ನಗರದ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಾಹನ ಸವಾರರು ಮತ್ತು ಇತರ ಸಾರ್ವಜನಿಕರ ಪ್ರಕಾರ, ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಏಕವಚನ ಭಾಷೆಯಲ್ಲಿ ಮಾತನಾಡಿ, ಅಸಭ್ಯವಾಗಿ ಗುಂಡಾವರ್ತನೆ ತೋರಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಪ್ರಮುಖರಾಗಿರುವ ಸಿಬ್ಬಂದಿ ಕಿರಣ ಹಾಗೂ ಶಂಕರ್ ಹಾಗೂ ಇತರರ ವಿರುದ್ಧ ಈಗಾಗಲೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಲಭ್ಯವಾದ ಮಾಹಿತಿಯ ಪ್ರಕಾರ, ಈ ಇಬ್ಬರು ಸಿಬ್ಬಂದಿಗಳು ಹುಬ್ಬಳ್ಳಿಯ ನವ ಆನಂದನಗರದ ಕುಂಚಿ ಕೋರ್ ಕ್ವಾಟ್ರಸ್ನ ನಿವಾಸಿಗಳಾಗಿದ್ದಾರೆ. ಅಕ್ಷಯ ಪಾರ್ಕ್ ಮುಖ್ಯ ರಸ್ತೆಯು ಅತೀವ ದಟ್ಟಣೆಯ ಪ್ರದೇಶವಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ನಿತ್ಯವೂ ಸಂಚರಿಸುತ್ತಾರೆ. ಅಂತಹ ಸ್ಥಳದಲ್ಲಿ ಈ ರೀತಿಯ ಅಸಹಕಾರಿ ಮತ್ತು ಅನುಚಿತ ವರ್ತನೆ ಸಾರ್ವಜನಿಕರ ಸುರಕ್ಷತೆಗೆ ತಿಣುಕಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದೆಲ್ಲ ಘಟನೆ ಕೂಡ ಸಂಚಾರಿ ಪೊಲೀಸ್ ಸಮ್ಮುಖದಲ್ಲಿ ನಡೆದಿದ್ದು ಪೊಲೀಸರಿಗೆ ಕಿಂಚಿತ್ತು ಕಿಮ್ಮತ್ತಿಲ್ಲದೆ ಈ ಸಾರ್ವಜನಿಕರ ಮೈ ಮೇಲೆ ಎಗರಿ ಗುಂಡಾವರ್ತನೆ ತೋರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದೆ. ಹಾಗೂ ಈ ಸಿಬ್ಬಂದಿಗಳ ವಿರುದ್ಧ ತಪ್ಪು ಮಾಡಿದ್ದು ಅವರ ವಿರುದ್ಧವೇ ಜಫ್ಟು ಸಿಬ್ಬಂದಿಗಳು ಗುಂಪು ಕಟ್ಟಿಕೊಂಡು ಸಾರ್ವಜನಿಕರ ಮೈಮೇಲೆ ಹೋಗಿ ಏನ್ ಮಾಡ್ತೀಯಾ ಏನ್ ಕಿತ್ಕೊತಿಯ ಕಿತ್ಕೋ? ಎಂಬ ಅವಾಚಕರ ಶಬ್ದಗಳನ್ನು ತೋರಿದ್ದಾರೆ ಎಂದು ತಿಳಿದುಬಂದಿದೆ.ಸಾರ್ವಜನಿಕರು ತಕ್ಷಣವೇ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಡೆಲಿವರಿ ಪ್ಲಾಟ್ಫಾರ್ಮ್ಗಳ ಸಿಬ್ಬಂದಿಗಳ ಮೇಲೆ ಕಡಿವಾಣ ಹಾಕಲು ಮತ್ತು ಇಂತಹ ಘಟನೆಗಳಿಗೆ ತಡೆಯೊಡ್ಡಲು ಸಂಬಂಧಪಟ್ಟ ಕಂಪನಿಗಳು ಮತ್ತು ಪೊಲೀಸ್ ಇಲಾಖೆ ತಕ್ಕ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪ್ರಕರಣದ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

Apr 25, 2026 | 02:32 PM
48 0
ಬಜರಂಗದಳದ ಕಾರ್ಯಕರ್ತರ ಕಾರ್ಯಾಚರಣೆ: 5 ಟನ್ ಗೋಮಾಂಸ ಸಹಿತ ಅಶೋಕ ಲೆಲ್ಯಾಂಡ್ ವಶಕ್ಕೆ

ಬಜರಂಗದಳದ ಕಾರ್ಯಕರ್ತರ ಕಾರ್ಯಾಚರಣೆ: 5 ಟನ್ ಗೋಮಾಂಸ ಸಹಿತ ಅಶೋಕ ಲೆಲ್ಯಾಂಡ್ ವಶಕ್ಕೆ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ನಡೆಸಿದ ಕಾರ್ಯಾಚರಣೆಯಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 5 ಟನ್ ಗೋಮಾಂಸದ ತುಂಬಿದ ಅಶೋಕ ಲೆಲ್ಯಾಂಡ್ ವಾಹನವನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.ದಳದ ಕಾರ್ಯಕರ್ತರಾದ ಗಣೇಶ, ಧ್ರುವ, ಶುಭಂ, ಬಸು ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ರಹಸ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಕರ್ತರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ, ದೊಡ್ಡ ಪ್ರಮಾಣದ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ವಾಹನ ಮತ್ತು ಗೋಮಾಂಸವನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳೀಯರಲ್ಲಿ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.

Apr 25, 2026 | 02:05 PM
523 0
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೈಟೆಕ್ ಕಾರ್ ಮೂಲಕ ಗೋವು ಕಳ್ಳತನ

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೈಟೆಕ್ ಕಾರ್ ಮೂಲಕ ಗೋವು ಕಳ್ಳತನ

ಹುಬ್ಬಳ್ಳಿ:ಹುಬ್ಬಳ್ಳಿ ನಗರದ ಬೆಂಡಿಗೇರಿ ಪೊಲೀಸ್ ಠಾಣೆ ಸರಹದ್ದಿನ ಸೆಟ್ಲ್ಮೆಂಟ್ ಪ್ರದೇಶದಲ್ಲಿ ಗೋವುಗಳನ್ನು ಹೈಟೆಕ್ ಕಾರ್ ಬಳಸಿಕೊಂಡು ಕಳ್ಳತನ ಮಾಡಿಕೊಂಡು ಹೋಗುವ ಜಾಲವೊಂದು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಮಾಲಿಕನೊಬ್ಬರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳ್ಳರನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.ಲಭಿಸಿರುವ ಮಾಹಿತಿಯ ಪ್ರಕಾರ, ಕೆಲವೇ ದಿನಗಳ ಹಿಂದೆ ಈ ಕೃತ್ಯ ನಡೆದಿದ್ದು, ಇಂತಹ ಘಟನೆಗಳು ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿಯೂ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಕಳ್ಳರು ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಹೈಟೆಕ್ ವಾಹನಗಳ ಮೂಲಕ ಗೋವುಗಳನ್ನು ಅಪಹರಿಸುತ್ತಿದ್ದು, ಸ್ಥಳೀಯ ರೈತರು ಮತ್ತು ಗೋಪಾಲಕರಲ್ಲಿ ಆತಂಕ ಮೂಡಿಸಿದೆ.ಬೆಂಡಿಗೇರಿ ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲನೆ, ಸ್ಥಳೀಯ ಮಾಹಿದಾರರ ನೆರವು ಮತ್ತು ತಂತ್ರಜ್ಞಾನ ಆಧಾರಿತ ತನಿಖೆಗಳನ್ನು ಕೈಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ಆರೋಪಿಗಳನ್ನು ಬಂಧಿಸಬೇಕು ಎಂಬ ಕೂಗು ಹೆಚ್ಚುತ್ತಿದೆ.

Apr 23, 2026 | 10:19 AM
346 0
" ಜಿಕೆ ಡಬ್ಲ್ಯೂ ಲೇಔಟ್ನಲ್ಲಿ ಶ್ರೀರಾಮ ನವಮಿ ಮತ್ತು ಬಸವ ಜಯಂತಿ ಆಚರಣೆ"

" ಜಿಕೆ ಡಬ್ಲ್ಯೂ ಲೇಔಟ್ನಲ್ಲಿ ಶ್ರೀರಾಮ ನವಮಿ ಮತ್ತು ಬಸವ ಜಯಂತಿ ಆಚರಣೆ"

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಬಸವಣ್ಣನವರು ಅನೇಕ ಜನಪರ, ಸಮಾಜ ಸುಧಾರಣೆ ಕ್ರಮ ಕೈಗೊಂಡು.'ಕಾಯಕವೇ ಕೈಲಾಸ' ವೆಂದು ಸಾರಿ, ಜನರಿಗೆ ದುಡಿದು ಬದುಕುವ ದಾರಿ ಮಾಡಿ ಕೊಟ್ಟಿದ್ದೇ ಬಸವಣ್ಣನವರು ಎಂದು ಶಾಸಕ ಎಸ್ ಮುನಿರಾಜು ಹೇಳಿದರು.ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಹರೀಶ್ ಅವರ ಮತ್ತು ಕುಟುಂಬಸ್ಥರ ನೇತೃತ್ವದಲ್ಲಿ ಜಿಕೆಡಬ್ಲ್ಯೂ ಲೇಔಟ್ ಸರ್ಕಲ್ ದಲ್ಲಿ ಶ್ರೀ ರಾಮ ನವಮಿ ಹಾಗೂ ಬಸವ ಜಯಂತಿ ಆಯೋಜಿಸಿದ್ದ ಸಂಬ್ರಮದಲ್ಲಿ ಶಾಸಕ ಎಸ್ ಮುನಿರಾಜು ಪಾಲ್ಗೊಂಡು ಬಸವಣ್ಣನವರ, ಶ್ರೀರಾಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಬಸವಣ್ಣನವರು ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆ, ಕಾಯಕ, ನಿಷ್ಠೆಯಿಂದ ನಂಬಿಕೆಯುಳ್ಳವರು ನಿಜವಾದ" ಶಿವಶರಣ" ಎಂದರು ಮತ್ತು ಇದೆ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಹರೀಶ್ ಅವರ ಹುಟ್ಟು ಹಬ್ಬದ ನಿಮಿತ್ತ ಅವರಿಗೆ ಶಾಲು ಹೊದಿಸಿ ಫಲಪುಷ್ಪದೊಂದಿಗೆ ಗೌರವಿಸಿ ಶುಭ ಹಾರೈಸಿ ಮಾತಾಡಿದರು. ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಹರೀಶ್ ಅವರ ಸುಪುತ್ರ ಸಂತೋಷ ಸರ್ವರಿಗೂ ಸ್ವಾಗತಿಸಿದರು.  ಇದೆ ವೇಳೆ ಮಾಜಿ ಪಾಲಿಕೆ ಸದಸ್ಯ, ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೆಚ್ ಎನ್ ಗಂಗಾಧರ್ ಮತ್ತು ಜನ ಪ್ರಿಯ ಸಮಾಜ ಸೇವಕ ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ ಸಂಗನ ಬಸಪ್ಪ ಬಿರಾದಾರ್ ಹರೀಶ್ ಅವರಿಗೆ ಶಾಲು ಹೊದಿಸಿ ಗೌರವಿಸಿ ಶುಭ ಹಾರೈಸಿದರು ನಂತರ ಮಾತನಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿನೇಶ್, ಕಂಪ್ಯೂಟರ್ ವಿಜಯ ಕುಮಾರ್, ಮೋಹನ್, ಮಲ್ಲೇಶ್ ಬಿ ಕೆ ಸುರೇಶ್ ದೊಡ್ಡಮನಿ, ಲೀಜನ್, ಲಕ್ಷ್ಮಣ್ಣ ಸೇರಿದಂತೆ ಆರ್ ಸಿ ಹರೀಶ್ ಅವರ ಅಪಾರ ಅಭಿಮಾನಿಗಳು ಮುಂತಾದವರು ಉಪಸ್ಥಿತರಿದ್ದರು.  ವರದಿ: ಪಬ್ಲಿಕ್ ರೈಡ್ ದೇವರಾಜ್

Apr 21, 2026 | 01:31 PM
46 0
ಬ್ಲಾಕ್ಬಸ್ಟರ್ ಸ್ಫೋಟ: ವಲಯ ಕಚೇರಿ ಸಂಖ್ಯೆ 10ರಲ್ಲಿ ಒಂದೇ ಅಲ್ಲ, ಹಲವು ಸೈಟ್ಗಳಿಗೆ ‘ಕೆಜೆಪಿ’ ಇಲ್ಲದೆ ‘ಎ ಖಾತಾ’!

ಬ್ಲಾಕ್ಬಸ್ಟರ್ ಸ್ಫೋಟ: ವಲಯ ಕಚೇರಿ ಸಂಖ್ಯೆ 10ರಲ್ಲಿ ಒಂದೇ ಅಲ್ಲ, ಹಲವು ಸೈಟ್ಗಳಿಗೆ ‘ಕೆಜೆಪಿ’ ಇಲ್ಲದೆ ‘ಎ ಖಾತಾ’!

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ ಸಂಖ್ಯೆ 10, ಹೆಗ್ಗೇರಿಯಲ್ಲಿ ಕರ್ನಾಟಕ ಯೋಜನಾ ಪ್ರಾಧಿಕಾರದ (ಕೆಜೆಪಿ) ಅನುಮೋದನೆಯಿಲ್ಲದೇ ‘ಎ ಖಾತಾ’ ಮಂಜೂರು ಮಾಡಿರುವ ಪ್ರಕರಣವು ಈಗ ನಾಟಕೀಯ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಕೇವಲ ಒಂದು ಲೇಔಟ್ಗೆ ಈ ರೀತಿ ಅಕ್ರಮ ‘ಎ ಖಾತಾ’ ನೀಡಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ನಮ್ಮ ತನಿಖೆಯಲ್ಲಿ *ಕೇವಲ ಒಂದಲ್ಲ, ಹಲವಾರು ಸೈಟ್/ಲೇಔಟ್ಗಳಿಗೂ* ಕೆಜೆಪಿ ಅನುಮತಿ ಇಲ್ಲದೇ ‘ಎ ಖಾತಾ’ ನೀಡಿರುವ ಹಗರಣ ಬೆಳಕಿಗೆ ಬಂದಿದೆ.ಮೊದಲಿಗೆ ಒಂದೇ ನಿರ್ದಿಷ್ಟ ಲೇಔಟ್ನ ವಿಚಾರವಾಗಿ ಸದ್ದಾಗಿತ್ತು. ಆದರೆ ಈಗ ಸಾಕ್ಷಿಗಳನ್ನು ಕಲೆ ಹಾಕಿದಾಗ, *ಕರ ಸುಲಿಗೆದಾರರು, ರೆವೆನ್ಯೂ ಅಧಿಕಾರಿಗಳು ಮತ್ತು ಸಹಾಯಕ ಆಯುಕ್ತರು ಸೇರಿ ನಡೆಸಿರುವ ದೊಡ್ಡ ಮಟ್ಟದ ಕಾರ್ಯಾಚರಣೆಯ ಒಂದು ಭಾಗವಾಗಿ* ಈ ಅಕ್ರಮಗಳು ನಡೆದಿರುವುದು ಪತ್ತೆಯಾಗಿದೆ.ಸ್ಟೋರಿಯ ಹಿಂದಿನ ‘ಕೈಚಳಕ’ ಮತ್ತು ‘ಪಾತ್ರಧಾರಿಗಳು’:ಈ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೂರು ಕೀಲಿಕೈ ಗುಂಪುಗಳಿವೆ:1. ಕರ ವಸುಲಿದಾರರು (Revenue Recovery Agents): ಸಾಮಾನ್ಯ ಜನರಿಂದ ಹಣ ವಸೂಲಿ ಮಾಡಿ, ಅಕ್ರಮವಾಗಿ ದಾಖಲೆಗಳನ್ನು ತಯಾರಿಸಿ ಕಚೇರಿಗೆ ಸಲ್ಲಿಸುವ ಈ ಗ್ಯಾಂಗ್ ಪ್ರಮುಖ ಕೊಂಡಿಯಾಗಿದೆ.2. ರೆವೆನ್ಯೂ ಅಧಿಕಾರಿಗಳು: ದಾಖಲೆಗಳಲ್ಲಿನ ಲೋಪದೋಷಗಳನ್ನು ಕಡೆಗಣಿಸಿ, ಅನುಮೋದನೆಗೆ ಹಸಿರು ನಿಶಾನೆ ತೋರಿದವರು.3. ಸಹಾಯಕ ಆಯುಕ್ತರು: ಅಂತಿಮವಾಗಿ ನಿಯಮಗಳನ್ನು ಮೀರಿ ‘ಎ ಖಾತಾ’ ಮಂಜೂರು ಮಾಡಿದ ಅಧಿಕಾರಿ.ಈ ತ್ರಿಕೋನ ಸಂಚಿನ ಸಂಪೂರ್ಣ ‘ಸ್ಟೋರಿ’ ಸಾಕ್ಷಿ ಸಮೇತ ಬಹಿರಂಗವಾಗಲಿದೆ.“ಈ ವಿಚಾರವನ್ನು ನಾವು ಸಾಕಷ್ಟು ದಿನಗಳಿಂದ ತನಿಖೆ ಮಾಡುತ್ತಿದ್ದೇವೆ. ಈಗ *ಸ್ಪಷ್ಟವಾದ ಸಾಕ್ಷ್ಯಾಧಾರಗಳು (documentary evidence)* ನಮ್ಮ ವಶಕ್ಕೆ ಬಂದಿವೆ. ಮುಂದಿನ ಕೆಲವೇ ದಿನಗಳಲ್ಲಿ, ಯಾರು, ಯಾವಾಗ, ಎಷ್ಟು ಹಣ ಪಡೆದುಕೊಂಡು, ಯಾವ ಸೈಟ್ಗಳಿಗೆ ಕೆಜೆಪಿ ಇಲ್ಲದೆ ‘ಎ ಖಾತಾ’ ನೀಡಲಾಗಿದೆ ಎಂಬುದರ ಸಂಪೂರ್ಣ ಪಟ್ಟಿಯನ್ನು ಸಹಿತ ಸಾರ್ವಜನಿಕವಾಗಿ ಹೊರಗೆಡಹಲಾಗುವುದು” ಎಂದು ಪ್ರಕರಣದ ತನಿಖೆಯಲ್ಲಿ ತೊಡಗಿರುವ ಮೂಲಗಳು ತಿಳಿಸಿವೆ.ಈ ಹಗರಣವು ಪಾಲಿಕೆಯ ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆ (KTCP Act), 1961ರ ಸೆಕ್ಷನ್ 14 ಮತ್ತು 17 ಸ್ಪಷ್ಟವಾಗಿ ನಿಯಮಗಳನ್ನು ವಿವರಿಸಿದೆ. ಇಷ್ಟಾದರೂ, ನಿಯಮವನ್ನು ಮೀರಿ ನಡೆಸಿಕೊಂಡ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಾನಗರ ಪಾಲಿಕೆ ಆಯುಕ್ತರ ಗಮನಕ್ಕೆ ಸಾಕ್ಷಿ ಸಮೇತ ಮನವಿ ಸಲ್ಲಿಸಲು ಸಿದ್ಧತೆ ನಡೆದಿದೆ. ಅಲ್ಲದೆ, ಭ್ರಷ್ಟ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಬೇಕು ಎಂಬ ಸಾರ್ವಜನಿಕರ ಆಕ್ರೋಶವೂ ಹೆಚ್ಚುತ್ತಿದೆ.

Apr 20, 2026 | 06:06 PM
44 0
“ಹೊಟ್ಟೆ ತುಂಬಿಸಿದ ಮಕ್ಕಳೇ ಮನೆಯಿಂದ ಎತ್ತಿಕಟ್ಟಿದರು; ಅಸಹಾಯಕ ತಾಯಿಯ ಮೊರೆ ಕೇಳದ ಪೊಲೀಸರು” – ಹೈಕೋರ್ಟ್ ಮೆಟ್ಟಿಲೇರಿದ ಹಿರಿಯ ನಾಗರಿಕೆ

“ಹೊಟ್ಟೆ ತುಂಬಿಸಿದ ಮಕ್ಕಳೇ ಮನೆಯಿಂದ ಎತ್ತಿಕಟ್ಟಿದರು; ಅಸಹಾಯಕ ತಾಯಿಯ ಮೊರೆ ಕೇಳದ ಪೊಲೀಸರು” – ಹೈಕೋರ್ಟ್ ಮೆಟ್ಟಿಲೇರಿದ ಹಿರಿಯ ನಾಗರಿಕೆ

ಧಾರವಾಡ, ಏಪ್ರಿಲ್ 21: ತಮ್ಮದೇ ಗಂಡು ಮಕ್ಕಳು "ವಾಟ್ನಿ" ಮಾಡಿಸಿಕೊಡುವ ನೆಪದಲ್ಲಿ ಆಸ್ತಿಯನ್ನೆಲ್ಲ ಲಪಟಾಯಿಸಿ, ಮನೆಯಿಂದ ಹೊರಹಾಕಿದ್ದಾರೆಂದು ಧಾರವಾಡದ ಜಯನಗರದ ಹಿರಿಯ ನಾಗರಿಕೆ ಶ್ರೀಮತಿ ಮೇಹರುನೀಸಾ ದಿವಾಲ್ದಾರ್ (65) ಆರೋಪಿಸಿದ್ದಾರೆ. ಪ್ರಸ್ತುತ ಹೆಣ್ಣು ಮಕ್ಕಳ ಮನೆಯಲ್ಲಿರುವ ಅವರಿಗೆ, ಗಂಡು ಮಕ್ಕಳು ಅಲ್ಲಿಗೂ ಬಂದು ಬೆದರಿಸಿ ‘ಜಾಗ ಖಾಲಿ ಮಾಡು’ ಎಂದು ಕಿರುಕುಳ ನೀಡುತ್ತಿದ್ದಾರೆ.ಪ್ರಕರಣ ಹೈಕೋರ್ಟ್ ವಿಚಾರಣೆಯಲ್ಲಿದ್ದರೂ, ಪುತ್ರರು ಆಸ್ತಿಯಲ್ಲಿ ಚಟುವಟಿಕೆ ಮುಂದುವರೆಸಿದ್ದಾರೆ. ಉಪನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪ್ರಯೋಜನವಾಗಿಲ್ಲ. “ದೂರು ದಾಖಲಿಸುವುದಿಲ್ಲ, ಅವರ ಪರವಾಗಿಯೇ ಮಾತಾಡುತ್ತಾರೆ” ಎಂದು ಮೇಹರುನೀಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಸ್ತಿ ವಿವರ ಮತ್ತು ವಂಚನೆಯ ಆರೋಪಶ್ರೀಮತಿ ಮೇಹರುನೀಸಾ ಅವರು ತಮ್ಮ ದೂರಿನಲ್ಲಿ ನಿರ್ದಿಷ್ಟವಾಗಿ ತಿಳಿಸಿರುವ ಪ್ರಕಾರ:ಆಸ್ತಿ ವಿಳಾಸ: ಧಾರವಾಡದ ಸಪ್ತಾಪುರ ಗ್ರಾಮದ ಮಿಚಿಗನ್ ಕಂಪೌಂಡ್, *ಸರ್ವೆ ನಂ. 59/ಎ/1* ರ ಪ್ಲಾಟ್ ನಂ. 17/ಎ (ಕ್ಷೇತ್ರ: 05 ಗುಂಟೆ)ಆಸ್ತಿಯ ಸ್ವರೂಪ: ಮೃತ್ಯು ಪತ್ರದ (Will) ಮೂಲಕ ತಮಗೆ ಮತ್ತು ತಮ್ಮ ಮಕ್ಕಳಿಗೆ ಜಂಟಿಯಾಗಿ ಬಂದಿರುವ ಸ್ಥಾವರ ಆಸ್ತಿ- *ವಂಚನೆಯ ದಿನಾಂಕ:* 11.09.2015 ರಂದು ಎದುರುದಾರರು ತಮಗೆ ಮತ್ತು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಯಾವುದೇ ಮಾಹಿತಿ ನೀಡದೆ, ಕತ್ತಲಲ್ಲಿಟ್ಟು, ಸಹಿಗಳನ್ನು ಬೇರೆ ಉದ್ದೇಶಕ್ಕೆಂದು ಪಡೆದು ನಕಲಿ ಮಾಡಿ *“ವಾಟ್ಟಿ ಪತ್ರ” (Partition Deed)* ಸೃಷ್ಟಿಸಿಕೊಂಡಿದ್ದಾರೆ (ದಸ್ತಾವೇಜು: DWR-1-05768-2015-16)- *ವಂಚನೆಯ ವಿಧಾನ:* ಒಂದು ಗುಂಟೆ ಜಾಗ ತನಗೆ ಬರುತ್ತದೆಂದು ಹೇಳಿ ಸ್ಥಾವರ ಆಸ್ತಿಯ ವಾಟ್ನಿ ಪತ್ರದೊಳಗೆ *ಬಕ್ಷಿಸ್ ಪತ್ರ* ಮಾಡಿ ಮೋಸ ಮಾಡಲಾಗಿದೆಈ ದಾಖಲೆಯಲ್ಲಿ ತನಗೆ ಸಲ್ಲಬೇಕಾದ ಪಾಲನ್ನು ಕಸಿದುಕೊಂಡು, ಆಸ್ತಿಯನ್ನು ಎದುರುದಾರರು ತಮ್ಮ ತಮ್ಮಲ್ಲೇ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇತ್ತೀಚೆಗೆ ಮಾಹಿತಿ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.ಪೊಲೀಸ್ ಇಲಾಖೆಯ ಪಾತ್ರವೇನು? – ಕಾನೂನು ಕಡ್ಡಾಯಗೊಳಿಸುವ ರಕ್ಷಣಾ ಕ್ರಮಗಳುಹಿರಿಯ ನಾಗರಿಕರ ಸುರಕ್ಷತೆಗಾಗಿ ಹಿರಿಯ ನಾಗರಿಕರು ಮತ್ತು ಪೋಷಕರ ಭರಣಪೋಷಣೆ ಹಾಗೂ ಕಲ್ಯಾಣ ಕಾಯಿದೆ-2007 ಪೊಲೀಸ್ ಇಲಾಖೆಗೆ ಹಲವಾರು ಕಡ್ಡಾಯ ಕರ್ತವ್ಯಗಳನ್ನು ವಿಧಿಸಿದೆ. ಶ್ರೀಮತಿ ಮೇಹರುನೀಸಾ ಅವರಂಥ ಸನ್ನಿವೇಶಗಳಲ್ಲಿ ಪೊಲೀಸರು ಈ ಕೆಳಗಿನ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ:1. ಕಡ್ಡಾಯ ದೂರು ದಾಖಲಾತಿ ಮತ್ತು ಕ್ರಿಮಿನಲ್ ಪ್ರಕರಣಮಕ್ಕಳಿಂದ ನಿರ್ಲಕ್ಷ್ಯ, ಕಿರುಕುಳ, ಆಸ್ತಿ ವಂಚನೆ ಅಥವಾ ಮನೆಯಿಂದ ಹೊರಹಾಕುವ ಪ್ರಯತ್ನ ನಡೆದಲ್ಲಿ, ಸಂಬಂಧಪಟ್ಟ ಪೊಲೀಸ್ ಠಾಣೆಯು ತಕ್ಷಣ ದೂರು ದಾಖಲಿಸಬೇಕು ಮತ್ತು ಕ್ರಿಮಿನಲ್ ಪ್ರಕರಣವನ್ನು ನೋಂದಾಯಿಸಬೇಕು. ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿರುವಂತೆ, ವಂಚನೆ ಅಥವಾ ನಕಲಿ ದಾಖಲೆ ಪ್ರಕರಣಗಳಲ್ಲಿ ಸಿವಿಲ್ ಮೊಕದ್ದಮೆಯ ಜೊತೆಗೆ ಕ್ರಿಮಿನಲ್ ದೂರು ಸಹ ಸಲ್ಲಿಸಬಹುದಾಗಿದೆ – ಸಿವಿಲ್ ನ್ಯಾಯಾಲಯವು ನಕಲಿ, ವಂಚನೆಯಂತಹ ಕ್ರಿಮಿನಲ್ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ.2. ನೋಡಲ್ ಅಧಿಕಾರಿ ನೇಮಕ (ಕಾಯಿದೆಯ ಪ್ರಮುಖ ಸೌಲಭ್ಯ)2019ರ ತಿದ್ದುಪಡಿ ಮಸೂದೆಯ ಪ್ರಕಾರ, ಪ್ರತಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕ (ASI) ಅಥವಾ ಮೇಲಿನ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ಈ ಅಧಿಕಾರಿಯು ಹಿರಿಯ ನಾಗರಿಕರ ಸಮಸ್ಯೆಗಳನ್ನು ಕೇಳಲು ಮತ್ತು ತ್ವರಿತ ಕ್ರಮ ಕೈಗೊಳ್ಳಲು ವಿಶೇಷ ಜವಾಬ್ದಾರಿಯುತನಾಗಿರುತ್ತಾನೆ.3. ಬಂಧನದ ಅಧಿಕಾರ (ಅರೆಸ್ಟ್ ವಿದೌಟ್ ವಾರಂಟ್)ಕಾಯಿದೆಯ ಸೆಕ್ಷನ್ 5 ರ ಅಡಿಯಲ್ಲಿ, ಹಿರಿಯ ನಾಗರಿಕರಿಂದ ಮಾಹಿತಿ ಪಡೆದ ನಂತರ, ಅಪರಾಧ ಎಸಗಿದ ವ್ಯಕ್ತಿಯನ್ನು ವಾರಂಟ್ ಇಲ್ಲದೆಯೇ ಬಂಧಿಸುವ ಅಧಿಕಾರ ಪೊಲೀಸರಿಗೆ ಇದೆ.4. ಹಿರಿಯರ ಮೇಲಿನ ದೈಹಿಕ/ಮಾನಸಿಕ ದೌರ್ಜನ್ಯಕ್ಕೆ ಶಿಕ್ಷೆ2019ರ ತಿದ್ದುಪಡಿ ಮಸೂದೆಯ ಪ್ರಕಾರ, ದುರುಪಯೋಗ (abuse) – ದೈಹಿಕ, ಮೌಖಿಕ, ಭಾವನಾತ್ಮಕ ಮತ್ತು ಆರ್ಥಿಕ ದುರುಪಯೋಗ – ಸಹ ಅಪರಾಧವಾಗಿದ್ದು, ಇದಕ್ಕೆ 6 ತಿಂಗಳ ಜೈಲು ಅಥವಾ ₹10,000 ದಂಡ ವಿಧಿಸಬಹುದು.5. ಮಾಸಿಕ ವರದಿ ಕಡ್ಡಾಯಹಿರಿಯ ನಾಗರಿಕರ ವಿರುದ್ಧ ನಡೆಯುವ ಅಪರಾಧಗಳಿಗಾಗಿ ಪೊಲೀಸ್ ಠಾಣೆಗಳು *ಪ್ರತ್ಯೇಕ ರಿಜಿಸ್ಟರ್ ಅನ್ನು ನಿರ್ವಹಿಸಬೇಕು*. ಈ ಅಪರಾಧಗಳ ಮಾಸಿಕ ವರದಿಯನ್ನು ಸಂಬಂಧಪಟ್ಟ ಜಿಲ್ಲಾ ಎಸ್ಪಿ ಅಥವಾ ಆಯುಕ್ತರಿಗೆ ಸಲ್ಲಿಸಬೇಕು.ಕಾನೂನಿನಲ್ಲಿ ಇಷ್ಟೆಲ್ಲಾ ಅವಕಾಶಗಳು ಇದ್ದರು ಸಹಿತ ಉಪ ನಗರ ಪೊಲೀಸ್ ಠಾಣೆಯಲ್ಲಿ ಶ್ರೀಮತಿ ಮೇಹರುನೀಸಾ ದಿವಾಲ್ದಾರ್ ಅವರ ದೂರು ದಾಖಲಿಸಲು ಹಿಂಜರಿಕೆ ಏಕೆ ಎಂಬುದು ತಿಳಿದುಬರದಹಾಗಿದೆ. ಶ್ರೀಮತಿ ಮೇಹರುನೀಸಾ ದಿವಾಲ್ದಾರ್ ಅವರ ಪ್ರಕರಣವು ಹಿರಿಯ ನಾಗರಿಕರ ರಕ್ಷಣೆಗೆ ಇರುವ ಕಾನೂನುಗಳ ಅಂತರವನ್ನು ಬಯಲಿಗೆಳೆದಿದೆ. ವಾಟ್ಟಿ ಪತ್ರವು ಸೆಕ್ಷನ್ 23 ರ ವ್ಯಾಪ್ತಿಯಿಂದ ಹೊರತಾಗಿದ್ದು, ಅವರು ಸಿವಿಲ್ ನ್ಯಾಯಾಲಯದ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಆದರೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರಾಕರಿಸಿರುವುದು ಮತ್ತು ಮಕ್ಕಳ ಪರವಾಗಿ ಮಾತನಾಡುತ್ತಿರುವುದು ಗಂಭೀರ ನಿರ್ಲಕ್ಷ್ಯವಾಗಿದೆ.ನ್ಯಾಯಮೂರ್ತಿ ಸುರಜ್ ಗೋವಿಂದರಾಜ್ ಅವರು ಸೂಚಿಸಿರುವಂತೆ: “ದುರ್ಬಲತೆ, ಅವಲಂಬನೆ ಮತ್ತು ನಂಬಿಕೆಯ ದುರುಪಯೋಗಕ್ಕೆ ಉದಾಸೀನತೆ ತೋರುವ ವಿಧಾನವು ಕಾಯಿದೆಯ ಉದ್ದೇಶವನ್ನು ಸೋಲಿಸುತ್ತದೆ. ಹಿರಿಯ ನಾಗರಿಕರ ರಕ್ಷಣೆಗೆ ಇರುವ ಕಾನೂನುಗಳನ್ನು ಕಾಗದದ ಮೇಲೆ ಮಾತ್ರ ಇರಿಸದೆ, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ.”

Apr 21, 2026 | 10:09 AM
487 0
ಪ್ರತಿಭಾ ಪುರಸ್ಕಾರ ಮತ್ತು ರೈತರಿಗೆ ಅಭಿನಂದನಾ ಸಮಾರಂಭ

ಪ್ರತಿಭಾ ಪುರಸ್ಕಾರ ಮತ್ತು ರೈತರಿಗೆ ಅಭಿನಂದನಾ ಸಮಾರಂಭ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ವಿದ್ಯಾರ್ಥಿಗಳು ಇತರರ ಏಳಿಗೆಯನ್ನು ಪ್ರೋತ್ಸಾಹಿಸಬೇಕು. ಅಸೂಯೆ ಪಡದೆ ಅವರಂತೆ ನಾವು ಕೂಡ ಹೆಚ್ಚು ಅಂಕ ಪಡೆದು ಸಮಾಜದಲ್ಲಿ ಕೀರ್ತಿ ತರಬೇಕು'ಎಂದು ಸೋಮನಹಳ್ಳಿ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಡಾ. ಆನಂದ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಭುವನೇಶ್ವರಿ ನಗರದ ಮಾಸ್ಟರ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರೈತರಿಗೆ ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು.ಪೋಷಕರು ತಮ್ಮ ಮಕ್ಕಳನ್ನು ಸ್ನೇಹಿತರಂತೆ ಭಾವಿಸಿ ಅವರಿಗೆ ಕಾಲೇಜಿನಲ್ಲಿ ನಡೆದ ಪಾಠ ಪ್ರವಚನದ ಬಗ್ಗೆ ವಿಚಾರಿಸಬೇಕು. ತಮ್ಮ ಮಕ್ಕಳು ಯಾವ ರೀತಿ ವಿದ್ಯಾಭ್ಯಾಸ ಮಾಡುತ್ತಾರೆ ಎಂಬುದರ ಬಗ್ಗೆ ಗಮನ ಹರಿಸಬೇಕು' ಎಂದು ತಿಳಿಸಿದರು.ಪ್ರಾಂಶುಪಾಲ ಮಲ್ಲಿಕಾರ್ಜುನ ಕೆ.ಎಸ್, ಮಾತನಾಡಿ,' ರೈತರ ಶ್ರಮ ವಿದ್ಯಾರ್ಥಿಗಳಿಗೆ ಅರಿವಾಗಲಿ, ಹಾಗೆಯೇ ಅವರಿಗೆ ಗೌರವ ಕೊಡುವುದನ್ನು ಕಲಿಯಲಿ ಎಂದು ವಿದ್ಯಾರ್ಥಿಗಳ ಮುಂದೆ ರೈತರಿಗೆ ಅಭಿನಯಿಸಲಾಯಿತು' ಎಂದು ತಿಳಿಸಿದರು.ರೈತ ಪಾಪಣ್ಣ ಮಾತನಾಡಿ' ನಮಗೆ ಅಭಿನಂದಿಸಿರುವುದು ಹೆಮ್ಮೆಯ ಸಂಗತಿ. ಯಾರೊಬ್ಬರೂ ರೈತರ ಬಗ್ಗೆ ಗಮನ ಹರಿಸುತ್ತಿರಲಿಲ್ಲ. ಇದು ಎಲ್ಲರಿಗೂ ಮಾದರಿಯಾಗಲಿ' ಎಂದರು.ಸಮಾರಂಭದಲ್ಲಿ ಶೇ. 95ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪದಕ, 10ಸಾವಿರ ನಗದು ಮತ್ತು ಸನ್ಮಾನ ಮಾಡಲಾಯಿತು. ಎನ್.ಜಿ. ಗಂಗಣ್ಣ, ಪಾಪಣ್ಣ, ಪ್ರಾಧ್ಯಾಪಕರು ಮುಂತಾದವರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Apr 21, 2026 | 04:16 AM
118 0