ಕರ್ನಾಟಕ News

Discover the latest headlines in this section.

ಜಿಮ್‌ನಿಂದ ಮನೆಗೆ ಬಂದ ಬಾಡಿ ಬಿಲ್ಡರ್‌ಗೆ ಹೃದಯಾಘಾತ; ಮನೆ ಮುಂದೆ ಕುಸಿದು ಬಿದ್ದು ಸಾವು

ಜಿಮ್‌ನಿಂದ ಮನೆಗೆ ಬಂದ ಬಾಡಿ ಬಿಲ್ಡರ್‌ಗೆ ಹೃದಯಾಘಾತ; ಮನೆ ಮುಂದೆ ಕುಸಿದು ಬಿದ್ದು ಸಾವು

ದಾವಣಗೆರೆ: ಜಿಮ್‌ನಲ್ಲಿ ವ್ಯಾಯಾಮ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದ ಯುವ ಬಾಡಿ ಬಿಲ್ಡರ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ದಾವಣಗೆರೆಯಲ್ಲಿ ನಡೆದಿದೆ.ದಾವಣಗೆರೆಯ ಕೆಟಿಜೆ ನಗರದ ನಿವಾಸಿಯಾಗಿದ್ದ ಸುಶೀಲಕುಮಾರ (26) ಮೃತ ದುರ್ದೈವಿ. ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದ ಸುಶೀಲಕುಮಾರ, ಎಂದಿನಂತೆ ಜಿಮ್‌ನಲ್ಲಿ ವ್ಯಾಯಾಮ ಮುಗಿಸಿಕೊಂಡು ಮನೆಗೆ ಬಂದಿದ್ದರು. ಈ ವೇಳೆ ಮನೆಯ ಪ್ರವೇಶ ದ್ವಾರದ ಬಳಿ ಏಕಾಏಕಿ ಕುಸಿದು ಬಿದ್ದಿದ್ದಾರೆ.ತಕ್ಷಣವೇ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಪರೀಕ್ಷಿಸಿದ ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.ಯುವ ವಯಸ್ಸಿನಲ್ಲೇ ಆರೋಗ್ಯವಂತನಾಗಿದ್ದ ಹಾಗೂ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸುಶೀಲಕುಮಾರ ಅವರ ಅಕಾಲಿಕ ನಿಧನ ಸ್ನೇಹಿತರು ಮತ್ತು ಕ್ರೀಡಾ ವಲಯದವರಲ್ಲಿ ಆಘಾತ ಮೂಡಿಸಿದೆ. ಅವರ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಕೆಟಿಜೆ ನಗರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.ಘಟನೆ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Jun 17, 2026 | 09:32 AM
253 0
No Image

ಬ.ನಾ.ರವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಶ್ರೀ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಹುಟ್ಟುಹಬ್ಬಗಳು ಸಾದನೆಯ ಸಂಕೇತವಾಗಬೇಕು ಮತ್ತಷ್ಟು ಸಾಧಿಸಲು ಪೇರಣೆಯಾಗಬೇಕು.ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಭಿತ್ತಿ ಸಮಾಜ ಸೇವೆಯಲ್ಲಿ ತೊಡಗಿ ತನ್ನ ಸುತ್ತಮುತ್ತಲಿನ ಜನರಿಗ ಸಹಾನುಭೂತಿ ಹೊಂದಿರುತ್ತಾರೋ ಅವರು ಜಗತ್ತಿನಲ್ಲಿ ಉತ್ತಮ ಎಂದು ಹೆಸರುವಾಸಿಯಾಗುತ್ತಾರೆ ಅಂತವರ ಸಾಲಿನಲ್ಲಿ ಬ ನಾ ರವಿ ಸೇರುತ್ತಾರೆ ಅವರು ನೂರ್ಕಾಲ ಅರೋಗ್ಯವಾಗಿ ಬಾಳಲಿ ಎಂದು ಶ್ರೀ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ ಶುಭ ಕೋರಿ ಅರ್ಶೀವಾದ ಮಾಡಿದರು.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯ ಪ್ರಭಾವಿ ಕಾಂಗ್ರೆಸ್ ಮುಖಂಡ ಉದ್ಯಮಿ,ವಿದ್ಯಾಭೂಷಣ್ ವಿದ್ಯಾಸಂಸ್ಥೆಯಸಂಸ್ಥಾಪಕ,ಮಾನವೀಯತೆಯುಳ್ಳ,ಸದಾಹಸನ್ಮುಖಿ,ಸಾಧನೆಯ ಹರಿಕಾರ ಬ.ನಾ.ರವಿಗೆ ಜನ್ಮದಿನದ ಸಂಭ್ರಮದಲ್ಲಿ ಕುಣಿಗಲ್ ತಾಲ್ಲೂಕಿನ ಕಿತ್ತಲಿನಾಗಮಂಗಲ ಅರೇಶಂಕರಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ ಭಾಗವಹಿಸಿ ಬ.ನಾ.ರವಿ ಹಾಗೂ ಪಾರ್ವತಿ ಬ.ನಾ.ರವಿ ದಂಪತಿಗಳಿಗೆ ಸನ್ಮಾನಿಸಿ ಅರ್ಶೀವದಿಸಿ ಶುಭಕೋರಿದರು.ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ ಒಬ್ಬ ರೈತನ ಮಗನಾಗಿ ಬೆಂಗಳೂರಿಗೆ ಬಂದ ಬ.ನಾ ರವಿ ಅರ್ಥಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಸದೃಡವಾಗಿ ಎಲ್ಲರ ವಿಶ್ವಾಸಗಳಿಸಿ ಬೆಳೆಯುವುದು ಸುಲಭದ ಮಾತಲ್ಲ ಯೋಗ ಯೋಗ್ಯತೆ ಅಷ್ಟು ಸುಲಭವಾಗಿ ಒಲಿಯುವಿದಿಲ್ಲ ಅಂತಹ ಎಲ್ಲಾ ಯೋಗ್ಯತೆಗಳನ್ನು ಸಂಪಾದಿಸಿ ಜನಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ಈಗಾಗಲೇ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಮುಂದೆ ಬರುವ ಜಿಬಿಎ ಆಕಾಂಕ್ಷಿಯಾಗಿದ್ದು ಹೆಗ್ಗನಹಳ್ಳಿ ಜನತೆಯ ಅರ್ಶೀವಾದವಿರಲಿ ಎಂದರು.ಈ ಸಂಧರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್, ರೂಪ ಲಿಂಗೇಶ್ವರ್,ಹೆಗ್ಗನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ,ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಜೆಡಿಎನ್ ಜಗದೀಶ್,ಚಲನಚಿತ್ರ ನಿರ್ಮಾಪಕ ದೇವರಾಜ್,ರಾಜ್ಯಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿ ಎವಿ ರಂಗರಾಜ್, ಹೆಗ್ಗನಹಳ್ಳಿ ಕಾಂಗ್ರೆಸ್ ಮುಖಂಡ ರಮೇಶ್ ಗೌಡ,ಕಾಂಗ್ರೆಸ್ ಪಕ್ಷದ ಸಂಯೋಜಕ ಎಸ್ಸಿ ಎಸ್ಟಿ ರಮೇಶ್,ಕಾರ್ಮಿಕ ಘಟಕದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಮೈಕಲ್ ಬಾಬು,ಶಿವಪುರ ವಾರ್ಡಿನ ಜಿಬಿಎ ಆಕಾಂಕ್ಷಿ ವಿ ಡಿ ಚಿಕ್ಕಣ್ಣ , ಬ ನಾ ಮಧು ಕುಮಾರ್,ಬ ನಾ ಗಿರೀಶ್, ಡಾ.ಅಂಬೇಡ್ಕರ್ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ ಉಮೇಶ್ ರಾವಣ್, ರಾಜ್ಯ ಸಂಚಾಲಕ ರಮೀಜ್ , ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ರಾಜ್ಯಅಧ್ಯಕ್ಷರು ಹೇಮಾ ರಾಜೇಂದ್ರನ್,ಶಿಲ್ಪರಾಣಿ,ಸಲ್ಮಾ, ಹೇಮಾ,ತಾಸೀನಾ ಭಾನು,ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಶುಭ ಕೋರಿದರು.

Jun 16, 2026 | 12:11 PM
267 0
ಪ್ರಧಾನಿ ಮಂತ್ರಿಗಳ 12 ವರ್ಷ ಪೂರೈಕೆಗೆ ರಕ್ತದಾನ ಮತ್ತು ಉಚಿತ ಆರೋಗ್ಯ ಶಿಬಿರ

ಪ್ರಧಾನಿ ಮಂತ್ರಿಗಳ 12 ವರ್ಷ ಪೂರೈಕೆಗೆ ರಕ್ತದಾನ ಮತ್ತು ಉಚಿತ ಆರೋಗ್ಯ ಶಿಬಿರ

ಪಬ್ಲಿಕ್ ರೈಡ್ ನ್ಯೂಸ್: ಪೀಣ್ಯ ದಾಸರಹಳ್ಳಿ ಸಮೀಪದ ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಬಸ್ ನಿಲ್ದಾಣದ ಹತ್ತಿರ ಪ್ರಧಾನಿ ನರೇಂದ್ರ ಮೋದಿ ಅವರು 12 ವರ್ಷಗಳ ಕಾಲ ಯಶಸ್ವಿ ಆಡಳಿತ ನಡೆಸಿದ ಪ್ರಯುಕ್ತ ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೃಷ್ಣ ನೇತ್ರಾಲಯ ಮತ್ತು ನೇಸರ ಫೌಂಡೇಶನ್ ವತಿಯಿಂದ ಆಯೋಜಿಸಲಾದ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಶಾಸಕ ಎಸ್. ಮುನಿರಾಜು ಪ್ರಶಂಸನಾ ಪತ್ರ,ಹಣ್ಣಿನ ಕಿಟ್ ಮತ್ತು ಕನ್ನಡಕ ನೀಡಿದರು. ಹಾಗೆಯೇ ಶೇಕರಿಸಿದ ರಕ್ತವನ್ನು ಸಪ್ತಗಿರಿ ಆಸ್ಪತ್ರೆಗೆ ನೀಡಿದರು. ನೇಸರ ಫೌಂಡೇಶನ್ ಅಧ್ಯಕ್ಷ ಬಿ.ಎಸ್. ಅನಿಲ್ ಕುಮಾರ್, ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಮುನಿರಾಜು, ಭಾಗ್ಯಮ್ಮ, ಉಮಾದೇವಿ ನಾಗರಾಜು, ಸ್ವಪ್ನ, ಸಿ.ಎನ್. ದಯಾನಂದ್, ಬಿ.ಎಂ. ನಾರಾಯಣ್ ಮುಂತಾದವರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Jun 15, 2026 | 01:38 PM
11 0
ಜಮೀನಿನ ಕಾಪೌಂಡ್ ಒಡೆದು ಹಾಕಿದ  ದುಷ್ಕರ್ಮಿಗಳು ಬಂಧಿಸುವಂತೆ ಠಾಣೆ ಮೆಟ್ಟಿಲೇರಿದ ಮಾಲೀಕ.

ಜಮೀನಿನ ಕಾಪೌಂಡ್ ಒಡೆದು ಹಾಕಿದ ದುಷ್ಕರ್ಮಿಗಳು ಬಂಧಿಸುವಂತೆ ಠಾಣೆ ಮೆಟ್ಟಿಲೇರಿದ ಮಾಲೀಕ.

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಜಮೀನು ನನ್ನ ಕ್ರಯಕ್ಕೆ ಬಂದು ಹಲವು ವರ್ಷಗಳೇ ಕಳೆದಿವೆ ಆದರೆ ನಾನೇ  ಮಾಲೀಕ ಅಂತ ಹೇಳಿಕೊಂಡು ಅಕ್ರಮವಾಗಿ ನಾಲ್ಕೈದು ಭಾರಿ ಜಮೀನನ ಹತ್ತಿರ ಬಂದು ರಾತ್ರೋರಾತ್ರಿ ಕಾಂಪೌಂಡ್ ಒಡೆದು ಹಾಕಿ ಜಮೀನನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದು ಈಗಾಗಲೇ ಅವರ ಹಲವು ಮೊಕ್ಕದೊಮ್ಮೆಗಳು ದಾಖಲಾಗಿವೆ.ನ್ಯಾಯಾಲಯದಲ್ಲಿ ಕೂಡ ನನ್ನ ಪರವಾಗಿ ತಡೆಯಾಜ್ಞೆ ಕೂಡ ಬಂದಿದೆ.ಅದರೂ ಕಾನೂನು ಗಾಳಿಗೆ ತೂರಿ ಅಕ್ರಮವೆಸುಗುತ್ತಿದ್ದಾರೆ ಎಂದು ಜಮೀನು ಮಾಲೀಕ ಉಮೇಶ್ ಆರೋಪಿಸಿದರು.ದಾಸರಪುರ ಹೋಬಳಿ ಲಕ್ಷ್ಮೀಪುರ ಗ್ರಾಮಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವ  ಸರ್ವೆನಂ 119/1ರಲ್ಲಿ12ಗುಂಟೆ ಹಾಗೂ 120/1 ರಲ್ಲಿ 08 ಗುಂಟೆ  ಜಮೀನು  ಉಪನೋಂದಣಿ ಕಚೇರಿಯ ಡಿ.ಎಸ್.ಪಿ -1-07528/2010-11 ನೇ ನಂಬರಾಗಿ ನೋಂದಣಿಯಾಗಿದ್ದು ಡಿ,ಎಸ್.ಪಿ ಡಿ - 85  ನೇ ದಾಖಲಾಗಿ ಉಮೇಶ್ ಎಸ್ ಎನ್ ರವರಿಗೆ  ಕ್ರಯವಾಗಿದ್ದು ಸದರಿ ಜಾಗಕ್ಕೆ ಮೂಲ ಮಾಲೀಕ ಅನಗತ್ಯ ಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಠಾಣೆ ಮಟ್ಟಿಲೆರಿದ್ದಾರೆ.  ಮೂಲ ಮಾಲೀಕ ಆಸ್ತಿ ಕ್ರಯದ ನಂತರವೂ ಜಮೀನು ಲಪಾಟಯಿಸಲು ರೌಡಿಗಳನ್ನು ಕರೆರತಂದು ನಮಗೆ ತೊಂದರೆ ಕಿರುಕುಳ ನೀಡುತ್ತಿದ್ದಾನೆ.ರಿಯಲ್ ಎಸ್ಟೇಟ್ ದಂದೆಯಿಂದ ಜಮೀನುಗಳನ್ನು ಹಲವು ಭಾರಿ ಮಾರಾಟ ಮಾಡಲು ಯತ್ನಿಸಿದರಿಂದ ಪೋಲೀಸ್ ಠಾಣೆಯಲ್ಲಿ ದೂರುದಾಖಲಾಗಿವೆ.ಕೂಡಲೇ ಇಂತವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅಗ್ರಹಿಸಿದರು.   ವರದಿ : ಪಬ್ಲಿಕ್ ರೈಡ್ ದೇವರಾಜ್

Jun 15, 2026 | 12:41 PM
115 0
ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟ?: ಅಗಡಿ ಕಾಲೇಜಿನ ಅಡುಗೆ ವ್ಯವಸ್ಥೆ ವಿರುದ್ಧ ಆರೋಪ

ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟ?: ಅಗಡಿ ಕಾಲೇಜಿನ ಅಡುಗೆ ವ್ಯವಸ್ಥೆ ವಿರುದ್ಧ ಆರೋಪ

ಲಕ್ಷ್ಮೇಶ್ವರ: ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಗಂಭೀರ ಅವ್ಯವಸ್ಥೆಗಳು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಕಾಲೇಜಿನ ಹಾಸ್ಟೆಲ್ ಅಡುಗೆ ಕೋಣೆಯಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಆಹಾರ ತಯಾರಿಕೆಗೆ ಬಳಸುವ ರುಬ್ಬುವ ಮಷೀನ್ ಅಸ್ವಚ್ಛ ಸ್ಥಿತಿಯಲ್ಲಿ ಇರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ನೀಡಲಾದ ಊಟದಲ್ಲಿ ಜಿರಳೆಗಳು ಪತ್ತೆಯಾಗಿರುವ ಘಟನೆ ವಿದ್ಯಾರ್ಥಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ.ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಬಗ್ಗೆ ಹಲವು ಬಾರಿ ಕಾಲೇಜು ಆಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅಸ್ವಚ್ಛ ವಾತಾವರಣದಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರಲ್ಲಿಯೂ ಆತಂಕ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸುವ ಜವಾಬ್ದಾರಿ ಕಾಲೇಜು ಆಡಳಿತದ ಮೇಲಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಹಾಗೂ ಶಿಕ್ಷಣ ಅಧಿಕಾರಿಗಳು ಕಾಲೇಜಿನ ಅಡುಗೆ ವ್ಯವಸ್ಥೆ ಮತ್ತು ಹಾಸ್ಟೆಲ್ ನಿರ್ವಹಣೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈ ಘಟನೆ ಕಾಲೇಜಿನ ಆಡಳಿತ ವೈಫಲ್ಯವನ್ನು ಬಯಲಿಗೆಳೆದಿದ್ದು, ವಿದ್ಯಾರ್ಥಿಗಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬರುತ್ತಿವೆ.

Jun 12, 2026 | 01:26 PM
206 0
ದೇಶಸೇವೆಗೆ ಸಜ್ಜಾದ ಹುಬ್ಬಳ್ಳಿಯ 11 ಅಗ್ನಿವೀರರಿಗೆ ಭವ್ಯ ಸನ್ಮಾನ

ದೇಶಸೇವೆಗೆ ಸಜ್ಜಾದ ಹುಬ್ಬಳ್ಳಿಯ 11 ಅಗ್ನಿವೀರರಿಗೆ ಭವ್ಯ ಸನ್ಮಾನ

ಹುಬ್ಬಳ್ಳಿ, ಜೂನ್ 12: ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿರುವ ಹುಬ್ಬಳ್ಳಿಯ 11 ಯುವ ಕ್ರೀಡಾಪಟುಗಳಿಗೆ ಹಾಗೂ ಅಲ್ಟ್ರಾ ಮ್ಯಾನ್ ಸದಾನಂದ ಅಮರಾಪುರ ಅವರಿಗೆ ನಗರದ ಶ್ರೀ ಕಾರುಣ್ಯ ಸ್ಪೋರ್ಟ್ಸ್ ಅಸೋಸಿಯೇಶನ್ ಮತ್ತು ಮಾತೃಸ್ವರೂಪಿ ಶ್ರೀಮತಿ ಗಂಗವ್ವ ಬಳ್ಳಾರಿ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅದ್ಧೂರಿ ಸನ್ಮಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯೆ ಸೀಮಾ ಸಿದ್ದು ಮೊಗಲಿಶೆಟ್ಟರ ಹಾಗೂ ಸಮಾಜಸೇವಕ ಸಿದ್ದು ಮೊಗಲಿಶೆಟ್ಟರ, ಯುವಕರು ಕ್ರೀಡೆ ಮತ್ತು ಶಿಸ್ತಿನ ಮೂಲಕ ದೇಶಸೇವೆಗೆ ಮುಂದಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಚಾರಿ ವಿಭಾಗದ ಎಸಿಪಿ ವೀರನಗೌಡ ಪಾಟೀಲ, ಸೇನೆಗೆ ಆಯ್ಕೆಯಾದ ಯುವಕರು ಸಮಾಜಕ್ಕೆ ಮಾದರಿಯಾಗಿದ್ದು, ಇತರ ಯುವಕರಿಗೂ ಸ್ಫೂರ್ತಿಯಾಗಲಿದ್ದಾರೆ ಎಂದು ಶ್ಲಾಘಿಸಿದರು. ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಅವರು ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಯುವಕರು ಈ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಗ್ನಿವೀರರ ಯಶಸ್ಸಿನ ಹಿಂದೆ ತರಬೇತುದಾರ ಮಹಾಂತೇಶ ಬಳ್ಳಾರಿ ಅವರ ಪರಿಶ್ರಮ ಮತ್ತು ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಉಚಿತ ಕ್ರೀಡಾ ಹಾಗೂ ರಕ್ಷಣಾ ಪಡೆಗಳ ತರಬೇತಿ ನೀಡುವ ಮೂಲಕ ಅವರು ಅನೇಕ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ.ಸನ್ಮಾನ ಸ್ವೀಕರಿಸಿದ ಅಗ್ನಿವೀರರು ತಮ್ಮ ಸಾಧನೆಗೆ ಕುಟುಂಬದ ಬೆಂಬಲ ಮತ್ತು ಮಹಾಂತೇಶ ಬಳ್ಳಾರಿ ಅವರ ಮಾರ್ಗದರ್ಶನವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ದೇಶದ ಗಡಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಸಂಕಲ್ಪವನ್ನೂ ವ್ಯಕ್ತಪಡಿಸಿದರು.ಈ ವೇಳೆ ಅಲ್ಟ್ರಾ ಮ್ಯಾನ್ ಸದಾನಂದ ಅಮರಾಪುರ ಮಾತನಾಡಿ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನದಿಂದ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ಯುವಕರಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ನಗರದ ಹಲವು ಗಣ್ಯರು, ಕ್ರೀಡಾಭಿಮಾನಿಗಳು, ಪಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. ಗೀತಾ ತಡಸದ ಕಾರ್ಯಕ್ರಮ ನಿರೂಪಿಸಿದರೆ, ಮುತ್ತಣ್ಣ ಸುರಪುರ ವಂದನಾರ್ಪಣೆ ನೆರವೇರಿಸಿದರು.

Jun 12, 2026 | 12:49 PM
149 0
ನಾಗರಿಕಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಿ: ಡಾ. ರಾಮ್ ಪ್ರಸಾತ್ ಮನೋಹರ

ನಾಗರಿಕಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಿ: ಡಾ. ರಾಮ್ ಪ್ರಸಾತ್ ಮನೋಹರ

ಧಾರವಾಡ, ಜೂ.11: ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಕುರಿತು ಸಮರ್ಪಕ ಮಾಹಿತಿ ಒದಗಿಸಿ ನಾಗರಿಕಸ್ನೇಹಿ ಆಡಳಿತಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಂಗಾರು ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ರೈತರಿಗೆ ಬೀಜ-ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸುವುದು, ಎಲ್ಲ ರೈತರನ್ನು ಫ್ರೂಟ್ಸ್ ಐಡಿ ನೋಂದಣಿಗೆ ಒಳಪಡಿಸುವುದು ಹಾಗೂ ಪರಿಹಾರ ವಿತರಣೆಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲೆಯ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳಗಳಿಂದ 35 ಗ್ರಾಮ ಪಂಚಾಯಿತಿಗಳ 56 ಗ್ರಾಮಗಳು ಪ್ರವಾಹದ ಅಪಾಯಕ್ಕೆ ಒಳಪಡುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ 71 ಕಾಳಜಿ ಕೇಂದ್ರಗಳು ಹಾಗೂ 6 ಗೋಶಾಲೆಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ 22 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ 45 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನು ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Jun 12, 2026 | 10:58 AM
15 0
ಕೆಎಂಸಿ ಆಸ್ಪತ್ರೆಯ ಡಿ-ಗ್ರೂಪ್ ಸಿಬ್ಬಂದಿಗಳ ಸಮಸ್ಯೆಗಳಿಗೆ ಸ್ಪಂದಿಸಿದ ಸಫಾಯಿ ಕರ್ಮಚಾರಿ ಸಂಘ

ಕೆಎಂಸಿ ಆಸ್ಪತ್ರೆಯ ಡಿ-ಗ್ರೂಪ್ ಸಿಬ್ಬಂದಿಗಳ ಸಮಸ್ಯೆಗಳಿಗೆ ಸ್ಪಂದಿಸಿದ ಸಫಾಯಿ ಕರ್ಮಚಾರಿ ಸಂಘ

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಹಾಗೂ ಬಡವರ ಬಂಧು ಆಸ್ಪತ್ರೆಯೆಂದು ಹೆಸರುವಾಸಿಯಾಗಿರುವ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ-ಗ್ರೂಪ್ ಸಿಬ್ಬಂದಿಗಳು ಹಲವು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವ ಆರೋಪ ಕೇಳಿಬಂದಿದೆ.ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಸಂಬಂಧಿಸಿದ ಏಜೆನ್ಸಿಯಿಂದ ಭವಿಷ್ಯ ನಿಧಿ (PF), ನೌಕರರ ರಾಜ್ಯ ವಿಮೆ (ESI), ಸಮರ್ಪಕ ವೇತನ ಸೇರಿದಂತೆ ಕಾನೂನುಬದ್ಧವಾಗಿ ದೊರೆಯಬೇಕಾದ ವಿವಿಧ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂದು ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಅನೇಕ ಸಿಬ್ಬಂದಿಗಳು ಆರ್ಥಿಕ ಹಾಗೂ ವೃತ್ತಿಪರ ಸಂಕಷ್ಟಗಳನ್ನು ಎದುರಿಸುವಂತಾಗಿದೆ.ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದಕ್ಕೆ ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಡಿ-ಗ್ರೂಪ್ ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿದ್ದು, ಅವರ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಆಸ್ಪತ್ರೆಯ ಕಾರ್ಯವೈಖರಿಯ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಿಬ್ಬಂದಿಗಳು ಅಭಿಪ್ರಾಯಪಟ್ಟಿದ್ದಾರೆ.ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಫಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಹುಬ್ಬಳ್ಳಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕ ಎಚ್.ಎಫ್. ಕಮ್ಮಾರ ಅವರನ್ನು ಭೇಟಿಯಾಗಿ ಸಿಬ್ಬಂದಿಗಳ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.ಸಭೆಯಲ್ಲಿ ಸಿಬ್ಬಂದಿಗಳಿಗೆ ಸಮರ್ಪಕ ವೇತನ, ಪಿಎಫ್, ಇಎಸ್‌ಐ ಸೇರಿದಂತೆ ಕಾನೂನುಬದ್ಧವಾಗಿ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಅಧಿಕಾರಿಗಳು ಸಿಬ್ಬಂದಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದಾಗಿ ಭರವಸೆ ನೀಡಿದರು.ಇನ್ನೂ ಮುಂದೆಯೂ ಸಿಬ್ಬಂದಿಗಳಿಗೆ ಸೂಕ್ತ ಸೌಲಭ್ಯಗಳು ದೊರೆಯದಿದ್ದಲ್ಲಿ, ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದು ಆಸ್ಪತ್ರೆ ಆಡಳಿತದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಸಫಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಹುಬ್ಬಳ್ಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Jun 12, 2026 | 09:39 AM
36 0
ಬಂಡೀಪುರದಲ್ಲಿ ವನ್ಯಜೀವಿ ಬೇಟೆ: ಇಬ್ಬರ ಬಂಧನ

ಬಂಡೀಪುರದಲ್ಲಿ ವನ್ಯಜೀವಿ ಬೇಟೆ: ಇಬ್ಬರ ಬಂಧನ

ಬಂಡೀಪುರ:ವನ್ಯಜೀವಿಗಳನ್ನು ಅಕ್ರಮವಾಗಿ ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೀಪುರ ವಿಶೇಷ ಕಾರ್ಯಪಡೆ (STF) ಸಿಬ್ಬಂದಿ ಬಂಧಿಸಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ STF ಅಧಿಕಾರಿಗಳು, ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಬೇಟೆಯಾಡಲು ಬಳಸುತ್ತಿದ್ದ ಕೋವಿ, ಜೀವಂತ ಗುಂಡುಗಳು ಹಾಗೂ ಇತರೆ ಬೇಟೆ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.ಆರೋಪಿಗಳು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆಗೆ ಸಂಚು ರೂಪಿಸಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ವನ್ಯಜೀವಿಗಳ ಬೇಟೆ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Jun 11, 2026 | 11:30 AM
27 0
ವಿದ್ಯುತ್‌ ಅವಘಡ ತಡೆಗೆ ಸಹಾಯವಾಣಿ ಲಭ್ಯ

ವಿದ್ಯುತ್‌ ಅವಘಡ ತಡೆಗೆ ಸಹಾಯವಾಣಿ ಲಭ್ಯ

ಮಳೆ-ಗಾಳಿಯಿಂದ ವಿದ್ಯುತ್‌ ಅವಘಡ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮದಾಂಡೇಲಿ-ಜೋಯಿಡಾ ತಾಲೂಕಿನ ಜನರಿಗಾಗಿ ಸಹಾಯವಾಣಿದಾಂಡೇಲಿ :ಮಳೆಗಾಲದಲ್ಲಿ ಎದುರಾಗುವ ವಿದ್ಯುತ್‌ ಅವಘಡ ತಡೆಯಲು ಹೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದಾಂಡೇಲಿ ಉಪವಿಭಾಗದ ದಾಂಡೇಲಿ ಹಾಗೂ ಜೋಯಿಡಾ ತಾಲೂಕಿಗೆ ಸಹಾಯವಾಣಿ ಲಭ್ಯವಿರಲಿದೆ ಎಂದು ತಿಳಿಸಿದೆ.  ಈ ಕುರಿತು ಪ್ರಕಟಣೆ ಹೊರಡಿಸಿರುವ ದಾಂಡೇಲಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರು, ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳ ಸಂಭವ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿಗಳು ಲಭ್ಯವಿರಲಿವೆ ಎಂದಿದ್ದಾರೆ. ದಾಂಡೇಲಿ ತಾಲೂಕಿನ ಡಾಂಡೇಲಿ ( ಸಿಎಂಸಿ ಏರಿಯಾ), ಅಂಬೇವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಖಾಧಿಕಾರಿಯ ನಂ 9480881764, 24x7 ಸಹಾಯವಾಣಿ 08284/231239 ಹಾಗೂ ಅಂಬೇವಾಡಿ, ಬಡಕಾನಶಿರಡಾ, ಅಂಬಿಕಾನಗರ ಮತ್ತು ಆಲೂರು ಗ್ರಾ.ಪಂ ವ್ಯಾಪ್ತಿಯ ಶಾಖಾಧಿಕಾರಿ ಸಂಖ್ಯೆ 9480881778 ಹಾಗೂ 220 ಕೆ.ವಿ ಸ್ವೀಕರಣಾ ಕೇಂದ್ರ ಅಂಬೇವಾಡಿ ಗ್ರೀಡ್‌ ಸಹಾಯವಾಣಿ ಸಂಖ್ಯೆ 9448491710, ಆಫೀಸ್‌ ನಂ 08284/295666ಗೆ ಸಂಪರ್ಕಿಸಬಹುದು. ಜೋಯಿಡಾ ತಾಲೂಕಿನ ಅವೇಡಾ, ಜಗಲಬೆಟ, ಶಿಂಗರಗಾಂವ್‌  ಗ್ರಾಮೀಣ ಶಾಖೆಯ ಶಾಖಾಧಿಕಾರಿ 9480881778, ಗಣೇಶಗುಡಿಯ 110 ಕೆ.ವಿ ವಿತರಣಾ ಕೇಂದ್ರ ಮೊ.ನಂ 8277891912, ನಾಗೋಡಾ, ನಂದಿಗದ್ದಾ, ಅಣಶಿ, ಪ್ರಧಾನಿ, ಜೋಯಿಡಾ, ಕಾತೇಲಿ, ಉಳವಿ, ಅವೇಡಾ(ಇಳವಾ), ಗಂಗೋಡಾ ಗ್ರಾ.ಪಂ ವ್ಯಾಪ್ತಿಯ ಶಾಖಾಧಿಕಾರಿ ನಂ 9480881779, ಜೋಯಿಡಾದ 33 ಕೆ.ವಿ ವಿತರಣಾ ಕೇಂದ್ರದ ಮೊ.ನಂ 9480883822. ರಾಮನಗರ ಶಾಖೆಯ  ರಾಮನಗರ, ಕ್ಯಾಸಲರಾಕ್‌, ಬಜರಾಕೊಣಂಗ, ಅಖೆತಿ, ಅಸು ಗ್ರಾ.ಪಂ ವ್ಯಾಪ್ತಿಯ ಶಾಖಾಧಿಕಾರಿ ಮೊ.ನಂ 9980151401, ಅನಮೋಡ್‌ 110 ಕೆ.ವಿ ವಿತರಣಾ ಕೇಂದ್ರದ ಮೊ.ನಂ 8277891915ಗೆ ಸಂಪರ್ಕಿಸಬಹುದು.  ಗಾಳಿ-ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದರೆ, ವಿದ್ಯುತ್‌ ಲೈನ್‌ ಮೇಲೆ ಮರ-ಗಿಡಗಳು ಬಿದ್ದಿದ್ದರೆ, ವಿದ್ಯುತ್‌ ತಂತಿ ತುಂಡಾಗಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಈ ಮೇಲಿನ ಸಹಾಯವಾಣಿಗಳ ಮೂಲಕ ಸಂಬಂಧಪಟ್ಟ ಶಾಖಾಧಿಕಾರಿಗಳ ಹಾಗೂ ಗ್ರಿಡ್‌ಗಳಿಗೆ ಸಂಪರ್ಕಿಸಬಹುದು. ಒಂದು ವೇಳೆ ಕಾರಣಾಂತರಗಳಿಂದ ಶಾಖಾಧಿಕಾರಿಗಳು ಸಂಪರ್ಕಕ್ಕೆ ಸಿಗದೇ ಇರುವ ಸಂದರ್ಭದಲ್ಲಿ ಹೆಸ್ಕಾಂನ 24x7 ಸಹಾಯವಾಣಿ ಸಂಖ್ಯೆ 1912ಗೆ ಅಥವಾ ಹೆಸ್ಕಾಂ ದಾಂಡೇಲಿ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್‌ ಅವರ ಮೊ.ನಂ 9448141725ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

Jun 11, 2026 | 07:46 AM
23 0
52 ವರ್ಷ ತುಂಬಿದ ಶಿವಕುಮಾರ ಮೇಟಿ ಅವರಿಗೆ ಜನ್ಮದಿನದ ಶುಭ ಹಾರೈಕೆ

52 ವರ್ಷ ತುಂಬಿದ ಶಿವಕುಮಾರ ಮೇಟಿ ಅವರಿಗೆ ಜನ್ಮದಿನದ ಶುಭ ಹಾರೈಕೆ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಉತ್ತರ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಮೇಟಿ ಅವರ 52ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳನ್ನು ಶ್ರೀ ವೀರಶೈವ ಲಿಂಗಾಯತ ವೇದಿಕೆ ಚಿಕ್ಕಬಾಣಾವರ ವತಿಯಿಂದ ಅವರ ಆಫೀಸಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.      ಇದೇ ಸಂದರ್ಭದಲ್ಲಿ    ಶ್ರೀ ವೀರಶೈವ ಲಿಂಗಾಯತರು ವೇದಿಕೆ ಚಿಕ್ಕಬಾಣವಾರ  ಅಧ್ಯಕ್ಷರು ಅಶೋಕ್ ಪಾಟೀಲ್  ಪ್ರಧಾನ ಕಾರ್ಯದರ್ಶಿ ಎಂ ಎಚ್ ಪಾಟೀಲ್, ಮೇಜರ್ ಮಲ್ಲಿಕಾರ್ಜುನ ಸ್ವಾಮಿ,  ಡಾ.ಸಂಗನಬಸಪ್ಪ ಬಿರಾದಾರ, ಕಿರಣ್ ಆಲೂರು, ಹಾಲಕ್ಕಿ ಸುರೇಶ್ ದೊಡ್ಮನಿ, ರಾಜೇಂದ್ರ ಕಣ್ಣೂರ, ಲತಾ ಕುಂದರಗಿ, ಸವಿತಾ, ಆರಾಧ್ಯ, ಶಿವಣ್ಣ, ಶಿವಕುಮಾರ್ ಮೇಷ್ಟ್ರು, ಕಾರ್ಮಿಕ ಮುಖಂಡರಾದ ಚನ್ನಕೇಶವ, ಸುರೇಶ್ ಬಿರಾದಾರ ಇನ್ನು ಅನೇಕ ಮುಖಂಡರು ಭಾಗವಹಿಸಿದ್ದರು.ವರದಿ, ಪಬ್ಲಿಕ್ ರೈಡ್ ದೇವರಾಜ್

Jun 10, 2026 | 12:31 PM
145 0