ಕರ್ನಾಟಕ News

Discover the latest headlines in this section.

" ಜಿಕೆ ಡಬ್ಲ್ಯೂ ಲೇಔಟ್ನಲ್ಲಿ ಶ್ರೀರಾಮ ನವಮಿ ಮತ್ತು ಬಸವ ಜಯಂತಿ ಆಚರಣೆ"

" ಜಿಕೆ ಡಬ್ಲ್ಯೂ ಲೇಔಟ್ನಲ್ಲಿ ಶ್ರೀರಾಮ ನವಮಿ ಮತ್ತು ಬಸವ ಜಯಂತಿ ಆಚರಣೆ"

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಬಸವಣ್ಣನವರು ಅನೇಕ ಜನಪರ, ಸಮಾಜ ಸುಧಾರಣೆ ಕ್ರಮ ಕೈಗೊಂಡು.'ಕಾಯಕವೇ ಕೈಲಾಸ' ವೆಂದು ಸಾರಿ, ಜನರಿಗೆ ದುಡಿದು ಬದುಕುವ ದಾರಿ ಮಾಡಿ ಕೊಟ್ಟಿದ್ದೇ ಬಸವಣ್ಣನವರು ಎಂದು ಶಾಸಕ ಎಸ್ ಮುನಿರಾಜು ಹೇಳಿದರು.ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಹರೀಶ್ ಅವರ ಮತ್ತು ಕುಟುಂಬಸ್ಥರ ನೇತೃತ್ವದಲ್ಲಿ ಜಿಕೆಡಬ್ಲ್ಯೂ ಲೇಔಟ್ ಸರ್ಕಲ್ ದಲ್ಲಿ ಶ್ರೀ ರಾಮ ನವಮಿ ಹಾಗೂ ಬಸವ ಜಯಂತಿ ಆಯೋಜಿಸಿದ್ದ ಸಂಬ್ರಮದಲ್ಲಿ ಶಾಸಕ ಎಸ್ ಮುನಿರಾಜು ಪಾಲ್ಗೊಂಡು ಬಸವಣ್ಣನವರ, ಶ್ರೀರಾಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಬಸವಣ್ಣನವರು ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆ, ಕಾಯಕ, ನಿಷ್ಠೆಯಿಂದ ನಂಬಿಕೆಯುಳ್ಳವರು ನಿಜವಾದ" ಶಿವಶರಣ" ಎಂದರು ಮತ್ತು ಇದೆ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಹರೀಶ್ ಅವರ ಹುಟ್ಟು ಹಬ್ಬದ ನಿಮಿತ್ತ ಅವರಿಗೆ ಶಾಲು ಹೊದಿಸಿ ಫಲಪುಷ್ಪದೊಂದಿಗೆ ಗೌರವಿಸಿ ಶುಭ ಹಾರೈಸಿ ಮಾತಾಡಿದರು. ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಹರೀಶ್ ಅವರ ಸುಪುತ್ರ ಸಂತೋಷ ಸರ್ವರಿಗೂ ಸ್ವಾಗತಿಸಿದರು.  ಇದೆ ವೇಳೆ ಮಾಜಿ ಪಾಲಿಕೆ ಸದಸ್ಯ, ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೆಚ್ ಎನ್ ಗಂಗಾಧರ್ ಮತ್ತು ಜನ ಪ್ರಿಯ ಸಮಾಜ ಸೇವಕ ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ ಸಂಗನ ಬಸಪ್ಪ ಬಿರಾದಾರ್ ಹರೀಶ್ ಅವರಿಗೆ ಶಾಲು ಹೊದಿಸಿ ಗೌರವಿಸಿ ಶುಭ ಹಾರೈಸಿದರು ನಂತರ ಮಾತನಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿನೇಶ್, ಕಂಪ್ಯೂಟರ್ ವಿಜಯ ಕುಮಾರ್, ಮೋಹನ್, ಮಲ್ಲೇಶ್ ಬಿ ಕೆ ಸುರೇಶ್ ದೊಡ್ಡಮನಿ, ಲೀಜನ್, ಲಕ್ಷ್ಮಣ್ಣ ಸೇರಿದಂತೆ ಆರ್ ಸಿ ಹರೀಶ್ ಅವರ ಅಪಾರ ಅಭಿಮಾನಿಗಳು ಮುಂತಾದವರು ಉಪಸ್ಥಿತರಿದ್ದರು.  ವರದಿ: ಪಬ್ಲಿಕ್ ರೈಡ್ ದೇವರಾಜ್

Apr 21, 2026 | 01:31 PM
57 0
ಬ್ಲಾಕ್ಬಸ್ಟರ್ ಸ್ಫೋಟ: ವಲಯ ಕಚೇರಿ ಸಂಖ್ಯೆ 10ರಲ್ಲಿ ಒಂದೇ ಅಲ್ಲ, ಹಲವು ಸೈಟ್ಗಳಿಗೆ ‘ಕೆಜೆಪಿ’ ಇಲ್ಲದೆ ‘ಎ ಖಾತಾ’!

ಬ್ಲಾಕ್ಬಸ್ಟರ್ ಸ್ಫೋಟ: ವಲಯ ಕಚೇರಿ ಸಂಖ್ಯೆ 10ರಲ್ಲಿ ಒಂದೇ ಅಲ್ಲ, ಹಲವು ಸೈಟ್ಗಳಿಗೆ ‘ಕೆಜೆಪಿ’ ಇಲ್ಲದೆ ‘ಎ ಖಾತಾ’!

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ ಸಂಖ್ಯೆ 10, ಹೆಗ್ಗೇರಿಯಲ್ಲಿ ಕರ್ನಾಟಕ ಯೋಜನಾ ಪ್ರಾಧಿಕಾರದ (ಕೆಜೆಪಿ) ಅನುಮೋದನೆಯಿಲ್ಲದೇ ‘ಎ ಖಾತಾ’ ಮಂಜೂರು ಮಾಡಿರುವ ಪ್ರಕರಣವು ಈಗ ನಾಟಕೀಯ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಕೇವಲ ಒಂದು ಲೇಔಟ್ಗೆ ಈ ರೀತಿ ಅಕ್ರಮ ‘ಎ ಖಾತಾ’ ನೀಡಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ನಮ್ಮ ತನಿಖೆಯಲ್ಲಿ *ಕೇವಲ ಒಂದಲ್ಲ, ಹಲವಾರು ಸೈಟ್/ಲೇಔಟ್ಗಳಿಗೂ* ಕೆಜೆಪಿ ಅನುಮತಿ ಇಲ್ಲದೇ ‘ಎ ಖಾತಾ’ ನೀಡಿರುವ ಹಗರಣ ಬೆಳಕಿಗೆ ಬಂದಿದೆ.ಮೊದಲಿಗೆ ಒಂದೇ ನಿರ್ದಿಷ್ಟ ಲೇಔಟ್ನ ವಿಚಾರವಾಗಿ ಸದ್ದಾಗಿತ್ತು. ಆದರೆ ಈಗ ಸಾಕ್ಷಿಗಳನ್ನು ಕಲೆ ಹಾಕಿದಾಗ, *ಕರ ಸುಲಿಗೆದಾರರು, ರೆವೆನ್ಯೂ ಅಧಿಕಾರಿಗಳು ಮತ್ತು ಸಹಾಯಕ ಆಯುಕ್ತರು ಸೇರಿ ನಡೆಸಿರುವ ದೊಡ್ಡ ಮಟ್ಟದ ಕಾರ್ಯಾಚರಣೆಯ ಒಂದು ಭಾಗವಾಗಿ* ಈ ಅಕ್ರಮಗಳು ನಡೆದಿರುವುದು ಪತ್ತೆಯಾಗಿದೆ.ಸ್ಟೋರಿಯ ಹಿಂದಿನ ‘ಕೈಚಳಕ’ ಮತ್ತು ‘ಪಾತ್ರಧಾರಿಗಳು’:ಈ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೂರು ಕೀಲಿಕೈ ಗುಂಪುಗಳಿವೆ:1. ಕರ ವಸುಲಿದಾರರು (Revenue Recovery Agents): ಸಾಮಾನ್ಯ ಜನರಿಂದ ಹಣ ವಸೂಲಿ ಮಾಡಿ, ಅಕ್ರಮವಾಗಿ ದಾಖಲೆಗಳನ್ನು ತಯಾರಿಸಿ ಕಚೇರಿಗೆ ಸಲ್ಲಿಸುವ ಈ ಗ್ಯಾಂಗ್ ಪ್ರಮುಖ ಕೊಂಡಿಯಾಗಿದೆ.2. ರೆವೆನ್ಯೂ ಅಧಿಕಾರಿಗಳು: ದಾಖಲೆಗಳಲ್ಲಿನ ಲೋಪದೋಷಗಳನ್ನು ಕಡೆಗಣಿಸಿ, ಅನುಮೋದನೆಗೆ ಹಸಿರು ನಿಶಾನೆ ತೋರಿದವರು.3. ಸಹಾಯಕ ಆಯುಕ್ತರು: ಅಂತಿಮವಾಗಿ ನಿಯಮಗಳನ್ನು ಮೀರಿ ‘ಎ ಖಾತಾ’ ಮಂಜೂರು ಮಾಡಿದ ಅಧಿಕಾರಿ.ಈ ತ್ರಿಕೋನ ಸಂಚಿನ ಸಂಪೂರ್ಣ ‘ಸ್ಟೋರಿ’ ಸಾಕ್ಷಿ ಸಮೇತ ಬಹಿರಂಗವಾಗಲಿದೆ.“ಈ ವಿಚಾರವನ್ನು ನಾವು ಸಾಕಷ್ಟು ದಿನಗಳಿಂದ ತನಿಖೆ ಮಾಡುತ್ತಿದ್ದೇವೆ. ಈಗ *ಸ್ಪಷ್ಟವಾದ ಸಾಕ್ಷ್ಯಾಧಾರಗಳು (documentary evidence)* ನಮ್ಮ ವಶಕ್ಕೆ ಬಂದಿವೆ. ಮುಂದಿನ ಕೆಲವೇ ದಿನಗಳಲ್ಲಿ, ಯಾರು, ಯಾವಾಗ, ಎಷ್ಟು ಹಣ ಪಡೆದುಕೊಂಡು, ಯಾವ ಸೈಟ್ಗಳಿಗೆ ಕೆಜೆಪಿ ಇಲ್ಲದೆ ‘ಎ ಖಾತಾ’ ನೀಡಲಾಗಿದೆ ಎಂಬುದರ ಸಂಪೂರ್ಣ ಪಟ್ಟಿಯನ್ನು ಸಹಿತ ಸಾರ್ವಜನಿಕವಾಗಿ ಹೊರಗೆಡಹಲಾಗುವುದು” ಎಂದು ಪ್ರಕರಣದ ತನಿಖೆಯಲ್ಲಿ ತೊಡಗಿರುವ ಮೂಲಗಳು ತಿಳಿಸಿವೆ.ಈ ಹಗರಣವು ಪಾಲಿಕೆಯ ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆ (KTCP Act), 1961ರ ಸೆಕ್ಷನ್ 14 ಮತ್ತು 17 ಸ್ಪಷ್ಟವಾಗಿ ನಿಯಮಗಳನ್ನು ವಿವರಿಸಿದೆ. ಇಷ್ಟಾದರೂ, ನಿಯಮವನ್ನು ಮೀರಿ ನಡೆಸಿಕೊಂಡ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಾನಗರ ಪಾಲಿಕೆ ಆಯುಕ್ತರ ಗಮನಕ್ಕೆ ಸಾಕ್ಷಿ ಸಮೇತ ಮನವಿ ಸಲ್ಲಿಸಲು ಸಿದ್ಧತೆ ನಡೆದಿದೆ. ಅಲ್ಲದೆ, ಭ್ರಷ್ಟ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಬೇಕು ಎಂಬ ಸಾರ್ವಜನಿಕರ ಆಕ್ರೋಶವೂ ಹೆಚ್ಚುತ್ತಿದೆ.

Apr 20, 2026 | 06:06 PM
54 0
“ಹೊಟ್ಟೆ ತುಂಬಿಸಿದ ಮಕ್ಕಳೇ ಮನೆಯಿಂದ ಎತ್ತಿಕಟ್ಟಿದರು; ಅಸಹಾಯಕ ತಾಯಿಯ ಮೊರೆ ಕೇಳದ ಪೊಲೀಸರು” – ಹೈಕೋರ್ಟ್ ಮೆಟ್ಟಿಲೇರಿದ ಹಿರಿಯ ನಾಗರಿಕೆ

“ಹೊಟ್ಟೆ ತುಂಬಿಸಿದ ಮಕ್ಕಳೇ ಮನೆಯಿಂದ ಎತ್ತಿಕಟ್ಟಿದರು; ಅಸಹಾಯಕ ತಾಯಿಯ ಮೊರೆ ಕೇಳದ ಪೊಲೀಸರು” – ಹೈಕೋರ್ಟ್ ಮೆಟ್ಟಿಲೇರಿದ ಹಿರಿಯ ನಾಗರಿಕೆ

ಧಾರವಾಡ, ಏಪ್ರಿಲ್ 21: ತಮ್ಮದೇ ಗಂಡು ಮಕ್ಕಳು "ವಾಟ್ನಿ" ಮಾಡಿಸಿಕೊಡುವ ನೆಪದಲ್ಲಿ ಆಸ್ತಿಯನ್ನೆಲ್ಲ ಲಪಟಾಯಿಸಿ, ಮನೆಯಿಂದ ಹೊರಹಾಕಿದ್ದಾರೆಂದು ಧಾರವಾಡದ ಜಯನಗರದ ಹಿರಿಯ ನಾಗರಿಕೆ ಶ್ರೀಮತಿ ಮೇಹರುನೀಸಾ ದಿವಾಲ್ದಾರ್ (65) ಆರೋಪಿಸಿದ್ದಾರೆ. ಪ್ರಸ್ತುತ ಹೆಣ್ಣು ಮಕ್ಕಳ ಮನೆಯಲ್ಲಿರುವ ಅವರಿಗೆ, ಗಂಡು ಮಕ್ಕಳು ಅಲ್ಲಿಗೂ ಬಂದು ಬೆದರಿಸಿ ‘ಜಾಗ ಖಾಲಿ ಮಾಡು’ ಎಂದು ಕಿರುಕುಳ ನೀಡುತ್ತಿದ್ದಾರೆ.ಪ್ರಕರಣ ಹೈಕೋರ್ಟ್ ವಿಚಾರಣೆಯಲ್ಲಿದ್ದರೂ, ಪುತ್ರರು ಆಸ್ತಿಯಲ್ಲಿ ಚಟುವಟಿಕೆ ಮುಂದುವರೆಸಿದ್ದಾರೆ. ಉಪನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪ್ರಯೋಜನವಾಗಿಲ್ಲ. “ದೂರು ದಾಖಲಿಸುವುದಿಲ್ಲ, ಅವರ ಪರವಾಗಿಯೇ ಮಾತಾಡುತ್ತಾರೆ” ಎಂದು ಮೇಹರುನೀಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಸ್ತಿ ವಿವರ ಮತ್ತು ವಂಚನೆಯ ಆರೋಪಶ್ರೀಮತಿ ಮೇಹರುನೀಸಾ ಅವರು ತಮ್ಮ ದೂರಿನಲ್ಲಿ ನಿರ್ದಿಷ್ಟವಾಗಿ ತಿಳಿಸಿರುವ ಪ್ರಕಾರ:ಆಸ್ತಿ ವಿಳಾಸ: ಧಾರವಾಡದ ಸಪ್ತಾಪುರ ಗ್ರಾಮದ ಮಿಚಿಗನ್ ಕಂಪೌಂಡ್, *ಸರ್ವೆ ನಂ. 59/ಎ/1* ರ ಪ್ಲಾಟ್ ನಂ. 17/ಎ (ಕ್ಷೇತ್ರ: 05 ಗುಂಟೆ)ಆಸ್ತಿಯ ಸ್ವರೂಪ: ಮೃತ್ಯು ಪತ್ರದ (Will) ಮೂಲಕ ತಮಗೆ ಮತ್ತು ತಮ್ಮ ಮಕ್ಕಳಿಗೆ ಜಂಟಿಯಾಗಿ ಬಂದಿರುವ ಸ್ಥಾವರ ಆಸ್ತಿ- *ವಂಚನೆಯ ದಿನಾಂಕ:* 11.09.2015 ರಂದು ಎದುರುದಾರರು ತಮಗೆ ಮತ್ತು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಯಾವುದೇ ಮಾಹಿತಿ ನೀಡದೆ, ಕತ್ತಲಲ್ಲಿಟ್ಟು, ಸಹಿಗಳನ್ನು ಬೇರೆ ಉದ್ದೇಶಕ್ಕೆಂದು ಪಡೆದು ನಕಲಿ ಮಾಡಿ *“ವಾಟ್ಟಿ ಪತ್ರ” (Partition Deed)* ಸೃಷ್ಟಿಸಿಕೊಂಡಿದ್ದಾರೆ (ದಸ್ತಾವೇಜು: DWR-1-05768-2015-16)- *ವಂಚನೆಯ ವಿಧಾನ:* ಒಂದು ಗುಂಟೆ ಜಾಗ ತನಗೆ ಬರುತ್ತದೆಂದು ಹೇಳಿ ಸ್ಥಾವರ ಆಸ್ತಿಯ ವಾಟ್ನಿ ಪತ್ರದೊಳಗೆ *ಬಕ್ಷಿಸ್ ಪತ್ರ* ಮಾಡಿ ಮೋಸ ಮಾಡಲಾಗಿದೆಈ ದಾಖಲೆಯಲ್ಲಿ ತನಗೆ ಸಲ್ಲಬೇಕಾದ ಪಾಲನ್ನು ಕಸಿದುಕೊಂಡು, ಆಸ್ತಿಯನ್ನು ಎದುರುದಾರರು ತಮ್ಮ ತಮ್ಮಲ್ಲೇ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇತ್ತೀಚೆಗೆ ಮಾಹಿತಿ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.ಪೊಲೀಸ್ ಇಲಾಖೆಯ ಪಾತ್ರವೇನು? – ಕಾನೂನು ಕಡ್ಡಾಯಗೊಳಿಸುವ ರಕ್ಷಣಾ ಕ್ರಮಗಳುಹಿರಿಯ ನಾಗರಿಕರ ಸುರಕ್ಷತೆಗಾಗಿ ಹಿರಿಯ ನಾಗರಿಕರು ಮತ್ತು ಪೋಷಕರ ಭರಣಪೋಷಣೆ ಹಾಗೂ ಕಲ್ಯಾಣ ಕಾಯಿದೆ-2007 ಪೊಲೀಸ್ ಇಲಾಖೆಗೆ ಹಲವಾರು ಕಡ್ಡಾಯ ಕರ್ತವ್ಯಗಳನ್ನು ವಿಧಿಸಿದೆ. ಶ್ರೀಮತಿ ಮೇಹರುನೀಸಾ ಅವರಂಥ ಸನ್ನಿವೇಶಗಳಲ್ಲಿ ಪೊಲೀಸರು ಈ ಕೆಳಗಿನ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ:1. ಕಡ್ಡಾಯ ದೂರು ದಾಖಲಾತಿ ಮತ್ತು ಕ್ರಿಮಿನಲ್ ಪ್ರಕರಣಮಕ್ಕಳಿಂದ ನಿರ್ಲಕ್ಷ್ಯ, ಕಿರುಕುಳ, ಆಸ್ತಿ ವಂಚನೆ ಅಥವಾ ಮನೆಯಿಂದ ಹೊರಹಾಕುವ ಪ್ರಯತ್ನ ನಡೆದಲ್ಲಿ, ಸಂಬಂಧಪಟ್ಟ ಪೊಲೀಸ್ ಠಾಣೆಯು ತಕ್ಷಣ ದೂರು ದಾಖಲಿಸಬೇಕು ಮತ್ತು ಕ್ರಿಮಿನಲ್ ಪ್ರಕರಣವನ್ನು ನೋಂದಾಯಿಸಬೇಕು. ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿರುವಂತೆ, ವಂಚನೆ ಅಥವಾ ನಕಲಿ ದಾಖಲೆ ಪ್ರಕರಣಗಳಲ್ಲಿ ಸಿವಿಲ್ ಮೊಕದ್ದಮೆಯ ಜೊತೆಗೆ ಕ್ರಿಮಿನಲ್ ದೂರು ಸಹ ಸಲ್ಲಿಸಬಹುದಾಗಿದೆ – ಸಿವಿಲ್ ನ್ಯಾಯಾಲಯವು ನಕಲಿ, ವಂಚನೆಯಂತಹ ಕ್ರಿಮಿನಲ್ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ.2. ನೋಡಲ್ ಅಧಿಕಾರಿ ನೇಮಕ (ಕಾಯಿದೆಯ ಪ್ರಮುಖ ಸೌಲಭ್ಯ)2019ರ ತಿದ್ದುಪಡಿ ಮಸೂದೆಯ ಪ್ರಕಾರ, ಪ್ರತಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕ (ASI) ಅಥವಾ ಮೇಲಿನ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ಈ ಅಧಿಕಾರಿಯು ಹಿರಿಯ ನಾಗರಿಕರ ಸಮಸ್ಯೆಗಳನ್ನು ಕೇಳಲು ಮತ್ತು ತ್ವರಿತ ಕ್ರಮ ಕೈಗೊಳ್ಳಲು ವಿಶೇಷ ಜವಾಬ್ದಾರಿಯುತನಾಗಿರುತ್ತಾನೆ.3. ಬಂಧನದ ಅಧಿಕಾರ (ಅರೆಸ್ಟ್ ವಿದೌಟ್ ವಾರಂಟ್)ಕಾಯಿದೆಯ ಸೆಕ್ಷನ್ 5 ರ ಅಡಿಯಲ್ಲಿ, ಹಿರಿಯ ನಾಗರಿಕರಿಂದ ಮಾಹಿತಿ ಪಡೆದ ನಂತರ, ಅಪರಾಧ ಎಸಗಿದ ವ್ಯಕ್ತಿಯನ್ನು ವಾರಂಟ್ ಇಲ್ಲದೆಯೇ ಬಂಧಿಸುವ ಅಧಿಕಾರ ಪೊಲೀಸರಿಗೆ ಇದೆ.4. ಹಿರಿಯರ ಮೇಲಿನ ದೈಹಿಕ/ಮಾನಸಿಕ ದೌರ್ಜನ್ಯಕ್ಕೆ ಶಿಕ್ಷೆ2019ರ ತಿದ್ದುಪಡಿ ಮಸೂದೆಯ ಪ್ರಕಾರ, ದುರುಪಯೋಗ (abuse) – ದೈಹಿಕ, ಮೌಖಿಕ, ಭಾವನಾತ್ಮಕ ಮತ್ತು ಆರ್ಥಿಕ ದುರುಪಯೋಗ – ಸಹ ಅಪರಾಧವಾಗಿದ್ದು, ಇದಕ್ಕೆ 6 ತಿಂಗಳ ಜೈಲು ಅಥವಾ ₹10,000 ದಂಡ ವಿಧಿಸಬಹುದು.5. ಮಾಸಿಕ ವರದಿ ಕಡ್ಡಾಯಹಿರಿಯ ನಾಗರಿಕರ ವಿರುದ್ಧ ನಡೆಯುವ ಅಪರಾಧಗಳಿಗಾಗಿ ಪೊಲೀಸ್ ಠಾಣೆಗಳು *ಪ್ರತ್ಯೇಕ ರಿಜಿಸ್ಟರ್ ಅನ್ನು ನಿರ್ವಹಿಸಬೇಕು*. ಈ ಅಪರಾಧಗಳ ಮಾಸಿಕ ವರದಿಯನ್ನು ಸಂಬಂಧಪಟ್ಟ ಜಿಲ್ಲಾ ಎಸ್ಪಿ ಅಥವಾ ಆಯುಕ್ತರಿಗೆ ಸಲ್ಲಿಸಬೇಕು.ಕಾನೂನಿನಲ್ಲಿ ಇಷ್ಟೆಲ್ಲಾ ಅವಕಾಶಗಳು ಇದ್ದರು ಸಹಿತ ಉಪ ನಗರ ಪೊಲೀಸ್ ಠಾಣೆಯಲ್ಲಿ ಶ್ರೀಮತಿ ಮೇಹರುನೀಸಾ ದಿವಾಲ್ದಾರ್ ಅವರ ದೂರು ದಾಖಲಿಸಲು ಹಿಂಜರಿಕೆ ಏಕೆ ಎಂಬುದು ತಿಳಿದುಬರದಹಾಗಿದೆ. ಶ್ರೀಮತಿ ಮೇಹರುನೀಸಾ ದಿವಾಲ್ದಾರ್ ಅವರ ಪ್ರಕರಣವು ಹಿರಿಯ ನಾಗರಿಕರ ರಕ್ಷಣೆಗೆ ಇರುವ ಕಾನೂನುಗಳ ಅಂತರವನ್ನು ಬಯಲಿಗೆಳೆದಿದೆ. ವಾಟ್ಟಿ ಪತ್ರವು ಸೆಕ್ಷನ್ 23 ರ ವ್ಯಾಪ್ತಿಯಿಂದ ಹೊರತಾಗಿದ್ದು, ಅವರು ಸಿವಿಲ್ ನ್ಯಾಯಾಲಯದ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಆದರೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರಾಕರಿಸಿರುವುದು ಮತ್ತು ಮಕ್ಕಳ ಪರವಾಗಿ ಮಾತನಾಡುತ್ತಿರುವುದು ಗಂಭೀರ ನಿರ್ಲಕ್ಷ್ಯವಾಗಿದೆ.ನ್ಯಾಯಮೂರ್ತಿ ಸುರಜ್ ಗೋವಿಂದರಾಜ್ ಅವರು ಸೂಚಿಸಿರುವಂತೆ: “ದುರ್ಬಲತೆ, ಅವಲಂಬನೆ ಮತ್ತು ನಂಬಿಕೆಯ ದುರುಪಯೋಗಕ್ಕೆ ಉದಾಸೀನತೆ ತೋರುವ ವಿಧಾನವು ಕಾಯಿದೆಯ ಉದ್ದೇಶವನ್ನು ಸೋಲಿಸುತ್ತದೆ. ಹಿರಿಯ ನಾಗರಿಕರ ರಕ್ಷಣೆಗೆ ಇರುವ ಕಾನೂನುಗಳನ್ನು ಕಾಗದದ ಮೇಲೆ ಮಾತ್ರ ಇರಿಸದೆ, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ.”

Apr 21, 2026 | 10:09 AM
552 0
ಪ್ರತಿಭಾ ಪುರಸ್ಕಾರ ಮತ್ತು ರೈತರಿಗೆ ಅಭಿನಂದನಾ ಸಮಾರಂಭ

ಪ್ರತಿಭಾ ಪುರಸ್ಕಾರ ಮತ್ತು ರೈತರಿಗೆ ಅಭಿನಂದನಾ ಸಮಾರಂಭ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ವಿದ್ಯಾರ್ಥಿಗಳು ಇತರರ ಏಳಿಗೆಯನ್ನು ಪ್ರೋತ್ಸಾಹಿಸಬೇಕು. ಅಸೂಯೆ ಪಡದೆ ಅವರಂತೆ ನಾವು ಕೂಡ ಹೆಚ್ಚು ಅಂಕ ಪಡೆದು ಸಮಾಜದಲ್ಲಿ ಕೀರ್ತಿ ತರಬೇಕು'ಎಂದು ಸೋಮನಹಳ್ಳಿ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಡಾ. ಆನಂದ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಭುವನೇಶ್ವರಿ ನಗರದ ಮಾಸ್ಟರ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರೈತರಿಗೆ ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು.ಪೋಷಕರು ತಮ್ಮ ಮಕ್ಕಳನ್ನು ಸ್ನೇಹಿತರಂತೆ ಭಾವಿಸಿ ಅವರಿಗೆ ಕಾಲೇಜಿನಲ್ಲಿ ನಡೆದ ಪಾಠ ಪ್ರವಚನದ ಬಗ್ಗೆ ವಿಚಾರಿಸಬೇಕು. ತಮ್ಮ ಮಕ್ಕಳು ಯಾವ ರೀತಿ ವಿದ್ಯಾಭ್ಯಾಸ ಮಾಡುತ್ತಾರೆ ಎಂಬುದರ ಬಗ್ಗೆ ಗಮನ ಹರಿಸಬೇಕು' ಎಂದು ತಿಳಿಸಿದರು.ಪ್ರಾಂಶುಪಾಲ ಮಲ್ಲಿಕಾರ್ಜುನ ಕೆ.ಎಸ್, ಮಾತನಾಡಿ,' ರೈತರ ಶ್ರಮ ವಿದ್ಯಾರ್ಥಿಗಳಿಗೆ ಅರಿವಾಗಲಿ, ಹಾಗೆಯೇ ಅವರಿಗೆ ಗೌರವ ಕೊಡುವುದನ್ನು ಕಲಿಯಲಿ ಎಂದು ವಿದ್ಯಾರ್ಥಿಗಳ ಮುಂದೆ ರೈತರಿಗೆ ಅಭಿನಯಿಸಲಾಯಿತು' ಎಂದು ತಿಳಿಸಿದರು.ರೈತ ಪಾಪಣ್ಣ ಮಾತನಾಡಿ' ನಮಗೆ ಅಭಿನಂದಿಸಿರುವುದು ಹೆಮ್ಮೆಯ ಸಂಗತಿ. ಯಾರೊಬ್ಬರೂ ರೈತರ ಬಗ್ಗೆ ಗಮನ ಹರಿಸುತ್ತಿರಲಿಲ್ಲ. ಇದು ಎಲ್ಲರಿಗೂ ಮಾದರಿಯಾಗಲಿ' ಎಂದರು.ಸಮಾರಂಭದಲ್ಲಿ ಶೇ. 95ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪದಕ, 10ಸಾವಿರ ನಗದು ಮತ್ತು ಸನ್ಮಾನ ಮಾಡಲಾಯಿತು. ಎನ್.ಜಿ. ಗಂಗಣ್ಣ, ಪಾಪಣ್ಣ, ಪ್ರಾಧ್ಯಾಪಕರು ಮುಂತಾದವರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Apr 21, 2026 | 04:16 AM
126 0
ಧಾರವಾಡ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಧಾರವಾಡ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು/ಧಾರವಾಡ, ಏಪ್ರಿಲ್ 17: ಬಿಜೆಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಗೌಡ ಅವರ ಭೀಕರ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿ ಅಪರಾಧಿಗಳಿಗೆ **ಜೀವಾವಧಿ ಶಿಕ್ಷೆ** ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು (ಶುಕ್ರವಾರ) ಮಹತ್ವದ ತೀರ್ಪು ಪ್ರಕಟಿಸಿದೆ. ತೀರ್ಪಿನ ಅಂಗವಾಗಿ ಪ್ರತಿಯೊಬ್ಬ ಅಪರಾಧಿಗೆ **ತಲಾ ₹30,000 ದಂಡ** ವಿಧಿಸಲಾಗಿದೆ.ಈ ಹಿಂದೆಯೇ ಬುಧವಾರದಂದು 17 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು, ಗುರುವಾರದ ವಾದ-ವಿವಾದದ ಬಳಿಕ ಇಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದರು.ಕೊಲೆ ಹಾಗೂ ಪಿತೂರಿಯಲ್ಲಿ ಗರಿಷ್ಠ ಶಿಕ್ಷೆನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ (IPC) **ಸೆಕ್ಷನ್ 302 (ಕೊಲೆ)** ಮತ್ತು **ಸೆಕ್ಷನ್ 120ಬಿ (ಅಪರಾಧಿಕ ಪಿತೂರಿ)** ಸೇರಿದಂತೆ ವಿವಿಧ ಗಂಭೀರ ಕಲಂಗಳ ಅಡಿಯಲ್ಲಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಈ ಮೂಲಕ ವಿರಳಾತಿವಿರಳ ಪ್ರಕರಣ ಎಂದು ಪರಿಗಣಿಸಲಾದ ಈ ಹತ್ಯಾ ಪ್ರಕರಣಕ್ಕೆ ದಶಕದ ಬಳಿಕ ನ್ಯಾಯಿಕ ಅಂತ್ಯ ಕಂಡಂತಾಗಿದೆ.ಪ್ರಕರಣದ ಹಿನ್ನೆಲೆ: 2016ರಲ್ಲಿ ನಡೆದ ಭೀಕರ ದುರಂತ2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿನ ಜಿಮ್ನಲ್ಲಿ ಯೋಗೀಶ್ ಗೌಡ ಅವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ತನಿಖೆಯ ವೇಳೆ, **ಭೂ ವಿವಾದ** ಮತ್ತು **ರಾಜಕೀಯ ವೈಮನಸ್ಸು** ಹಾಗೂ ಜಿಲ್ಲಾ ಪಂಚಾಯತ್ ಸಭೆಯಲ್ಲಿ ನಡೆದ ಮಾತಿನ ಚಕಮಕಿಯೇ ಈ ಕೊಲೆಗೆ ಕಾರಣ ಎಂಬುದು ಬಹಿರಂಗವಾಯಿತು. ಘಟನೆಯ ನಂತರ ರಾಜ್ಯದಲ್ಲಿ ಭಾರೀ ರಾಜಕೀಯ ಕೋಲಾಹಲ ಸೃಷ್ಟಿಯಾಗಿತ್ತು.ಸಿಬಿಐ ತನಿಖೆ ಮತ್ತು ಸುದೀರ್ಘ ಕಾನೂನು ಹೋರಾಟಪ್ರಕರಣದ ಗಂಭೀರತೆ ಹಾಗೂ ಆರೋಪಿಗಳ ಪ್ರಭಾವದ ಹಿನ್ನೆಲೆಯಲ್ಲಿ, ಸಂತ್ರಸ್ತ ಕುಟುಂಬದ ಒತ್ತಾಯದ ಮೇರೆಗೆ ಅಂದಿನ ಬಿಜೆಪಿ ಸರ್ಕಾರ 2019ರಲ್ಲಿ ಪ್ರಕರಣದ ತನಿಖೆಯನ್ನು **ಕೇಂದ್ರ ತನಿಖಾ ದಳಕ್ಕೆ (CBI)** ವಹಿಸಿತ್ತು. ಸಿಬಿಐ ನಡೆಸಿದ ವಿಸ್ತೃತ ತನಿಖೆಯಲ್ಲಿ ಹಲವು ಸಂಚುಕೋರರು ಹಾಗೂ ಸಹಚರರ ಪಾತ್ರ ಬೆಳಕಿಗೆ ಬಂದಿತ್ತು. ಸುಮಾರು 10 ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು ಅಂತಿಮವಾಗಿ ಈ ಮಹತ್ವದ ತೀರ್ಪು ನೀಡಿದೆ.ಶಾಸಕ ವಿನಯ್ ಕುಲಕರ್ಣಿ ಭವಿಷ್ಯದ ಮೇಲೆ ಪರಿಣಾಮಕಾನೂನು ತಜ್ಞರ ಪ್ರಕಾರ, 2 ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯಾಗಿರುವುದರಿಂದ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 8(4)ರ ಅನ್ವಯ ವಿನಯ್ ಕುಲಕರ್ಣಿ ಅವರ **ಶಾಸಕ ಸ್ಥಾನವು ತಕ್ಷಣದಿಂದ ಅನರ್ಹ**ಗೊಳ್ಳಲಿದೆ. ಅಲ್ಲದೆ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.ಆದಾಗ್ಯೂ, ತೀರ್ಪಿನ ನಂತರ ಮಾತನಾಡಿದ ವಿನಯ್ ಕುಲಕರ್ಣಿ ಪರ ವಕೀಲರು, "ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ **ಕರ್ನಾಟಕ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ**. ನಮ್ಮಲ್ಲಿ ಸಾಕಷ್ಟು ನ್ಯಾಯಿಕ ಆಧಾರಗಳಿವೆ" ಎಂದು ತಿಳಿಸಿದ್ದಾರೆ.ಧಾರವಾಡದಲ್ಲಿ ಭದ್ರತೆ ಬಿಗಿತೀರ್ಪು ಹೊರಬೀಳುತ್ತಿದ್ದಂತೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ **ಧಾರವಾಡ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ**. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಧಾರವಾಡ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

Apr 17, 2026 | 12:54 PM
211 0
ಯೋಗೇಶ್ ಗೌಡರ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳ ಶಿಕ್ಷೆಯ ಪ್ರಮಾಣ ಇಂದು ಪ್ರಕಟ

ಯೋಗೇಶ್ ಗೌಡರ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳ ಶಿಕ್ಷೆಯ ಪ್ರಮಾಣ ಇಂದು ಪ್ರಕಟ

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡರ ಕೊಲೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಇಂದು (ಶುಕ್ರವಾರ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ .ನ್ಯಾಯಾಲಯವು ಈಗಾಗಲೇ ಬುಧವಾರ (ಏ.15) ಈ ಪ್ರಕರಣದ 17 ಆರೋಪಿಗಳನ್ನು ಕೊಲೆ, ಅಪರಾಧಿಕ ಸಂಚು, ಸಾಕ್ಷ್ಯನಾಶ ಮತ್ತು ಅಕ್ರಮ ಕೂಟದ ಆರೋಪಗಳಡಿ ದೋಷಿಗಳೆಂದು ತೀರ್ಪು ನೀಡಿತ್ತು . ತೀರ್ಪಿನ ಬಳಿಕ ಎಲ್ಲ 17 ಅಪರಾಧಿಗಳನ್ನು ಸಿಬಿಐ ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು .ಶಿಕ್ಷೆಯ ಪ್ರಮಾಣದ ಮೇಲೆ ನಡೆದ ವಾದ-ವಿವಾದಗುರುವಾರ ನಡೆದ ವಿಚಾರಣೆಯಲ್ಲಿ, ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಶಿಕ್ಷೆಯ ಪ್ರಮಾಣ ನಿರ್ಧರಿಸುವ ಮುನ್ನ ಅಪರಾಧಿಗಳ ಅಂತಿಮ ಹೇಳಿಕೆಗಳನ್ನು ಆಲಿಸಿದರು .ಸಿಬಿಐ ಪರ ವಿಶೇಷ ಅಭಿಯೋಜಕರು ವಾದ ಮಂಡಿಸಿ, "ಇದು ವಿರಳಾತಿ ವಿರಳ ಪ್ರಕರಣವಾಗಿದ್ದು, ಉದ್ದೇಶಪೂರ್ವಕವಾಗಿ ನಡೆದ ಭೀಕರ ಹತ್ಯೆಯಾಗಿದೆ. ಅಪರಾಧಿಗಳಿಗೆ ಯಾವುದೇ ವಿನಾಯಿತಿ ನೀಡದೆ ಕಠಿಣಾತಿ ಕಠಿಣ ಶಿಕ್ಷೆಯಾದ ಜೀವಾವಧಿ ಶಿಕ್ಷೆ ವಿಧಿಸಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು" ಎಂದು ಕೋರಿದರು .ಇದೇ ವೇಳೆ, ಕಾನೂನಿನ ತತ್ವಗಳಿಗೆ ಅನುಗುಣವಾಗಿ ಗರಿಷ್ಠ ಶಿಕ್ಷೆಗೆ ವಿನಾಯಿತಿ ಕೋರಿ ಅಪರಾಧಿಗಳು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಶಾಸಕ ವಿನಯ್ ಕುಲಕರ್ಣಿ ಭಾವುಕರಾಗಿ, "ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ನೀಡಿಲ್ಲ. ಮದುವೆ ವಯಸ್ಸಿಗೆ ಬಂದಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ಕೇಸ್ ಹಾಕಲಾಗಿದೆ. ನಾನೊಬ್ಬ ಕೃಷಿಕ, ನನ್ನ ಮೇಲೆ ಅವಲಂಬಿತರಾದವರಿದ್ದಾರೆ" ಎಂದು ಕಣ್ಣೀರಿಟ್ಟು ಕಡಿಮೆ ಶಿಕ್ಷೆಗಾಗಿ ಮನವಿ ಮಾಡಿದರು .ಶಿಕ್ಷೆಯ ಪ್ರಮಾಣದ ಕುತೂಹಲಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಅಪರಾಧಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣದ ಬಗ್ಗೆ ಭಾರೀ ಕುತೂಹಲ ಮನೆ ಮಾಡಿದೆ. ಅವರನ್ನು ಐಪಿಸಿಯ ಸೆಕ್ಷನ್ 302 (ಕೊಲೆ), 120ಬಿ (ಅಪರಾಧಿಕ ಸಂಚು), 201 (ಸಾಕ್ಷ್ಯ ನಾಶ) ಹಾಗೂ 148 ಮತ್ತು 149ರ ಅಡಿಯಲ್ಲಿ ದೋಷಿಗಳೆಂದು ನಿರ್ಣಯಿಸಲಾಗಿದೆ .ಕಾನೂನು ತಜ್ಞರ ಪ್ರಕಾರ, ನ್ಯಾಯಾಲಯವು 2 ವರ್ಷಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆ ವಿಧಿಸಿದರೆ, ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4)ರ ಅನ್ವಯ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವು ತಕ್ಷಣದಿಂದ ಅನರ್ಹಗೊಳ್ಳಲಿದೆ. ಅಲ್ಲದೆ, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ . ಆದಾಗ್ಯೂ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವರಿಗೆ 90 ದಿನಗಳ ಕಾಲಾವಕಾಶವಿದ್ದು, ಮೇಲಿನ ನ್ಯಾಯಾಲಯ ಶಿಕ್ಷೆಗೆ ತಡೆ ನೀಡಿದರೆ ಶಾಸಕತ್ವ ಅನರ್ಹತೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ .ಪ್ರಕರಣದ ಹಿನ್ನೆಲೆ2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿನ ಜಿಮ್ನಲ್ಲಿ ಯೋಗೇಶ್ ಗೌಡ ಅವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕುಡಿಯುವ ನೀರಿನ ವಿಚಾರವಾಗಿ ಜಿಲ್ಲಾ ಪಂಚಾಯತ್ ಸಭೆಯಲ್ಲಿ ವಿನಯ್ ಕುಲಕರ್ಣಿ ಮತ್ತು ಯೋಗೇಶ್ ಗೌಡರ ನಡುವೆ ನಡೆದ ಮಾತಿನ ಚಕಮಕಿಯೇ ಕೊಲೆಗೆ ಕಾರಣ ಎನ್ನಲಾಗಿದೆ . 2019ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಸುಮಾರು 10 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯ ತನ್ನ ತೀರ್ಪು ನೀಡಿದೆ .

Apr 17, 2026 | 04:43 AM
191 0
ಬೆಳಗಾವಿ ನ್ಯಾಯಾಲಯದ ಆವರಣದಲ್ಲಿ ಸೆನ್ಸೇಷನ್: ಶಹಬಾಜ್ ಪಠಾಣ್ ಕೊಲೆ ಪ್ರಕರಣದ ಆರೋಪಿಗಳಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ, ಕ್ಯಾಮೆರಾ ನಾಶಕ್ಕೆ ಯತ್ನ

ಬೆಳಗಾವಿ ನ್ಯಾಯಾಲಯದ ಆವರಣದಲ್ಲಿ ಸೆನ್ಸೇಷನ್: ಶಹಬಾಜ್ ಪಠಾಣ್ ಕೊಲೆ ಪ್ರಕರಣದ ಆರೋಪಿಗಳಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ, ಕ್ಯಾಮೆರಾ ನಾಶಕ್ಕೆ ಯತ್ನ

ಬೆಳಗಾವಿ: ಶಹಬಾಜ್ ಪಠಾಣ್ ಕೊಲೆ ಪ್ರಕರಣದ ಸಂಚಲನಕಾರಿ ವಿಚಾರಣೆ ಬಳಿಕ ಆರೋಪಿಗಳು ನ್ಯಾಯಾಲಯದ ಆವರಣದಲ್ಲಿಯೇ ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಿ, ಅವರ ಕ್ಯಾಮೆರಾವನ್ನು ಪುಡಿಪುಡಿ ಮಾಡಲು ಯತ್ನಿಸಿರುವ ಘಟನೆ ಬುಧವಾರ ನಡೆದಿದೆ. ಈ ಘಟನೆಯ ವಿಡಿಯೋ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುದ್ದಿ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.ಬೆಳಗಾವಿ ನ್ಯಾಯಾಲಯದ ಸಂಕೀರ್ಣದಲ್ಲಿ ಶಹಬಾಜ್ ಪಠಾಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ಮುಗಿದ ನಂತರ ಅವರನ್ನು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲು ಪ್ರಾರಂಭಿಸಿದಾಗ ಅವರು ಗಲಾಟೆ ಮಾಡಲು ಆರಂಭಿಸಿದರು. ಈ ವೇಳೆ ಸ್ಥಳೀಯ ಮಾಧ್ಯಮದ ಕ್ಯಾಮೆರಾಮನ್ ಅವರು ಘಟನೆಯನ್ನು ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಲು ಮುಂದಾದರು.ಇದನ್ನು ಕಂಡ ಆರೋಪಿಗಳು ರೇಗಾಡಿದರು. ಕ್ಯಾಮೆರಾಮನ್ ಕೈಯಲ್ಲಿದ್ದ ಕ್ಯಾಮೆರಾವನ್ನು ಪುಡಿಪುಡಿ ಮಾಡಲು ಯತ್ನಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ನಿಗ್ರಹಿಸಿ ಕ್ಯಾಮೆರಾಮನ್ ಅವರನ್ನು ರಕ್ಷಿಸಿದರು.ಹಲ್ಲೆಗೆ ಒಳಗಾದ ಕ್ಯಾಮೆರಾಮನ್ ಮಾತನಾಡಿ, "ನಾನು ಕರ್ತವ್ಯದಲ್ಲಿದ್ದು ನ್ಯಾಯಾಲಯದ ಆದೇಶದಂತೆಯೇ ಚಿತ್ರೀಕರಣ ನಡೆಸುತ್ತಿದ್ದೆ. ಆದರೆ ಆರೋಪಿಗಳು ನನ್ನನ್ನು ಬೆದರಿಸಿ ಕ್ಯಾಮೆರಾ ಮುರಿದಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಇಂಥ ಕೃತ್ಯ ನಡೆದಿರುವುದು ದುರದೃಷ್ಟಕರ. ತಕ್ಷಣ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಹಬಾಜ್ ಪಠಾಣ್ ಕೊಲೆ ಪ್ರಕರಣದ ಆರೋಪಿಗಳ ಈ ಹಿಂಸಾತ್ಮಕ ವರ್ತನೆ ಕಾನೂನು ಮತ್ತು ಸುವ್ಯವಸ್ಥೆಯ ಮೇಲಿನ ಗಂಭೀರ ಪ್ರಶ್ನೆಯನ್ನು ಎತ್ತಿದೆ. ಈ ಘಟನೆ ಮಾಧ್ಯಮ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಸುರಕ್ಷತೆಯ ಬಗ್ಗೆ ಚರ್ಚೆಗೆ ವಿಷಯವಾಗಿದೆ.

Apr 16, 2026 | 11:58 AM
76 0
ರೋಹಿಣಿ ವಿರುದ್ಧದ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

ರೋಹಿಣಿ ವಿರುದ್ಧದ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ/ಬೆಂಗಳೂರು: ಪರಿಸರ ಸ್ನೇಹಿ ಬಟ್ಟೆಯ ಕೈಚೀಲಗಳ ಖರೀದಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ಆರೋಪದ ಮೇರೆಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ದೀಪಂಕರ ದತ್ತ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಸೋಮವಾರ ಈ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ. ರೋಹಿಣಿ ಸಿಂಧೂರಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಈ ಆದೇಶವನ್ನು ನೀಡಲಾಗಿದೆ.ಪ್ರಕರಣದ ಪ್ರತಿವಾದಿಗಳಾದ ಕರ್ನಾಟಕ ಸರ್ಕಾರ ಮತ್ತು ಎನ್.ಆರ್. ರವಿಚಂದ್ರೇಗೌಡ ಅವರಿಗೆ ನ್ಯಾಯಪೀಠವು ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆ ವೇಳೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.ಹೈಕೋರ್ಟ್ನ ಆದೇಶದ ಮೂಲಕ ರೋಹಿಣಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಸೂಚಿಸಲಾಗಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್ನ ತಡೆಯಾಜ್ಞೆಯಿಂದಾಗಿ ಆ ತನಿಖೆ ಪ್ರಕ್ರಿಯೆಗೆ ಮೊದಲ ಹಂತದಲ್ಲೇ ತಡೆಯೊಡ್ಡಿದಂತಾಗಿದೆ.ವರದಿ: ಪಬ್ಲಿಕ್ ರೈಡ್ ದೇವರಾಜ್

Apr 16, 2026 | 05:29 AM
227 0
ಅಸ್ಪೃಶ್ಯತಾ ಏಕತೆಗೆ ಹೋರಾಡಿದ ಮಹಾನ್ ಚೇತನ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ - ಡಾ. ಸಂಗನ ಬಸಪ್ಪ ಬಿರಾದಾರ್

ಅಸ್ಪೃಶ್ಯತಾ ಏಕತೆಗೆ ಹೋರಾಡಿದ ಮಹಾನ್ ಚೇತನ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ - ಡಾ. ಸಂಗನ ಬಸಪ್ಪ ಬಿರಾದಾರ್

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ಏಕತೆಗೆ ಹೋರಾಡಿದ ಮಹಾನ್ ಚೇತನ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ಮತ್ತು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಗನ ಬಸಪ್ಪ ಬಿರಾದಾರ್ ಹೇಳಿದರು.ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಮುಖ್ಯ ರಸ್ತೆ ಬಸ್ ನಿಲ್ದಾಣ ಹತ್ತಿರ ಡಾ ‌ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಉಮೇಶ್ ಗೌಡ ರಾವಣ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಮೆರವಣಿಗೆಗೆ ತಯಾರಿಯಾಗಿ ನಿಂತಿರುವ ಬೆಳ್ಳಿ ರಥ ವಾಹನಕ್ಕೆ ಚಾಲನೆ ನೀಡಿ ಡಾ. ಬಿರಾದಾರ್ ನೆನದ್ದಿದ ಜನರನ್ನು ಉದ್ದೇಶಿಸಿ ಮಾತನಾಡಿದರು.ಜನ ವಿಕಾಸ ಕೋ ಆಪರೇಟಿವ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ದಯಾನಂದ್ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ವಾಣಿಗಳನ್ನು ಮನುಷ್ಯನ ಬದುಕಿಗೆ ಪ್ರೇರಣೆ ಎಂದು ಡಾ. ಬಿ ಆರ್ ಅಂಬೇಡ್ಕರ್ ಅವರ ಬಾಲ್ಯ ಜೀವನ ಅವರ ಕೊಡಿಗೆ ಬಗ್ಗೆ ಎಳೆ ಎಳೆಯಾಗಿ ಸಾರ್ವಜನಿಕರಿಗೆ ತಿಳಿಸಿ ಕೊಟ್ಟರು.  ಡಾ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಉಮೇಶ್ ಗೌಡ ಸರ್ವರಿಗೂ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ವೇದಿಕೆಯ ಪದಾಧಿಕಾರಿಗಳು ಸದಸ್ಯರು, ಕಾರ್ಮಿಕ ಸಂಘಟನೆಯ ಮುಖಂಡ ಚೆನ್ನಕೇಶವ, ಇಸ್ಲಾಂ ಸಮಾಜದ ಯುವ ಮುಖಂಡ ಇಮಾಮ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಹಿಳೆಯರು ಕಾರ್ಯಕರ್ತರು ಸಮಸ್ತ ನಾಗರಿಕ ಬಂಧು ಭಗನಿಯರು ಉಪಸ್ಥಿತರಿದ್ದರು. ವರದಿ : ಪಬ್ಲಿಕ್ ರೈಡ್ ದೇವರಾಜ್

Apr 15, 2026 | 07:55 AM
85 0
ದ್ವಿತೀಯ ಪಿಯುಸಿ ಫಲಿತಾಂಶ: ಇಶಾನ್ ಬಿ.ಆರ್ ಅವರಿಗೆ ರಾಜ್ಯದ 8ನೇ ರ್ಯಾಂಕ್

ದ್ವಿತೀಯ ಪಿಯುಸಿ ಫಲಿತಾಂಶ: ಇಶಾನ್ ಬಿ.ಆರ್ ಅವರಿಗೆ ರಾಜ್ಯದ 8ನೇ ರ್ಯಾಂಕ್

ಪಬ್ಲಿಕ್ ರೈಡ್ ನ್ಯೂಸ್, ಪೀಣ್ಯ-ದಾಸರಹಳ್ಳಿ:ಹಾವನೂರು ಸೌಂದರ್ಯ ಪಿಯು ಕಾಲೇಜಿನ ವಿದ್ಯಾರ್ಥಿ ಇಶಾನ್ ಬಿ.ಆರ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಒಟ್ಟು 600 ಅಂಕಗಳಿಗೆ 591 ಅಂಕಗಳನ್ನು (ಶೇ. 98.50) ಗಳಿಸಿ ರಾಜ್ಯ ಮಟ್ಟದಲ್ಲಿ ಎಂಟನೇ ರ್ಯಾಂಕ್ ಪಡೆದುಕೊಂಡಿದ್ದಾರೆ.ಇಶಾನ್ ಅವರ ಈ ಸಾಧನೆಯಿಂದ ತಾವು ಓದಿದ ಕಾಲೇಜಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಯ ಶ್ರದ್ಧೆ, ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನಕ್ಕೆ ಈ ಯಶಸ್ಸು ಸಾಕ್ಷಿಯಾಗಿದೆ.ಕಾಲೇಜಿನ ವತಿಯಿಂದ ಇಶಾನ್ ಅವರನ್ನು ಅಭಿನಂದಿಸಲಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಲಾಗಿದೆ.ವರದಿ: ಪಬ್ಲಿಕ್ ರೈಡ್, ದೇವರಾಜ್

Apr 15, 2026 | 06:10 AM
121 0
ಕಣಗಲಾ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ

ಕಣಗಲಾ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ

ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಇಂದು (14-04-2026) ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮ ಪಂಚಾಯತ್ ಕಚೇರಿ, ಸರ್ಕಾರಿ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಲಕರ ವಸತಿ ನಿಲಯ ಹಾಗೂ ತಲಾಠಿ ಕಚೇರಿಗಳಲ್ಲಿ ಕಾರ್ಯಕ್ರಮಗಳು ನಡೆದವು.ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸೂಚಿಸಿದರು. ಸಮಾನತೆ ಮತ್ತು ನ್ಯಾಯದ ಸಂದೇಶ ಸಾರುವ ಈ ದಿನದ ಮಹತ್ವವನ್ನು ಎಲ್ಲರೂ ಒತ್ತಿ ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಪತ್ರಕರ್ತರು ಭಾಗವಹಿಸಿದರು.ಬೆಳಗಾವಿ ವರದಿಗಾರರು: ಸಂತೋಷ ನಿರ್ಮಲೆ

Apr 14, 2026 | 12:21 PM
150 0